ಹಿಂದಿ ಸಾಹಿತಿ ಮನ್ನೂ ಭಂಡಾರಿಯವರ ಸ್ಮರಣಾರ್ಥ: ನುಡಿನಮನ ಕಾರ್ಯಕ್ರಮ

Upayuktha
0

ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ಹಿಂದಿ ವಿಭಾಗದ ವತಿಯಿಂದ ಇತ್ತೀಚೆಗೆ ನಮ್ಮನ್ನಗಲಿದ ಪ್ರಖ್ಯಾತ ಹಿಂದಿ ಸಾಹಿತಿ ಮನ್ನೂ ಭಂಡಾರಿಯವರ ಸ್ಮರಣಾರ್ಥ ಗೂಗಲ್ ಮೀಟ್‌ನಲ್ಲಿ ವೆಬಿನಾರನ್ನು ಆಯೋಜಿಸಿಲಾಗಿತ್ತು. ನುಡಿ ನಮನವನ್ನು ಸಲ್ಲಿಸುತ್ತಾ ಮಾತನಾಡಿದ ಪೂರ್ಣಪ್ರಜ್ಞ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಡಾ. ಮಾಧವಿ ಭಂಡಾರಿ, ಮನ್ನೂ ಭಂಡಾರಿಯವರ ಸಾಹಿತ್ಯವು ಸರ್ವಕಾಲಕ್ಕೂ ಪ್ರಸ್ತುತವಾಗಿದ್ದು, ಸ್ತ್ರೀ ಸಶಕ್ತೀಕರಣದ ಸಂದೇಶವನ್ನ ನೀಡಿ ಮಹಿಳಾ ಸಮುದಾಯವನ್ನು ಮುನ್ನಡೆಸಲು ಪ್ರೇರಕಶಕ್ತಿಯಿದ್ದಂತೆ ಎಂದರು. ವಿದ್ಯಾರ್ಥಿನಿ ಪ್ರಥ್ವಿ ಕಾರ್ಯಕ್ರಮ ನಿರೂಪಿಸಿದರು.


ರೂಪೇಶ್ ಧನ್ಯವಾದವನ್ನು ಅರ್ಪಿಸಿದರು. ಸೌರವ್, ಶಶಾಂಕ್ ಹಾಗೂ ಅಫ್ಜಲ್ ತಂತ್ರಜ್ಞಾನ ವಿಭಾಗದಲ್ಲಿ ಸಹಕರಿಸಿದರು. ಆಳ್ವಾಸ್ ಕಾಲೇಜಿನ ಹಿಂದಿ ವಿಭಾಗದ ಮುಖ್ಯಸ್ಥ ಡಾ ರಾಜೀವ್ ಸಿ, ಹಾಗೂ ಉಪನ್ಯಾಸಕ ವರ್ಗದವರು ಉಪಸ್ಥಿತರಿದ್ದರು.


(ಉಪಯುಕ್ತ ನ್ಯೂಸ್)


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top