ದಕ್ಷಿಣ ಕನ್ನಡ ಜಿಲ್ಲೆಯ ಮಾಣಿ ಎಂಬ ಪುಟ್ಟ ಹಳ್ಳಿಯಲ್ಲಿ ತಲೆಯೆತ್ತಿ ನಿಂತಿರುವ ನಮ್ಮ ಈ ಪ್ರೌಢಶಾಲೆಯಲ್ಲಿ ಅದೆಷ್ಟೋ ಮಕ್ಕಳು ವಿದ್ಯಾಭ್ಯಾಸ ಮಾಡಿ ದೇಶ ವಿದೇಶಗಳಲ್ಲಿ ಉತ್ತಮ ನಾಗರಿಕರಾಗಿದ್ದುಕೊಂಡು ಕಲಿಸಿದ ಗುರುಗಳು ಸಂತೃಪ್ತ ಭಾವದಿಂದ "ನಮ್ಮ ವಿದ್ಯಾರ್ಥಿ" ಎಂದು ಹೆಮ್ಮೆಯಿಂದ ಹೇಳುವಂತೆ ಸಂತೋಷದಿಂದ ಜೀವನ ಸಾಗಿಸುತ್ತಿದ್ದಾರೆ.
ನಮ್ಮೀ ಶಾಲೆಯಲ್ಲಿ ಪಠ್ಯವಿಷಯಗಳೊಂದಿಗೆ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದ, ಜೀವನ ನಡೆಸಲು ಅನುಕೂಲಕರವಾದ ಅನೇಕ ಪಠ್ಯೇತರ ಚಟುವಟಿಕೆಗಳು ನಡೆಯುತ್ತಿವೆ. ಅವುಗಳಲ್ಲಿ ಜೇನುಕೃಷಿಯೂ ಒಂದು. ಕೊರೋನ ಪ್ರಾರಂಭವಾದ ಅನಂತರ ಎಲ್ಲ ಚಟುವಟಿಕೆಗಳೂ ಸ್ಥಗಿತಗೊಂಡಿವೆ. ಕೇವಲ ನೆನಪು ಮಾತ್ರ.
ಸುಮಾರು ಇಪ್ಪತ್ತು ವರ್ಷಗಳಿಂದ ಪ್ರತಿ ವರ್ಷ ಅಕ್ಟೋಬರ್ ತಿಂಗಳ ವಿರಾಮದ ಅವಧಿಯಲ್ಲಿ ಮಕ್ಕಳಿಗೆ ಎರಡು ದಿನಗಳ ಉಚಿತ ಜೇನು ಕೃಷಿ ತರಬೇತಿಯನ್ನು ನಮ್ಮ ಶಾಲೆ ಕೊಡುತ್ತದೆ.ಅದಕ್ಕಾಗಿ ಜೇನು ಸಂಘ ಈ ನಮ್ಮ ಶಾಲೆಯಲ್ಲಿದೆ. ಪ್ರತಿ ವರ್ಷ 60-70 ವಿದ್ಯಾರ್ಥಿಗಳು ಜೇನುಸಂಘದ ಸದಸ್ಯರಾಗಿ ಜೇನುಕೃಷಿಯ ತರಬೇತಿ ಪಡೆಯುತ್ತಾರೆ.
ಶಾಲೆಯ ಜಗಲಿಯಲ್ಲಿ ಜೇನು ಸಾಕಣೆ ಇದೆ.ತರಬೇತಿಯ ಸಂದರ್ಭದಲ್ಲಿ ಪಕ್ಕದ ಜೇನು ಕೃಷಿಕರ ತೋಟಕ್ಕೆ ಹೋಗಿ ಜೇನು ಕೃಷಿ ಪ್ರಾತ್ಯಕ್ಷಿಕೆ ಎಲ್ಲವೂ ನಡೆಯುತ್ತಿತ್ತು. ಮಕ್ಕಳ ಆಸಕ್ತಿ, ಕುತೂಹಲದ ಪ್ರಶ್ನೆಗಳು ಎಲ್ಲವೂ ಆನಂದದಾಯಕ.
ಎಳವೆಯಲ್ಲೇ ಜೇನುಕೃಷಿಯ ಬಗ್ಗೆ ಆಸಕ್ತಿಯನ್ನು ಬೆಳೆಸಿದರೆ ಮುಂದೆ ಈ ಮಕ್ಕಳು ಜೇನ್ನೊಣಗಳಿಂದ ಮಾನವನಿಗೆ ಆಗುವ ಸಹಾಯವನ್ನು ಮನಗಂಡು ಅವುಗಳಿಗೆ ತೊಂದರೆ ಕೊಡದೆ ಸಾಧ್ಯವಿದ್ದರೆ ಜೇನುಕೃಷಿ ಮಾಡಿ ಫಲವಸ್ತುಗಳ ಹೆಚ್ಚಳಕ್ಕೆ ತಮ್ಮದೇ ಕೊಡುಗೆ ಕೊಟ್ಟಂತಾಗುತ್ತದೆ.
ಜೀವನದ ಕಷ್ಟದ ಸಮಯದಲ್ಲಿ ಆರ್ಥಿಕ ಲಾಭ, ಮನಸ್ಸಂತೋಷ, ಶಾರೀರಿಕ ಆರೋಗ್ಯ ಎಲ್ಲವೂ ಈ ಜೇನುಕೃಷಿಯಿಂದ ಸಾಧ್ಯ. ಕೇವಲ ಪುಸ್ತಕದ ಪಾಠದಿಂದ ಏನನ್ನು ಸಾಧಿಸಲು ಸಾಧ್ಯ? ಅದರೊಂದಿಗೆ ಜೀವನದ ಪಾಠವೂ ಮಕ್ಕಳಿಗೆ ದೊರೆತರೆ ಒಳ್ಳೆಯದಲ್ಲವೇ?
ಪಾಠದ ಮೊದಲು ಪ್ರಾಣಾಯಾಮ, ಧ್ಯಾನ...
ಮಕ್ಕಳಲ್ಲಿ ಅಭಿರುಚಿಯ ಬೀಜಗಳನ್ನು ಬಿತ್ತಿದರೆ ಅವರೊಂದಿಗೆ ಅವುಗಳೂ ಬೆಳೆದು ಮುಂದೊಂದು ದಿನ ನಾಲ್ಕಾರು ಜನಗಳಿಗೆ ಉಪಕಾರವಾದರೆ ನಾವೂ ಧನ್ಯರು.
Key Words: Honey Bee, Bee Keeping, ಜೇನು ಸಾಕಣೆ
-ಶಿರಂಕಲ್ಲು ಕೃಷ್ಣ ಭಟ್
7975159138
Visit: Upayuktha Directory- You get here You want
‘ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ