ನಾನು ಸರ್ವಾಂತರ್ಯಾಮಿ...!
ನಾನು ಎಲ್ಲೆಡೆ ಇರುವೆ...
ನಾನು ಅವಿನಾಶಿ....
ನನಗೆ ಸಾವಿಲ್ಲ ;ನಾನು ಅಮರ...
ಅನಲ ನನ್ನ ಸುಡದು...
ಸಲಿಲ ಎನ್ನ ತೋಯಿಸದು...
ಅನಿಲ ನನ್ನ ಶುಷ್ಕಗೊಳಿಸದು;ಹಾರಿಸದು ಬೀಳಿಸದು...
ನಾನು ಅಭೇದ್ಯ ...
ಯಾರೂ ನನ್ನ ಭೇದಿಸಲಾರರು...
ನಾನು ಅವಧ್ಯ...
ಯಾರೂ ನನ್ನ ಕೊಲ್ಲಲಾರರು....
ನಾನು ಅಖಂಡ ಅವಿಚ್ಛಿನ್ನ...!
ಯಾವ ನಿಶಿತ ಖಡ್ಗವೂ
ನನ್ನ ತುಂಡರಿಸಲಾರದು....
ನಾನು ನಿರ್ಗುಣ ನಿರಾಕಾರನೂ ಹೌದು...!
ನಾನು ಸಗುಣ ಸಾಕಾರನೂ ಹೌದು... !
ನಾನು ಮೃಣ್ಮಯ ಕಾಯವಲ್ಲ...
ನಾನು ಸಚ್ಚಿದಾನಂದ ಚಿನ್ಮಯ....
ನಾನು ಅದ್ವಿತೀಯ... !
ನನ್ನ ಹೊರತಾಗಿ ಮತ್ತೇನೂ ಇಲ್ಲ....!
ನಾನು ಘಟದೊಳಗಿನ ಬಿಂದುವೂ ಹೌದು... !
ಬಿಂದುವಿನಿಂದಾದ ಸಿಂಧುವೂ ಹೌದು....!
ಜಡದಲ್ಲಿ ಜಡತ್ವವಾಗಿಯೂ
ಚೇತನದಲ್ಲಿ ಚೈತನ್ಯವಾಗಿಯೂ ಇರುವೆ...
ಹಿಂದೆಯೂ ಇದ್ದೆ....
ಈಗಲೂ ಇರುವೆ....
ಮುಂದೆಯೂ ಅನಂತಕಾಲದವರೆಗೂ ಕಾಲಗರ್ಭದಲ್ಲಿ ಹುದುಗಿರುವೆ....
ನಾನು ಸದಾ ಸರ್ವದಾ ಇರುವೆ.....
ಅಹಂ ಬ್ರಹ್ಮಾಸ್ಮಿ...!
ಅಹಂ ಬ್ರಹ್ಮಾಸ್ಮಿ...!
(ವಿವೇಕವೀರರ ಚಿಂತನೆಗಳನ್ನು ಆಧರಿಸಿ ನನ್ನಲ್ಲಿ ಮೂಡಿದ ಕವಿತೆ)
-ಎಸ್. ಎಲ್. ವರಲಕ್ಷ್ಮೀ ಮಂಜುನಾಥ್.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ