ಕವನ: ವೈದ್ಯರ ದಿನ

Upayuktha
0


ಯಮರಾಜನ ಸೋದರನಂತೆ

ಸ್ವಲ್ಪ

ಬಿರುಸಿನವನೇ ಆಗಿರ ಬೇಕು

ಯಾಕೆಂದರೆ 

ಪ್ರಾಣ ಧನಗಳೆರಡರನ್ನೂ

ಒಯ್ಯುವ 

ಮಹಾ ನಿಸ್ಸೀಮ


ಯಾರು ಯಾಕೆ ಯಾವಾಗ

ಹೀಗಂದರೋ

ಸಣ್ಣ

ತಲೆನೋವು ಬಂದರೆ

ಯಮನ ಭಯವಾಗಿ

ಓಡಿ ಬರುವುದು

ಸೋದರನ ಬಳಿಗೇ!


ಮತ್ತಿದೇತರ ಉಪಮೆ

ಪ್ರಾಯಃ

ನಮಸ್ಕರಿಸುತ್ತಾ

ತಡೆ

ಒಡ್ಡಿರ ಬೇಕು

ಪ್ರಾಣಧನ ರಾಗಿರುವ

ಸಲುವಾಗಿ.


-ಡಾ ಸುರೇಶ ನೆಗಳಗುಳಿ


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


web counter
Tags

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top