ಇದು ಮಣಿಪಾಲದ ಕೃಷಿಕ ಶಿವರಾಮ ಭಟ್ಟರು ತಮ್ಮ ಮನೆಯಂಗಳದ ಮರಕ್ಕೆ ಹಬ್ಬಿಸಿ ಬೆಳೆಸಿದ ಕಾಳುಮೆಣಸಿನ ಬಳ್ಳಿ. ಏನಿದರ ವಿಶೇಷತೆ? 20+ ವರ್ಷದ ಬಳ್ಳಿ. ಇಷ್ಟೂ ವರ್ಷಗಳಲ್ಲಿ ಯಾವುದೇ ರೋಗಬಾಧೆ ಇಲ್ಲ. ಯಾವುದೇ ಪೋಷಕಾಂಶವನ್ನೂ ಕೊಡಲಿಲ್ಲ. ಹಾಗಿದ್ದರೂ ಸೊಂಪಾಗಿ ಬೆಳೆದಿದೆ. ಉತ್ತಮ ಫಸಲನ್ನೂ ಕೊಡುತ್ತಿದೆ.
ಕಾರಣವಿಷ್ಟೆ, ಅವರು ಅನುಸರಿಸುತ್ತಿರುವುದು ದೇಸೀ ಗೋವು ಆಧರಿತ ವಿಷಮುಕ್ತ ನೈಸರ್ಗಿಕ ಕೃಷಿ. ಅವರ ಸ್ವಂತ ಅನುಭವದ ಹಿನ್ನೆಲೆಯಲ್ಲಿ, ಆತ್ಮವಿಶ್ವಾಸದಿಂದ ಅವರು ಹೇಳುವ ಮಾತಿದು.
ಅವರದೇ ಮಾತಿನಲ್ಲಿ:
ಕೃಷಿ ವಿಜ್ಞಾನಿಗಳ ಪ್ರಕಾರ, ಪ್ರತೀ ವರ್ಷ ಅದಕ್ಕೆ ಬೋರ್ಡೊ ಸ್ಪ್ರೇ, ರಾಸಾಯನಿಕ ಗೊಬ್ಬರ ಹಾಕುವವರು ಹಾಕಿಕೊಳ್ಳಬಹುದು. ಆದರೆ ನನ್ನ ಈ ಗಿಡಗಳಲ್ಲಿ, ಯಾವುದೇ ರೋಗ ಇಲ್ಲ. ಇದಕ್ಕೆ ಕೃಷಿ ವಿಜ್ಞಾನಿಗಳಿಂದ ಉತ್ತರ ಇಲ್ಲ, ಅದಕ್ಕೆ ಕಾರಣ ಕಂಡು ಹಿಡಿಯುವ ಪ್ರಯತ್ನ ಇಲ್ಲ, ಇಂತಹ ಕೃಷಿಗೆ ಪ್ರೋತ್ಸಾಹ ಕೂಡಾ ಇಲ್ಲ. ಇದನ್ನು ತಿಳಿಯಬೇಕು ಎಂಬ ಆಸಕ್ತಿ ಕೂಡಾ ಇಲ್ಲ.
-ಶಿವರಾಮ ಭಟ್, ಮಣಿಪಾಲ
Key Words: ನೈಸರ್ಗಿಕ ಕೃಷಿ, ಗೋವು ಆಧರಿತ ಕೃಷಿ, Natural Farming, Cow based farming,
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ