ಭಾವಗೀತೆ: ಸ್ನೇಹ ದಂಗೆ

Upayuktha
0


ಎರಡು ಮನಗಳ ನಡುವೆ ಉದಿಸಿತು

ಕುರುಡು ಸೇಡಿನ ಗೋಡೆಯು|

ಮೆರೆವ ಯಶವನು ಸಹಿಸಲಾಗದೆ

ಬಿರುಕ ಮಾಡಿತು ಪೀಡೆಯು|


ಕರಕೆ ಕರವನು ಹಿಡಿವ ಮನಗಳು

ಹರಕೆ ಕುರಿಗಳೆ ಆದವು|

ಶಿರಕೆ ಏರಿದ ಮದದ ಅಮಲಿಗೆ

ಕೆರಳಿ ನರಕಕೆ ಹೋದವು|


ವರದ ಗೆಳೆತನ ಉರುಳಿ ಬೀಳಲು

ಕೊರಗ ತೊಡಗಿತು ಜೀವನ|

ಬರದೆ ಮರಳಿ ಮೊದಲ ವಿನಯವು

ಹೊರಗೆ ಉಳಿಯಿತು ಚೇತನ|


ಅರಳಿ ಹೂಗಳು ನಗತ ಜೊತೆಯಲಿ

ಪುರಕೆ ಕೀರುತಿ ನೀಡಲಿ|

ಇರಿದು ಸೋಲನು ಬಿರಿದು ಅರಳಲಿ

ಇರಿಸಿ ಜೇನನು ಗೂಡಲಿ| 


- ಕಾ.ವೀ.ಕೃಷ್ಣದಾಸ್


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Tags

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top