ಸಾಗರದಿ ಮುಳುಗುತಿಹ ರವಿಯನ್ನು ಕಾಣುತಲಿ
ಸ್ವರ್ಗವೇ ಭುವಿಗಿಳಿದಂತೆ ತೋಷವೇ ತುಂಬುತಿದೆ
ಬಾನಲ್ಲಿ ಕಲಸಿರುವ ಚೆಲು ಬಣ್ಣದೆಡೆಯಲ್ಲಿ
ಇಣುಕುತಲಿ ಬರುತಿಹನು ರಾತ್ರಿ ರಾಜ
ಕಡಲಿನಾ ತಡಿಯಲ್ಲಿ ಕುಳಿತಿರಲು ಈ ಹೊತ್ತು
ಯುಗವೊಂದು ಕ್ಷಣವಾಗಿ ಮೈಮನಕೆ ಪುಳಕ
ಅಬ್ಬರಿಸಿ ಬೊಬ್ಬಿಡುವ ಅಲೆಗಳ ನಾಟ್ಯವನು ನೋಡುತಲಿ
ಮೈಮನದಲಿ ಮೂಡುವುದು ರೋಮಾಂಚವೂ
ಹಾರುತಲಿ ಬೀಳುತಲಿ ಬರುತಿರುವ ತೆರೆಯೊಡನೆ
ಆಡುತಲಿ ಕುಣಿಯುತಿರೇ ಅ
ಆಮೋದವೇ
ಮೈಮನವ ಮರೆಯಿಸುವ ಕಡಲಿನಾ ಸೊಬಗನ್ನು
ನೋಡದಿರೆ ಬಾಳೊಂದು ಬಲು ವ್ಯರ್ಥವೇ
ಕೊಟ್ಟಿರುವೆ ಅಮೂಲ್ಯ ವಸ್ತುಗಳ ನಮಗೆಂದು
ಹರಿಯುತಲಿ ಅಬ್ಬರಿಸಿ ಬೊಬ್ಬಿರಿದು ಮೊರೆದು
ಹಾಕಿದರೂ ತ್ಯಾಜ್ಯವನು ನಿನ್ನೊಡಲಿಗಿಳಿದು
ಕೋಪವನು ತೋರದೆಯೇ ಕೊಡುತಿರುವೆ ಸಕಲವ
-ಪಂಕಜಾ.ಕೆ. ಮುಡಿಪು
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ