|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕವನ: ಸಂಕ್ರಾಂತಿ ಗೀತೆ

ಕವನ: ಸಂಕ್ರಾಂತಿ ಗೀತೆ

ಜಾನಪದ ಶೈಲಿಯ ತ್ರಿಪದಿ



ಕೊಳ್ಳಿರಿ ಬೆಲ್ಲವ ಎಳ್ಳಿsನ ಜೊತೆಯsಲಿ

ಒಳ್ಳೆಯ ಮಾತು ಆಡುsತ |ದಿನನಿತ್ಯ|

ಜಳ್ಳನು ತೂರಿ ಸಾಗುsತ ||೧||


ಕಬ್ಬನು ಹಂಚುತ ಹಬ್ಬವ ಮಾಡೋsಣ

ಕೊಬ್ಬರಿ ತುರಿಯ ಬೆರೆಸುsತ |ಸವಿಯಲು|

ತಬ್ಬಿದ ಬಂಧು ಬಳಗsವ||೨||


ಸೂರಿಯ ನಡೆಯುವ ದಾರಿsಯ ಬದಲಿಸೆ

ನಾರಿಗೆ ಮನೆಲಿ ಸಂಭ್ರsಮ| ಎಲ್ಲೆಡೆ|

ಕೋರುತ ಶುಭದ ಸಡಗರ||೩||



ರಾಶೀಯ ಸಂಚಾರ ತೋಷsವ ತಂದಿದೆ

ಕೋಶsದಿ ದವಸ ತುಂಬsಲು|ಕಣಜದಿ

ದೇಶsದ ಜನತೆ ಸುಖವಾಗಿ ||೪||


ನೆಲದಾಯಿ ಭೂದೇವಿ ಹೊಲದಾಗೆ ಬೆಳೆದಿsಹ

ಕುಲದೇವ ಪೂಜೆ ಮಾಡುತ| ಸುಮಗsಳ|

ಜಲದೇವಿ ನಮಿಸಿ ನಿಲ್ಲುsತ ||೫||


ಸುಗ್ಗಿಯ ಕಾಲದ ಹಿಗ್ಗೀನ ಕುಣಿತಕೆ

ಮೊಗ್ಗಿನ ಮಾಲೆ ಮುಡಿಯುತ| ನೀರೇರು|

ಕುಗ್ಗದೆ ನಗುವ ಸೂಸುsತ ||೬||


ರಚನೆ: ಲಕ್ಷ್ಮೀ ವಿ ಭಟ್, ಮಂಜೇಶ್ವರ

ಸಂಗೀತ ಸಂಯೋಜನೆ, ಗಾಯನ: ಪ್ರಸನ್ನಾ ಸಿ.ಎಸ್ ಭಟ್ ಕಾಕುಂಜೆ


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



0 Comments

Post a Comment

Post a Comment (0)

Previous Post Next Post