ಸಚಿವರ ಭ್ರಷ್ಟಾಚಾರದ ರೇಟ್ ಅಳೆಯುವ ಸುಲಭ ವಿಧಾನ ಇಲ್ಲಿದೆ ನೋಡಿ...

Upayuktha
0


ನಮ್ಮ ಸಚಿವರ ಭ್ರಷ್ಟಾಚಾರದ ರೇಟ್ ಅವರ ಬಾಯಿಯಿಂದಲೇ ಟೆಸ್ಟ್‌ ಮಾಡಬೇಕೇ? ಸುಲಭ ವಿಧಾನವೆಂದರೆ ಅವರು ಬೇಡಿಕೆ ಇಟ್ಟಿರುವ ಖಾತೆಗಳನ್ನು ಒಮ್ಮೆ ನೇೂಡಿ. ಜಲಸಂಪನ್ಮೂಲ ಇಲಾಖೆ, ಬೆಂಗಳೂರು ನಗರಾಭಿವೃದ್ಧಿ ಇಲಾಖೆ, ಇಂಧನ ಇಲಾಖೆ, ಲೇೂಕೋಪಯೇೂಗಿ ಇಲಾಖೆ. ಅಂದ್ರೆ ಇಂದಿನ ದಿನಗಳಲ್ಲಿ ಈ ಇಲಾಖೆಗಳು ತುಂಬಾ ಫಲಯುಕ್ತವಾದ ಇಲಾಖೆಗಳೆಂದೇ ಪರಿಗಣಿಸಲಾಗಿದೆ. ಹಣ ನೀರಿನಂತೆ ಹರಿದು ಬರುವ ಖಾತೆಯೆ ಇರಬೇಕು. ಹಾಗಾಗಿ ಈ ಖಾತೆಯೇ ತಮಗೆ ಬೇಕೆನ್ನುವ ಬೇಡಿಕೆ ಜಾಸ್ತಿಯಾಗುತ್ತಿದೆ. ಹಿಂದೆ ನನಗೆ ತಿಳಿದ ಮಟ್ಟಿಗೆ ಗೃಹ ಸಚಿವನ ಹುದ್ದೆ ಅಂದರೆ ಉಪ ಮುಖ್ಯಮಂತ್ರಿ ಹುದ್ದೆಗಿರುವಷ್ಟು ಗೌರವ ಮಯಾ೯ದೆ. ಈಗ ಅದು ಯಾವುದು ಇಲ್ಲ. ಹೆಚ್ಚು ಹಾಲು ಕೊಡುವ ಇಲಾಖೆಗಳೆ ಉಪ ಮುಖ್ಯಮಂತ್ರಿ ಸ್ಥಾನವಿದ್ದ ಹಾಗೇ. ಅಂದ್ರೆ ಇದೆಲ್ಲವೂ  ಬಾಲವಿರುವ ಧನದ ಮಹಿಮೆ?


ಹೆಚ್ಚೇನೂ ಹಣ ಹರಿದು ಬಾರದ ಇಲಾಖೆಗಳೆಂದರೆ ಸಂಸ್ಕೃತಿ ಇಲಾಖೆ, ಶಿಕ್ಷಣ ಇಲಾಖೆ, ಧಾಮಿ೯ಕ ದತ್ತಿ ಇಲಾಖೆ, ವಾತಾ೯ ಇಲಾಖೆ, ಕಾನೂನು ಸಂಸದೀಯ ಇಲಾಖೆ- ಈ ಖಾತೆಗಳು  ಹೇಗೆ ಅಂದರೆ ಕೊಟ್ಟಿಗೆಯಲ್ಲಿ (ಹಟ್ಟಿ) ಹಾಲು ಬತ್ತಿದ ದನಗಳಿದ್ದ ಹಾಗೇ ಎಷ್ಟು ಹಿಂಡಿದರೂ ಪ್ರಯೇೂಜನಕ್ಕೆ ಬಾರದ ಇಲಾಖೆಗಳು. ಈ ಇಲಾಖೆಗಳನ್ನು ಸಾಮಾನ್ಯವಾಗಿ ಸ್ವೀಕರಿಸುವವರು ಮೊದಲ ಬಾರಿಗೆ ಸಚಿವರಾದವರು, ಒಮ್ಮೆ ಮಂತ್ರಿಯಾದರೆ ಸಾಕಪ್ಪ ಅಂದು ತೃಪ್ತಿಪಡುವವರು ಮಾತ್ರ.


ನಮ್ಮಲ್ಲಿ ಒಂದು ಮಾತಿದೆ. ಪ್ರಾಯ, ಅನುಭವ ಜಾಸ್ತಿ ಆದ ಹಾಗೇ ದಕ್ಷತೆ, ಪ್ರಬುದ್ಧತೆ, ನೆೈತಿಕತೆ, ಪ್ರಾಮಾಣಿಕತೆ ಜಾಸ್ತಿಯಾಗುವುದರ ಬದಲಿಗೆ ತುಷ್ಟಿಯಾಗುತ್ತಾ ಬರುವುದು. ಕೆಲಸಕಡಿಮೆ ಹೆಚ್ಚು ಲಾಭವಾಗ ಬೇಕೆನ್ನುವ ಮನೇೂಭಾವ. ಅಂದರೆ ಇದರ ಅಥ೯  ಇರುವ ಕಡಿಮೆ ಅವಧಿಯಲ್ಲಿ ಹೆಚ್ಚು ಸಂಪಾದನೆ ಮಾಡೇೂಣ ಅನ್ನುವ ದಾಹ.ಹಾಗಾಗಿ ಸರಕಾರಿ ಇಲಾಖೆಗಳಲ್ಲಿ ನಿವೃತ್ತಿ ಪ್ರಾಯ ನಿಧ೯ರಿಸಿರುವುದು ಬರೇ ದೇಹ ಮನಸ್ಸು ದಣಿದಿದೆ ಅನ್ನುವ ಕಾರಣಕ್ಕಾಗಿ ಮಾತ್ರವಲ್ಲ ಇಂತಹ ಮನಸ್ಥಿತಿಗೂ ಒಂದು ಕಡಿವಾಣ ಹಾಕಬೇಕು ಅನ್ನುವ ಅಥ೯ವೂ ಅದರಲ್ಲಿ ಅಡಗಿದೆ ಅನ್ನುವ ವಿಚಾರ ಆಡಳಿತ ಶಾಸ್ತ್ರದಲ್ಲಿ ಸ್ವಷ್ಟವಾಗಿ ಉಲೇಖಿಸಲಾಗಿದೆ. ಆದರೆ ದುರದೃಷ್ಟವಶಾತ್ ಈ ರಾಜಕಾರಣಿಗಳಿಗೆ ಈ ನಿವೃತ್ತಿ ಪದ ಅನ್ವಯಿಸುವುದಿಲ್ಲ ನೇೂಡಿ. ಇದು ಅವರಿಗಾಗಿ ಅವರೇ ಮಾಡಿಕೊಂಡ ಅನುಕೂಲ ಶಾಸ್ತ್ರ!


ಹಾಗಾಗಿ ಹೆಚ್ಚು ಅನುಭವವಿರುವ ಪ್ರಾಯವಾದ ಹಳೆ ಹುಲಿಗಳನ್ನು ಸಚಿವರನ್ನಾಗಿ ಮತ್ತೆ ಮತ್ತೆ ತೆಗೆದುಕೊಳ್ಳುವುದು ಹೆಚ್ಚು ಅಪಾಯಕಾರಿಯೂ ಹೌದು. ಇಂದು ಇಂತಹ ಹಳೆಯ ಮಂತ್ರಿಗಳೇ ಬಹು ಫಲವತ್ತಾದ ಇಲಾಖೆಗಳನ್ನು ಪಡೆಯಲೇ ಬೇಕೆಂಬ ಹರಸಾಹಸದಲ್ಲಿದ್ದಾರೆ. ಒಂದು ವೇಳೆ ಈ ಇಲಾಖೆಗಳು ತಮಗೆ ದಕ್ಕದೇ ಹೇೂದರೆ ತಮಗೆ ಮಂತ್ರಿಗಿರಿ ಬೇಡವೇ ಬೇಡ ಅನ್ನುವ ಮಟ್ಟಿಗೆ ಒತ್ತಾಯ ಒತ್ತಡ ಒತ್ತಾಸೆ ಹಾಕುತ್ತಿರುವುದರ ಉದ್ದೇಶವೂ ಬಹು ಸ್ವಷ್ಟವಾಗಿ ಕಾಣುತ್ತಿದೆ. ಸಂವಿಧಾನದ ದೇವರ ರೆೈತರ ಮತದಾರರ ಹೆಸರಿನಲ್ಲಿ ಪ್ರಮಾಣ ವಚನ ಮಾಡಿರುವ ಇಂತಹ ಮಂತ್ರಿ ಮಹೇೂದಯರು ಮತ್ತೊಮ್ಮೆ ಆತ್ಮ ವಿಮರ್ಶೆ ಮಾಡಿಕೊಳ್ಳಲಿ ಅನ್ನುವುದೇ ಮತದಾರರ ಎಚ್ಚರಿಕೆಯ ಮಾತು ಹೌದು.


-ಕೊಕ್ಕಣೆ೯ ಸುರೇಂದ್ರನಾಥ ಶೆಟ್ಟಿ ಉಡುಪಿ

(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top