|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಚಿತ್ರಕವನ: ರಮ್ಯ ಕನಸು

ಚಿತ್ರಕವನ: ರಮ್ಯ ಕನಸು



ಭೂಮ್ಯಾಕಾಶವ ಅಳೆದನು ವಾಮನ

ವಿಕ್ರಮನಾಗುತ ಚೆಂದದಲಿ|

ಸೋಮನ ಭೂಮಿಗೆ ಎಳೆಯುತ ತರುವೆನು

ಎಂದನು ಬಾಲನು ಮಾತಿನಲಿ||


ಬೆಳೆದೇಬೆಳೆದನು ಚಂದ್ರನ ಸನಿಹಕೆ

ಕಟ್ಟಿದ ಹಗ್ಗವ ಬಿಗಿಯಾಗಿ|

ಎಳೆಯುತ ಶಶಿಯನು ಹತ್ತಿರ ತಂದನು

ಭೂಮಿಗೆ ದೀಪದ ಬೆಳಕಾಗಿ||


ಬುವಿಯನು ತುಂಬಿತು ಚಂದ್ರನ ಕಾಂತಿಯು

ಉಕ್ಕಿತು ಸಾಗರ ಎತ್ತರಕೆ|

ನವನವ ಭಾವನೆ ಅರಳಿತು ಮನದಲಿ

ಉಬ್ಬಿದ ಹುಡುಗನು ಸಂತಸಕೆ||


ಸಾಹಸ ಕಾರ್ಯವ ಧೈರ್ಯದೆ ಮಾಡಿದೆ

ಎನ್ನುತ ಬೀಗಿದ ಜಂಬದಲಿ|

ಆಹಾ ಅಚ್ಚರಿ ಬಲಯುತ ನಾನಿಹೆ

ಎನ್ನುತ ನುಡಿದನು ಅಹಮಿನಲಿ||


ಎತ್ತುತ ಕೈಯನು ಕುಟ್ಟಲು ನೆಲದಲಿ

ಎಚ್ಚರಗೊಂಡನು ಮಂಚದಲಿ|

ಮೆತ್ತಗೆ ಆಗುತ ನುಡಿದನು ಬಾಲಕ

ನಡೆದದ್ದೆಲ್ಲಾ ಕನಸಿನಲಿ||


(ಚತುರ್ಮಾತ್ರಾ ಲಯದಲ್ಲಿ)

-ಅಶ್ವತ್ಥನಾರಾಯಣ, ಮೈಸೂರು


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


web counter

0 Comments

Post a Comment

Post a Comment (0)

Previous Post Next Post