'ರಜೆಯ ವಿಹಾರ- ಚಿಣ್ಣರ ವಿಚಾರ': ಮುಳಿಯ ಜ್ಯುವೆಲ್ಸ್‌ನಿಂದ ಮಕ್ಕಳಿಗಾಗಿ ಪ್ರಬಂಧ ಸ್ಪರ್ಧೆ

Upayuktha
0



ಪುತ್ತೂರು: ಮಕ್ಕಳ ಪ್ರತಿಭೆಗೆ ಪ್ರೋತ್ಸಾಹ ನೀಡಲು ಪುತ್ತೂರಿನ ಖ್ಯಾತ ಚನ್ನಾಭರಣ ಮಳಿಗೆ ಮುಳಿಯ ಜ್ಯುವೆಲ್ಸ್‌ 10ರಿಂದ 15 ವರ್ಷದೊಳಗಿನ ಮಕ್ಕಳಿಗಾಗಿ 'ರಜೆಯ ವಿಹಾರ- ಚಿಣ್ಣರ ವಿಚಾರ' ಎಂಬ ವಿಷಯದ ಬಗ್ಗೆ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಿದೆ.


ತಮ್ಮ ಬೇಸಿಗೆ ರಜೆಯನ್ನು ಹೇಗೆ ಕಳೆದರು ಎಂಬುದರ ಬಗ್ಗೆ ಕನ್ನಡದಲ್ಲಿ ಪ್ರಬಂಧಗಳನ್ನು ಬರೆದು ಮೇ 31ರ ಒಳಗೆ ಕಳುಹಿಸಿಕೊಡಬೇಕು. ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರು ಆಕರ್ಷಕ ಬಹುಮಾನಗಳನ್ನೂ ಗೆಲ್ಲಬಹುದು.


ನೋಂದಣಿ ಮತ್ತು ಹೆಚ್ಚಿನ ಮಾಹಿತಿಗಾಗಿ 9353030916 ಸಂಖ್ಯೆಗೆ ವಾಟ್ಸಪ್‌ ಮೂಲಕ ಸಂಪರ್ಕಿಸಬಹುದು ಎಂದು ಮುಳಿಯ ಜ್ಯುವೆಲ್ಸ್ ಪ್ರಕಟಣೆ ತಿಳಿಸಿದೆ.


ಸ್ಪರ್ಧೆಯ ನಿಬಂಧನೆಗಳು ಹೀಗಿವೆ:

* ಪ್ರಬಂಧವು 1,500 ಪದಗಳ ಒಳಗಿರಬೇಕು.

* ಪ್ರಬಂಧವನ್ನು ಪೆನ್ನಿನಿಂದ ಬಿಳಿ ಹಾಳೆಯ ಮೇಲೆ ಬರೆಯಬೇಕು.

* ಸ್ಪರ್ಧಿಯು ತಮ್ಮ ಹೆಸರು, ತರಗತಿ ಮತ್ತು ಶಾಳೆಯ ಹೆಸರನ್ನು ಕಾಗದದ ಮೇಲಿನ ಬಲ ತುದಿಯಲ್ಲಿ ಬರೆಯಬೇಕು.

* ಸ್ಪರ್ಧಿಯು ಪ್ರಬಂಧವನ್ನು ಮತ್ತು ಶಾಲಾ ಗುರುತಿನ ಚೀಟಿಯ ಸ್ಪಷ್ಟ ಛಾಯಾಚಿತ್ರವನ್ನು ಮೇಲೆ ಸೂಚಿಸಿದ ವಾಟ್ಸಪ್‌ ಸಂಖ್ಯೆಗೆ ಕಳುಹಿಸಬೇಕು.

* ತೀರ್ಪುಗಾರರು ಸ್ಪರ್ಧಿಯ ಪ್ರಬಂಧವನ್ನು ಅದರ ವಾಕ್ಯ ರಚನೆ ಮತ್ತು ಸೃಜನಶೀಲತೆಯ ಆಧಾರದ ಮೇಲೆ ಮೌಲ್ಯಮಾಪನ ಮಾಡುತ್ತಾರೆ.

ಚಿಣ್ಣರು ಕೂಡಲೇ ಸೂಚಿಸಿದ ವಿಷಯದಲ್ಲಿ ಪ್ರಬಂಧವನ್ನು ಬರೆದು ಕಳುಹಿಸಿ ತಮ್ಮ ಪ್ರತಿಭೆಯ ಅನಾವರಣಕ್ಕೆ ಅವಕಾಶವನ್ನು ಪಡೆದುಕೊಳ್ಳಬಹುದು ಜತೆಗೆ ಬಹುಮಾನ ಗೆಲ್ಲುವ ಅವಕಾಶವನ್ನೂ ಸದುಪಯೋಗ ಮಾಡಿಕೊಳ್ಳಬಹುದು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top