ಬಪ್ಪಳಿಗೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ವ್ಯಕ್ತಿತ್ವ ವಿಕಸನ ಕಾರ್ಯಕ್ರಮ

Upayuktha
1 minute read
0

 

ಧನಾತ್ಮಕ ಯೋಚನೆಯಿಂದ ಅದ್ಭುತ ಸಾಧಿಸಬಹುದು : ಚಂದ್ರಕಾಂತ ಗೋರೆ


ಪುತ್ತೂರು: ಪ್ರತಿಯೊಬ್ಬ ಮನುಷ್ಯನು ಶಾರೀರಿಕವಾಗಿ ದೃಢವಾಗಿದ್ದು ಮಾನಸಿಕವಾಗಿ ಸ್ವಸ್ಥನಾಗಿ ಕಂಡರೂ ಮನುಷ್ಯನ ಒಳಮನಸ್ಸಿನಲ್ಲಿ ಕೆಲವೊಂದು ತೊಡಕುಗಳಿರುತ್ತವೆ. ಈ ಒಳಮನಸ್ಸಿನ ಅಡೆತಡೆಗಳನ್ನು ನಾವು ಸರಿಯಾದ ಶಿಕ್ಷಣದಿಂದ ಹೋಗಲಾಡಿಸಬಹುದು ಎಂದು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ಪದವಿ ಮಹಾವಿದ್ಯಾಲಯದ ಮನಃಶಾಸ್ತ್ರ ವಿಭಾಗ ಮುಖ್ಯಸ್ಥ ಚಂದ್ರಕಾಂತ ಗೋರೆ ಹೇಳಿದರು.


ಅವರು ಬಪ್ಪಳಿಗೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ಬುಧವಾರ ಆಯೋಜಿಸಲಾದ ವ್ಯಕ್ತಿತ್ವ ವಿಕಸನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.


ಈ ಪ್ರಪಂಚದಲ್ಲಿ ಹಲವಾರು ಬಗೆಯ ಮಾನಸಿಕ ಸ್ಥಿತಿಯನ್ನು ಹೊಂದಿರುವ ಜನರಿರುತ್ತಾರೆ. ಧನಾತ್ಮಕವಾಗಿ ಆಲೋಚಿಸುವವನ ಮನಸ್ಸು ಯಾವಾಗಲೂ ಪ್ರಶಾಂತವಾಗಿರುತ್ತದೆ. ಮತ್ತು ಈ ಪ್ರಶಾಂತ ಸ್ಥಿತಿಯಲ್ಲಿರುವ ಮನಸ್ಸು ಯಾವಾಗಲೂ ಅದ್ಭುತಗಳನ್ನು ಸಾಧಿಸುವಲ್ಲಿ ಅನುವು ಮಾಡಿ ಕೊಡುತ್ತದೆ. ಯಾವುದೇ ಕ್ಷೇತ್ರದಲ್ಲಿ ನಾವು ಯಶಸ್ಸು ಸಾಧಿಸಬೇಕಾದರೂ ನಮ್ಮ ಮಾನಸಿಕ ಸ್ಥಿತಿಯೇ, ಪ್ರಮುಖ ಕಾರಣ ಆತ್ಮವಿಶ್ವಾಸ ತುಂಬಿದ ಮನಸ್ಥಿತಿಯಿಂದ ಅದ್ಭುತಗಳನ್ನು ಸಾಧಿಸಬಹುದು ಎಂದರು.


ಯಾವುದೇ ಕೆಲಸದ ಬಗ್ಗೆ ಅಸಾಧ್ಯ ಎನ್ನುವ ಭಾವನೆ ನಮ್ಮ ಒಂದು ಅಭಿಪ್ರಾಯವಾಗಿದೆಯೇ ವಿನಹ ಅದು ನಿಜವಲ್ಲ. ಹಲವಾರು ಅಡಚಣೆ, ವಿರೋಧಗಳ ನಡುವೆ ಜಗತ್ತೆ ಬೆಕ್ಕಸ ಬೆರಾಗಾಗುವಂತೆ ಯಶಸ್ಸು ಗಳಿಸಿದ ಹಲವಾರು ವ್ಯಕ್ತಿಗಳ ನಿದರ್ಶನಗಳಿವೆ. ಯಶಸ್ಸಿನ ಬೇಕಿರುವುದು ಅಗಾಧವಾದ ಆತ್ಮವಿಶ್ವಾಸ. ಎಲ್ಲಾ ಪರಿಸ್ಥಿತಿಗಳು ನಮಗೆ ವಿರೋಧವಾಗಿದ್ದರೂ ನಾವು ನಮ್ಮ ಶಕ್ತಿಯ ಮೇಲೆ ನಮಗೆ ನಂಬಿಕೆ ಇಡಬೇಕು ಎಂದರಲ್ಲದೆ ವಿದ್ಯಾರ್ಜನೆ ಮಾಡುವಾಗ ತಮ್ಮ ಬಗ್ಗೆ ಕೀಳರಿಮೆ ಬೆಳೆಸಿಕೊಳ್ಳದೆ ಆತ್ಮವಿಶ್ವಾಸದಿಂದ ತಮ್ಮ ಸಾಧನೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.


ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕಾಲೇಜಿನ ಪ್ರಾಂಶುಪಾಲ ಶಂಕರನಾರಾಯಣ ಭಟ್ ಮಾತನಾಡಿ ವ್ಯಕ್ತಿತ್ವ ವಿಕಸನದಂತಹ ಕಾರ್ಯಕ್ರಮಗಳಿಂದ ಮಕ್ಕಳಲ್ಲಿ ಧನಾತ್ಮಕ ಚಿಂತನೆಗಳನ್ನು ತುಂಬಲು ಸಾಧ್ಯ. ಧನಾತ್ಮಕ ಚಿಂತನೆಗಳಿಂದ ಭಯ ಆತಂಕಗಳನ್ನು ದೂರಮಾಡಿ ಒಳ್ಳೆಯ ಸ್ವಚ್ಚಂದ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಯ ವಿಭಿನ್ನ ಹಾಗೂ ವಿಶಿಷ್ಟವಾಗಿರುತ್ತಾನೆ. ಯಾರು ಯರೊಂದಿಗೂ ಹೋಲಿಕೆ ಮಾಡಿಕೊಳ್ಳಬಾರದು. ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುವ ಪುಸ್ತಕಗಳನ್ನು ಹೆಚ್ಚೆಚ್ಚು ಓದಬೇಕು ಮತ್ತು ಅವುಗಳ ಸಾರಾಂಶಗಳನ್ನು ತಮ್ಮ ಜೀವನದಲ್ಲೂ ಅಳವಡಿಸಿಕೊಳ್ಳಬೇಕು ಎಂದರು. ಕಾರ್ಯಕ್ರಮದಲ್ಲಿ ಕಾಲೇಜಿನ ಬೋಧಕ ಬೋಧಕೇತರ ಸಿಬ್ಬಂಧಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ದ್ವಿತೀಯ ಪಿಯುಸಿ ವಿದ್ಯಾರ್ಥಿ ಅನೀಶ್ ಕೆ ನಿರೂಪಿಸಿ ವಂದಿಸಿದರು.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
To Top