ಬೆಂಗಳೂರು ಕೃಷಿ ಮೇಳದಲ್ಲಿ ಚುಚ್ಚದ ಜೇನು: ಸಮಗ್ರ ಮಾಹಿತಿ- ಮಾರ್ಗದರ್ಶನ

Upayuktha
0

ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಜಿ.ಕೆ.ವಿ.ಕೆ. ಆವರಣದಲ್ಲಿ ನಡೆಯುತ್ತಿರುವ ಕೃಷಿ ಮೇಳದಲ್ಲಿ ಚುಚ್ಚದ ಜೇನು ಕುರಿತ ಮಳಿಗೆಯಿದೆ. ಅನುಭವಿ ಮುಜಂಟಿ/ಮಿಸ್ರಿ/ನಸರಿ ಸಾಕಣೆಗಾರರಾದ ವಿ.ಆರ್. ಚಂದ್ರಶೇಖರ (ಸಂಜು ಬೀ ಫಾರಂ) ಹಾಗೂ ರಾಮಚಂದ್ರ ಪುದ್ಯೋಡು (ಪುದ್ಯೋಡು ಹನಿ ಬೀ ಫಾರಂ) ಅವರು ಕೃಷಿ ಪರಿಕರ ವಿಭಾಗದ ನವೋದ್ಯಮ ಮಳಿಗೆ 27ರಲ್ಲಿ ಈ ಜೇನುಸಾಕಣೆಗೆ ಸಂಬಂಧಿಸಿದ ಸಮಗ್ರ ಮಾಹಿತಿ-ಮಾರ್ಗದರ್ಶನ ನೀಡುತ್ತಿದ್ದಾರೆ. 


ಮಿಸರಿ ಸಾಕಣೆಗೆ ಬೇಕಾದ ಎಲ್ಲ ಪರಿಕರಗಳು, ಅಂದರೆ ಕುಟುಂಬ, ಖಾಲಿ ಗೂಡು, ಮುಖಪರದೆ, ಮೇಣ ಇತ್ಯಾದಿ ಇಲ್ಲಿ ಲಭ್ಯ. ಈ ಪುಟಾಣಿ ನೊಣಗಳಿಗೆ ಸಮೃದ್ಧ ಆಹಾರ ನೀಡುವ ಹೂಗಳನ್ನು ಅರಳಿಸುವ ದೊಂಬೆಯ (ಹನಿ ಟ್ರೀ) ಮತ್ತು ತಣಲ್ ಕಪ್ಪ ಗಿಡಗಳ ಕಟ್ಟಿಂಗ್ಸ್ ಕೂಡ ಇವೆ. ‘ಚುಚ್ಚದ ಜೇನು ಎಲ್ಲರಿಗೂ ಅಚ್ಚುಮೆಚ್ಚು’ ಪುಸ್ತಕದ ಪ್ರತಿಗಳನ್ನೂ ಇಲ್ಲಿ ಪಡೆಯಬಹುದು.   


ಗ್ರಾಮೀಣ ಮತ್ತು ನಗರ ಪ್ರದೇಶಗಳೆರಡರಲ್ಲೂ ಸುಲಭವಾಗಿ ಕೈಗೊಳ್ಳಬಹುದಾದ ಮಿಸರಿ ಸಾಕಣೆಗೆ ಕರ್ನಾಟಕದಲ್ಲಿ ಸಾಕಷ್ಟು ಅವಕಾಶಗಳಿವೆ. ಇದರಿಂದ ವಿವಿಧ ಕೃಷಿ-ತೋಟಗಾರಿಕಾ ಬೆಳೆಗಳಲ್ಲಿ  ಹೆಚ್ಚಿನ ಪರಾಗಸ್ಪರ್ಶ ಏರ್ಪಟ್ಟು ಉತ್ತಮ ಇಳುವರಿ ಲಭ್ಯ. ತಾರಸಿ ತೋಟಗಳಿಗೂ ಬೆಸ್ಟ್.  ಈ ಜೇನಿಗೆ ಅಪಾರ ಔಷಧೀಯ ಗುಣಗಳಿವೆ. ಹವ್ಯಾಸವಾಗಿ ಮಾತ್ರವಲ್ಲ ವಾಣಿಜ್ಯಿಕವಾಗಿಯೂ ಇದನ್ನು ಅಳವಡಿಸಿಕೊಳ್ಳಬಹುದಾಗಿದೆ. ಈ ನೊಣಗಳು ಚುಚ್ಚುವುದಿಲ್ಲ ಎಂಬುದು ದೊಡ್ಡ ಪ್ಲಸ್ ಪಾಯಿಂಟ್.


ಈ ಮಳಿಗೆಯಲ್ಲಿ ಪಾರದರ್ಶಕ ಗೂಡುಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದು ಕುಟುಂಬದೊಳಗಿನ ವಿದ್ಯಮಾನಗಳನ್ನು ಪ್ರತ್ಯಕ್ಷ ವೀಕ್ಷಿಸಬಹುದು. ನಿಮ್ಮೆಲ್ಲ ಕುತೂಹಲ, ಸಂದೇಹಗಳಿಗೆ ಚಂದ್ರಶೇಖರ ಮತ್ತು ಪುದ್ಯೋಡು ಉತ್ತರಿಸುತ್ತಾರೆ.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ




Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top