ಅರೆಹೊಳೆ ಪ್ರತಿಷ್ಠಾನ- ನಂದಗೋಕುಲ ಕಲಾವಿದರಿಂದ 'ಉಡಿಯೊಳಗಣ ಕಿಚ್ಚು' ನಾಳೆ ಪ್ರಥಮ ಪ್ರದರ್ಶನ

Upayuktha
0


ಮಂಗಳೂರು: ಶಿಕ್ಷಣ, ಕಲೆ, ಸಾಹಿತ್ಯ ಸಂಸ್ಕೃತಿಗಾಗಿ ದುಡಿಯುತ್ತಿರುವ ಕರಾವಳಿಯ ಹೆಸರಾಂತ ರಂಗಭೂಮಿ ಸಂಸ್ಥೆ ಅರೆಹೊಳೆ ಪ್ರತಿಷ್ಠಾನ ಕೊರೊನಾ ಕಾಲದ ಸುದೀರ್ಘ ಬಿಡುವಿನ ನಂತರ ಮರಳಿ ಚಟುವಟಿಕೆಗಳನ್ನು ಆರಂಭಿಸುತ್ತಿದೆ.


ಮಂಗಳೂರಿನ ಸಂತ ಅಲೋಶಿಯಸ್ ರಂಗ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ನಂದಗೋಕುಲ ಕಲಾವಿದರು ಉಡಿಯೊಳಗಣ ಕಿಚ್ಚು ನಾಟಕದ ಪ್ರಥಮ ಪ್ರದರ್ಶನವನ್ನು ನಾಳೆ (ನ.13- ಶನಿವಾರ) ನಡೆಸಿಕೊಡಲಿದ್ದಾರೆ. ಕಾರ್ಯಕ್ರಮ ಸಂತ ಅಲೋಶೀಯಸ್ ಕಾಲೇಜಿನ ಎಲ್‌ಸಿಆರ್‌ಐ ಸಭಾಂಗಣದಲ್ಲಿ ನಾಳೆ ಸಂಜೆ 6:30ಕ್ಕೆ ನಡೆಯಲಿದೆ.


ಈ ನಾಟಕದ ರಂಗ ಪಠ್ಯ, ವಿನ್ಯಾಸ ಮತ್ತು ನಿರ್ದೇಶನ ಪ್ರಶಾಂತ್ ಉದ್ಯಾವರ ಅವರದ್ದು. ಸಂಗೀಯ ಸಂಯೋಜನೆ: ಮಾಧವ ಜೋಗಿ, ರಂಗ ಸಜ್ಜಿಕೆ: ಗೋಪಿನಾಥ ಸಾಗರ, ಬೆಳಕು: ರಾಜು ಮಣಿಪಾಲ, ವಸ್ತ್ರ ವಿನ್ಯಾಸ: ಗೀತಾ ಅರೆಹೊಳೆ.

ಕೋವಿಡ್ ನಿಯಂತ್ರಣದ ನಿಯಮಗಳ ಪಾಲನೆಯೊಂದಿಗೆ ಕಾರ್ಯಕ್ರಮ ನಡೆಯುತ್ತದೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: ಅರೆಹೊಳೆ ಸದಾಶಿವ ರಾವ್- 98803 53917


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top