ಕವನ: ಅಕ್ಷರಜ್ಞನ ಪುರ

Upayuktha
0


ಅ ಲ್ಲೊಂದು ಲೋಕವಿದೆ 

ಆ  ಕಾಶ ಮಧ್ಯದಲಿ 

ಇ  ದನಾರು ತಿಳಿದಿಲ್ಲ 

ಈ  ಶ ಕೃಪೆ ತೋರಿದರೆ 

ಉ ರಗಶಯನನಪುರಕೆ


ಊ ಹಿಸದೆ ಹೋಗುವರು 

ಋ ಷಿ ಯೋಗಿಗಳ ತೆರದಿ 

ಎ  ನಿತು ಕಲ್ಮಶವಿರದೆ

ಏ  ಕಾಂಗಿಯಾಗಿಯೇ  

ಐ  ಕ್ಯವಾಗಲು ಹರಿಯ

 

ಒ  0ದಿನಿತು ತಡೆ ಇರದ

ಓ  ಟವದು ನಿಗೂಢವು 

ಔ  ನ್ನತ್ಯವಾದಂಥ 

ಅಂ ಥ ಜೀವಿಗಳೆಲ್ಲ 

ಅ ಹಮನ್ನು ತೊರೆದವರು 


ಕ ರಿಯ ಹಿಡಿದ ಮಕರಿಯು 

ಖ ಳನಂತೆ ಇರಲಂದು 

ಗ ತಿಯ ಕಾಣಿಸಿದಂಥ 

ಘ ನಶ್ಯಾಮ ಸುಂದರಾ

ಙ್ಗ ಹರಿಯ ಆ ಪುರವದು 


ಚ ಕ್ರವರ್ತಿಯು ಆದ 

ಛ ಲವಾದಿ ದಶರಥಗೆ 

ಜ ನಿಸುತ್ತ ಅಯೋಧ್ಯೆಯ 

ಝ ೦ಕಣೆಯ ನೀಗಿರುವ  (ದುಃಖ)

ಞ🙏ಶ್ರೀ ರಾಮ ಪುರವದು 


ಟ ೦ಗವನು ಹಿಡಿದಂದು   (ಕೊಡಲಿ)

ಠ ಕ್ಕ ಅರಸರನೆಲ್ಲ 

ಡ ರಾವಣೆಯಿಂದಟ್ಟಿದ     (ಹೆದರಿಸಿ)

ಢ ಣಾಯಕ ಪರಶು ರಾಮ (ದಂಡನಾಯಕ)

ಣ್ಣ ನ ಮೂಲಪುರವದು


ತ ಪ್ಪು ಮಾಡಿದವರನು

ಥ ಟ್ಟೆಂದು ಪರಿಹರಿಸಿ

ದ ೦ಡಿಸಲು ಬಂದಂಥ

ಧ  ರ್ಮರಕ್ಷಕನಾದ

ನ ಮ್ಮ ಕೃಷ್ಣನ ಪುರವದು


ಪ ದ್ಮನಾಭನು ತಾನು 

ಫ  ಣಿಶಾಹಿಯಾಗಿಯೇ

ಬ  ಹುಕಾಲ ಪವಡಿಸುವ

ಭ  ಯವಿರದೆ ಇರುವಂಥ

ಮ ಹಾ ಮಹಿಮಪುರವದು


ಯ  ಮನ ಬಾಧೆಯು ಇರದ

ರ   ಮಾಧವ ನೆಲೆಸಿರುವ

ಲ  ಕುಮಿ ದೇವಿಯು ತಾನು


ವ  ರಿಸಿಕೊಂಡಿರುವಂಥ  

ಶ  ೦ಖಪಾಣಿಯ ಪುರವದು 

ಷ  ಡ್ವೈರಿ ನುಸುಳದಿಹ

 

ಸ  ತ್ಯಲೋಕವೆ ಆದ

ಹ ರಿಯ ವೈಕುಂಠದಾ

ಳ ತಿಳಿದವರೆಲ್ಲುಂಟು


ಕ್ಷ ತಿಯೆ ಇರದ ಅಕ್ಷರ 

ಜ್ಞ ನ ಶಾಶ್ವತದ ಮನೆ ಅದು 

ಅ ಕ್ಷರಜ್ಞನ ಪುರವದು 

**********

-ಬಾಲಕೃಷ್ಣ ಸಹಸ್ರಬುಧ್ಯೆ ಮುಂಡಾಜೆ


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Tags

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top