ರಾತ್ರಿ 9 ರ ಬಳಿಕ ಶಿರಡಿಯಲ್ಲಿ ದರ್ಶನ ನಿರ್ಬಂಧ

Arpitha
0




ಶಿರಡಿ:
ಓಮಿಕ್ರಾನ್ ಆತಂಕದ ನಡುವೆ ಹೊಸ ವರ್ಷ ಮತ್ತು ಸರಣಿ ರಜೆ ಹಿನ್ನೆಲೆಯಲ್ಲಿ ಶಿರಡಿ ಸಾಯಿ ಮಂದಿರದಲ್ಲಿ ಜನಸಂದಣಿ ತಪ್ಪಿಸಲು ಮಂದಿರದ ಆಡಳಿತವು ಹೊಸ ನಿಯಮಗಳನ್ನು ಜಾರಿಗೊಳಿಸಿದೆ.

ಶಿರಡಿ ಸಾಯಿ ಮಂದಿರದಲ್ಲಿ ಬೆಳಗಿನ ಕಾಕಡ್ ಆರತಿ ಮತ್ತು ಶೇಜ್ ಆರತಿಗೆ ಭಕ್ತರಿಗೆ ಪ್ರವೇಶ ನೀಡಲಾಗುವುದಿಲ್ಲ. ಕೆಲವು ಪುರೋಹಿತರ ಸಮ್ಮುಖದಲ್ಲಿ ಈ ಆರತಿ ಪೂಜೆ ನಡೆಯಲಿದೆ. ಭಕ್ತಾದಿಗಳು ಕೋವಿಡ್ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ದೇವಸ್ಥಾನ ಮತ್ತು ಜಿಲ್ಲಾಡಳಿತ ಮನವಿ ಮಾಡಿದೆ.

ರಚಿಸಿದ ಹೊಸ ನಿಯಮಗಳ ಪ್ರಕಾರ ಭಕ್ತರು ಬೆಳಿಗ್ಗೆ 6 ರಿಂದ ರಾತ್ರಿ 9 ರವರೆಗೆ ದರ್ಶನ ಪಡೆಯಬಹುದು. ರಾತ್ರಿ 9 ಗಂಟೆಯ ನಂತರ ರಾಜ್ಯದಲ್ಲಿ ಕರ್ಫ್ಯೂ ಹೇರಲಾಗಿರುವುದರಿಂದ ದೇಗುಲವನ್ನು ಮುಚ್ಚಲಾಗುತ್ತದೆ ಎಂದು ಜಿಲ್ಲಾಡಳಿತ ತಿಳಿಸಿದೆ.

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top