ಪುಂಜಾಲಕಟ್ಟೆ: ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜು ಪುಂಜಾಲಕಟ್ಟೆ, ಇದರ ರಾಷ್ಟ್ರೀಯ ಸೇವಾ ಯೋಜನೆ ಘಟಕ 1 ಮತ್ತು 2 ಮತ್ತು ನಿರ್ವಹಣಾ ಶಾಸ್ತ್ರ ವಿಭಾಗದ ಜಂಟಿ ಆಶ್ರಯದಲ್ಲಿ ನೇಜಿ ನಾಟಿ ಪ್ರಾತ್ಯಕ್ಷತೆ ಮತ್ತು ಗ್ರಾಮೀಣ ಕ್ರೀಡೆಯನ್ನು ಶ್ರೀ ಬಾಲಸುಬ್ರಹ್ಮಣ್ಯ ದೇವಸ್ಥಾನ ಮಡವು ಇದರ ವಠಾರದ ಗದ್ದೆಯಲ್ಲಿ ಆಯೋಜಿಸಲಾಗಿತ್ತು.
ನೇಜಿ ನೆಡುವಾಗ ಹಾಡುವ ಪಾಡ್ದನಗಳ ಮೂಲಕ ಸ್ವಯಂಸೇವಕರು ಹಿರಿಯ ರೈತಾಪಿ ಜನರೊಂದಿಗೆ ಬೆರೆತು ನೇಜಿ ನೆಟ್ಟರು ಮತ್ತು ಗ್ರಾಮೀಣ ಕ್ರೀಡೆಯನ್ನು ಆಡಿದರು. ಈ ಕಾರ್ಯಕ್ರಮಕ್ಕೆ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ ಟಿ.ಕೆ. ಶರತ್ ಕುಮಾರ್ ಇವರು ಮಾರ್ಗದರ್ಶನವನ್ನು ಮತ್ತು ಗದ್ದೆಯನ್ನು ನೇಜಿ ನೆಡಲು ಶ್ರೀ ಸಂತೋಷ್ ಇವರು ಸಹಕಾರವನ್ನು ನೀಡಿದರು.
ಈ ಕಾರ್ಯಕ್ರಮದಲ್ಲಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಅಧಿಕಾರಿ ಸಂತೋಷ್ ಪ್ರಭು ಎಂ ಮತ್ತು 50 ಮಂದಿ ಸ್ವಯಂಸೇವಕರು ಭಾಗವಹಿಸಿದ್ದರು.