ಕೊರೋನಾ ಎರಡನೇ ಅಲೆಯಿಂದಾಗಿ ಶಿಕ್ಷಣ ವ್ಯವಸ್ಥೆಯಲ್ಲಿ ಅನೇಕ ಬದಲಾವಣೆಗಳು ಆದವು. ಮಕ್ಕಳು ಇನ್ನೂ ಸಂಪೂರ್ಣವಾಗಿ ಈ ನೂತನ ವ್ಯವಸ್ಥೆಗೆ ಒಗ್ಗಿಕೊಳ್ಳಬೇಕಷ್ಟೆ. ಹೀಗಿರುವಾಗ ಮತ್ತೆ ಕೊರೋನಾ ಮೂರನೆ ಅಲೆಯ ಹೊಸ ರೂಪಾಂತರಿ ಒಮಿಕ್ರಾನ್ ಬಗ್ಗೆ ಚರ್ಚೆಗಳು ನಡೆಯುತ್ತಿದೆ.
ಬೆಂಗಳೂರಿನ ವಿಧಾನಸೌಧದಲ್ಲಿ ಮಾತನಾಡಿದ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ರವರು " ಕೊರೋನಾ ಸೋಂಕು ಹೆಚ್ಚಾದರೆ ಶಾಲೆ ಮುಚ್ಚಲು ಸಿದ್ಧರಿದ್ದೇವೆ. ಪೋಷಕರು ಯಾವುದೇ ರೀತಿಯ ಗೊಂದಲ, ಆತಂಕಕ್ಕೆ ಒಳಪಡುವ ಅಗತ್ಯವಿಲ್ಲ. ಕೊರೋನಾದ ಬಗ್ಗೆ ಪ್ರತೀ ವಾರ ವರದಿಯನ್ನು ಪಡೆಯುತ್ತಿದ್ದೇವೆ. ವರದಿ ಪ್ರಕಾರ ತಕ್ಷಣಕ್ಕೆ ಭಯ ಬೇಡ" ಎಂದು ಹೇಳಿದ್ದಾರೆ.