ಉಜಿರೆ: ಧರ್ಮಸ್ಥಳ ದೇವಸ್ಥಾನದಲ್ಲಿ ವರ್ಷದ ಕೊನೆಯ ಜಾತ್ರೆಯಾದ ಹತ್ತನಾವಧಿ (ತುಳು: ಪತ್ತನಾಜೆ) ಮಂಗಳವಾರ ರಾತ್ರಿ ನಡೆಯಿತು.
ಇನ್ನು ಮುಂದೆ ದೇವಸ್ಥಾನದಲ್ಲಿ ಉತ್ಸವ, ರಥೋತ್ಸವ, ರಂಗಪೂಜೆ ಮೊದಲಾದ ವಿಶೇಷ ಸೇವೆಗಳು ದೀಪಾವಳಿ ಹಬ್ಬದ ನಂತರ ನಡೆಯುತ್ತವೆ.
ಯಕ್ಷಗಾನ ಮೇಳದ ಕಲಾವಿದರು ಬುಧವಾರ, ಗುರುವಾರ ಮತ್ತು ಶುಕ್ರವಾರ ಮೂರು ದಿನ ಸೇವೆ ಬಯಲಾಟ ಪ್ರದರ್ಶನ ನೀಡುತ್ತಾರೆ. ಮುಂದೆ ದೀಪಾವಳಿ ನಂತರ ಸೇವೆ ಬಯಲಾಟ ಪ್ರದರ್ಶನ ಆರಂಭವಾಗುತ್ತದೆ.
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
إرسال تعليق