ಬೆಂಗಳೂರು: ನಗರದ ಕುಮಾರಸ್ವಾಮಿ ಲೇಔಟ್ ಹೋಟೆಲ್ ದ್ವಾರಕಾ ಗ್ರ್ಯಾಂಡ್ ನಲ್ಲಿ ಯುವ ಲೇಖಕಿ ಅಧ್ಯಾತ್ಮ ಚಿಂತಕಿ ನೀತು ಗೌಡರವರು ಬರೆದಿರುವ ಐ ಒನ್ಸ್ ಲಿವ್ಡ್ ಕೃತಿಯನ್ನು ಚಿತ್ರನಿರ್ದೇಶಕ ಇಂದ್ರಜಿತ್ ಲಂಕೇಶ್ ಬಿಡುಗಡೆಗೊಳಿಸಿದರು.
ಸ್ವಾಮೀಜಿ ಗ್ರೂಪ್ಸ್ ಇಂಟರ್ನ್ಯಾಷನಲ್ ಅಧ್ಯಕ್ಷ ಗಾನ ಶ್ರವಣ್, ಕನ್ನಡ ಸಾಹಿತ್ಯ ಪರಿಷತ್ ನ ಮಾಧ್ಯಮ ಸಲಹೆಗಾರ ಶ್ರೀನಾಥ ಜೋಶಿ, ಹಿರಿಯ ಪತ್ರಕರ್ತ ಹನುಮೇಶ್ ಯಾವಗಲ್, ಸಂಸ್ಕೃತಿ ಚಿಂತಕ ಡಾ.ಗುರುರಾಜ ಪೋಶೆಟ್ಟಿಹಳ್ಳಿ ಹಾಗೂ ವಿದುಷಿ ಶೋಭಾ ಲೋಲನಾಥ್ ವೇದಿಕೆಯಲ್ಲಿದ್ದರು. ಜೀವಿಯ ನಿಧನ ನಂತರದ ಆತ್ಮದ ಜೊತೆಯ ಸಂಭಾಷಣೆಯ ಕುರಿತು ರೋಚಕ ಅನುಭವಗಳನ್ನು ಈ ಕೃತಿಯಲ್ಲಿ ಲೇಖಕಿ ದಾಖಲಿಸಿದ್ದಾರೆ.
ಇದೇ ಸಂದರ್ಭದಲ್ಲಿ ಡಾ ಗುರುರಾಜ ಪೋಶೆಟ್ಟಿಹಳ್ಳಿ ಅವರು ತಮ್ಮ 'ಸತ್ಸಂಗ ಸಂಪದ' ಕೃತಿಯನ್ನು ಇಂದ್ರಜಿತ್ ಲಂಕೇಶ್ ರವರಿಗೆ ನೀಡಿದರು.