ಬಿಜೆಪಿಯ ಸರಕಾರದ ರಚನೆಯ ಸೂತ್ರ ಹೇಗಿದೆ ಅಂದ್ರೆ ಜಾತಿವಾದ ಮತ್ತು ಹಿಂದುತ್ವ ವಾದ ಎರಡನ್ನೂ ಸಮೀಕರಿಸಿಕೊಂಡು ಸರಕಾರ ರಚನೆಗೆ ಮುಂದಾಗಿದೆ ಅನ್ನುವುದು ಅಷ್ಟೇ ಸ್ವಷ್ಟ.
ಹಿಂದುಳಿದ ವಗ೯ ಪಟ್ಟಿಯಲ್ಲಿಯೇ ಬರುವ ಲಿಂಗಾಯತರಿಗೆ 8 ಮಂದಿಗೆ ಮಂತ್ರಿ ಪದವಿ; ಒಕ್ಕಲಿಗಲಿಗರಿಗೆ 7 ಮಂದಿಗೆ ಮಂತ್ರಿ ಪದವಿ; ಈ 15 ಮಂದಿಗೆ ಅಪ್ಪಟ ಜಾತಿ ಹಿನ್ನೆಲೆಯಲ್ಲಿಯೇ ಸಚಿವ ಪಟ್ಟ ದಕ್ಕಿದೆ ಅನ್ನುವುದು ಅಷ್ಟೇ ಸತ್ಯ. ಇದೇ ಹಿಂದುಳಿದ ವರ್ಗದ ಅಡಿಯಲ್ಲಿ ಬರುವ ಮಿಕ್ಕಿ ಉಳಿದ ಸುಮಾರು 20ಕ್ಕೂ ಹೆಚ್ಚು ಜಾತಿಗಳಿಗೆ ಮಂತ್ರಿ ಸ್ಥಾನ ನೀಡುವಾಗ ಅಪ್ಪಟ ಹಿಂದುತ್ವ ಹಿಂಬಾಲಕರಿಗೆ ಮಣೆ ಹಾಕಿದೆ.
ಅಂತೂ ಜಾತಿ ಬಲವಿಲ್ಲದ ಹಿಂದುತ್ವ ಪ್ರಭಾವಳಿ ಇಲ್ಲದ ಶಾಸಕರಿಗೆ ಆರಲ್ಲ ಹತ್ತು ಬಾರಿ ಶಾಸಕರಾದರೂ ಕವಡೆ ಕಾಸಿನ ಮಯಾ೯ದೆಯೂ ಇಲ್ಲ ಅನ್ನುವುದು ಈಗ ಸ್ವಷ್ಟವಾಗಿದೆ. ಒಂದಂತೂ ನಿಜ ಮೇೂದಿಯನ್ನು ನಂಬಿ ಕೊಂಡು ಬಿಜೆಪಿಗೆ ಮತ ಹಾಕಿದವರಿಗೆ ಭ್ರಮ ನಿರಸನದ ಕಾಲ ಹತ್ತಿರವಾದಂತಿದೆ. ಮತ ಕೇಳುವಾಗ ಮೇೂದಿ ಹೆಸರು ಮಂತ್ರಿ ಸ್ಥಾನ ನೀಡುವಾಗ ಜಾತಿ, ಡೊಗ್ಗು ಸಲಾಮು..!
ಬಿಜೆಪಿಯಲ್ಲಿ ಅಧಿಕಾರ ಪಡೆಯ ಬೇಕಾದರೆ ಅಗತ್ಯವಾಗಿರಬೇಕಾದ ಪ್ರಮುಖವಾದ ಆಹ೯ತೆ ಅಂದರೆ ಶಾಸಕರಾಗಿ ಆಗಾಗ್ಗೆ ಸರ್ಕಾರ ಅಲ್ಲಾಡಿಸುವ ವಲಸಿಗರಾಗಿರಬೇಕು ಹೊರತು ಎಂದಿಗೂ ಮೂಲನಿವಾಸಿಗಳಾಗಲೇ ಬಾರದು.
ಕರಾವಳಿ ಜಿಲ್ಲೆಯಲ್ಲಿ ಹಿಂದುಳಿದ ವಗ೯ದಲ್ಲಿ ಗುರುತಿಸಿ ಕೊಂಡಿರುವ ಬಂಟರ ಯಾನೆ ನಾಡವರ ಜಾತಿಯಲ್ಲಿ ಆರು ಮಂದಿ ಶಾಸಕರಿದ್ದರೂ ಕೂಡಾ ಕುಂದಾಪುರದ ಅಪ್ಪಟ ಜಾತ್ಯತೀತವಾದಿ ಪ್ರಾಮಾಣಿಕ ಶಾಸಕರೆನ್ನಿಸಿಕೊಂಡಿರುವ ಸೇೂಲರಿಯದ ಹಾಲಾಡಿಯವರ ಹೆಸರನ್ನು ಸಚಿವ ಸಂಪುಟಕ್ಕೆ ಪರಿಗಣಿಸದೇ ಇರುವುದು ಬಂಟರ ಮಾತ್ರವಲ್ಲ ಕುಂದಾಪುರದ ಮತದಾರರ ಮನಸ್ಸನ್ನು ಸಾಕಷ್ಟು ಘಾಸಿ ಮಾಡಿರುವುದಂತೂ ನೂರಕ್ಕೆ ನೂರು ಸತ್ಯ. ಹಾಲಾಡಿ ಮನಸ್ಸು ಮಾಡಿದ್ದರೆ ಕನಿಷ್ಠ ಪಕ್ಷ ಮೂರು ಕ್ಷೇತ್ರಗಳನ್ನು ಅಲ್ಲಾಡಿಸುವ ಶಕ್ತಿ ಕುಂದಾಪುರದ ವಾಜಪೇಯಿಗೆ ಇದೆ ಅನ್ನುವುದನ್ನು ಕರಾವಳಿಯ ಸವ೯ ಜಾತಿ ವಗ೯ ಅರಿತು ಕೊಂಡಿದೆ ಅನ್ನುವುದು ಅಷ್ಟೇ ಸತ್ಯ. ಒಂದಂತೂ ಸತ್ಯ ಮುಂದಿನ ದಿನಗಳಲ್ಲಿ ತಮ್ಮ ತಮ್ಮ ಜಾತಿಯ ಹೆಸರಿನಲ್ಲಿಯೇ ಪ್ರಮಾಣ ವಚನ ಮಾಡುವುದೊಂದೇ ಬಾಕಿ ಉಳಿದಿದೆ! ಇದೊಂದು ಸಂಪ್ರದಾಯ ಬಂದು ಬಿಟ್ಟರೆ ನಮ್ಮ ಜಾತ್ಯತೀತ ಪದಕ್ಕೆ ಎಳ್ಳು ನೀರು ಬಿಟ್ಟ ಹಾಗೇ.. ಬಂದರೂ ಆಶ್ಚರ್ಯವಿಲ್ಲ.
ಬಿಜೆಪಿಯಂತಹ ರಾಷ್ಟೀಯ ಪಕ್ಷ ಇದೇ ರೀತಿಯಲ್ಲಿ ಮಣೆ ಹಾಕುತ್ತಾ ಹೇೂದರೆ ಮುಂದೊಂದು ದಿನ ಇದೇ ಪಕ್ಷಕ್ಕೆ ಮುಳುವಾಗುವ ಸಾಧ್ಯತೆಯೂ ಇದೆ. ಅದು ಹೇಗೆಂದರೆ ಪಕ್ಷಕ್ಕಿಂತ ಜಾತಿಯ ಪ್ರಾಬಲ್ಯವಾಗಿ ಬಿಜೆಪಿಯನ್ನೆ ನುಂಗಿ ಹಾಕುವ ಜಾತಿ ಆಧರಿಸಿದ ಪ್ರಾದೇಶಿಕ ಪಕ್ಷದ ಹುಟ್ಟುವಿಗೂ ಇದು ಕಾರಣವಾಗ ಬಹುದು. ಈ ತೊಂದರೆಯನ್ನು ಕಾಂಗ್ರೆಸ್ ಮಾಡಿಕೊಂಡ ಕಾರಣದಿಂದಲೆ ಹಲವು ರಾಜ್ಯಗಳಲ್ಲಿ ಜಾತಿ ಆಧರಿಸಿದ ಪ್ರಾದೇಶಿಕ ಪಕ್ಷಗಳು ಹುಟ್ಟಿ ಬರಲು ಕಾರಣವಾಯಿತು ಅನ್ನುವುದನ್ನು ನಾವು ಮರೆಯುವ ಹಾಗಿಲ್ಲ. ಭಾರತೀಯರನ್ನು ಭಾರತೀಯರಾಗಿ ಕಾಣಬೇಕೆಂಬ ಭಾರತೀಯ ಜನತಾ ಪಕ್ಷ ಜಾತಿಯ ಪಕ್ಷವಾಗಿ ಮೇಳೆೈಸುತ್ತಿರುವುದು ಪಕ್ಷ ಸಿದ್ಧಾಂತಕ್ಕೆ ನಿಜಕ್ಕೂ ಅಪಾಯಕಾರಿ ಬೆಳವಣಿಗೆ ಎಂದೇ ಭಾವಿಸಬೇಕಾಗಿದೆ.
-ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ