"ಕನಸು ಕಾಣಬೇಕು ಆದರೆ, ಅದು ಅದು ನಿದಿರೆಯಲ್ಲಿ ಬರೋ ಕನಸಾಗಿರಬಾರದು; ನಿದಿರೆಯೇ ಬರದಂತೆ ತಡೆಯುವ ಕನಸಾಗಿರಬೇಕು" ಎಂಬ ಅಬ್ದುಲ್ ಕಲಾಂ ಅವರ ಮಾತುಗಳು ಇಂದಿಗೂ ಅಥ೯ಪೂಣ೯ವಾಗಿದೆ. ಅವರ ಮಾತಿನಂತೆಯೇ ನಿದಿರೆಯನ್ನೇ ದೂರವಿಟ್ಟು ಕಂಡ ಕನಸನ್ನು ಮಾಡಿಕೊಂಡವರು ಕುದ್ಮಾರಿನ ನವ್ಯಶ್ರೀ ಕೆ.
ತನ್ನ ಕನಸಿನ ಕ್ರೀಡೆಯಾದ ಕಬಡ್ಡಿಯಲ್ಲೇ ಸಾಧನೆ ಮಾಡಿ ಅದರಿಂದಲೇ ಉದ್ಯೋಗವನ್ನು ಪಡೆಯಬೇಕು ಎಂಬುದು ಇವರ ಮಹದಾಸೆಯಾಗಿತ್ತು. ತನ್ನ ಕಠಿಣ ಪರಿಶ್ರಮದಿಂದಲೇ ಸಾಧನೆ ಮಾಡಿ ಇಂದು ಸಕಾ೯ರಿ ಉದ್ಯೋಗವನ್ನು ಪಡೆದುಕೊಂಡಿದ್ದಾರೆ. ಇವರು ಮೂಲತಃ ಕಡಬ ತಾಲೂಕಿನ ಕುದ್ಮಾರಿನ ಖಂಡಿಗ ನಿವಾಸಿ ಶೀನಪ್ಪ ಗೌಡ ಮತ್ತು ಪುಷ್ಪಾವತಿ ದಂಪತಿಗಳ ಪುತ್ರಿ.
ಬಾಲ್ಯದಿಂದಲೇ ಕ್ರೀಡಾ ಸಾಧನೆಗೆ ಹೊರಟಿದ್ದ ಇವರು ಭವಿಷ್ಯದಲ್ಲಿ ತಾನು ಕಬಡ್ಡಿಯಿಂದಲೇ ಉದ್ಯೋಗವನ್ನು ಪಡೆಯಬೇಕು ಎಂಬ ಕನಸನ್ನು ಹೊಂದಿದ್ದರು. ಇಂದು ತನ್ನ ಕನಸನ್ನು ನನಸು ಮಾಡಿಕೊಂಡಿರುವ ನವ್ಯಶ್ರೀ ಕರ್ನಾಟಕ ಸರ್ಕಾರದ ಅರಣ್ಯ ಇಲಾಖೆಯಲ್ಲಿ ಉದ್ಯೋಗಿಯಾಗಿದ್ದಾರೆ. ಆಂಧ್ರಪ್ರದೇಶ, ಕೇರಳ, ಮುಂಬೈ, ರಾಜಸ್ಥಾನ್, ಗುಜರಾತ್ ಮುಂತಾದ ಕಡೆಗಳಲ್ಲಿ ನಡೆದ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಹದಿನಾಲ್ಕು ಬಾರಿ ಕರ್ನಾಟಕ ತಂಡವನ್ನು ಪ್ರತಿನಿಧಿಸುವುದು ನವ್ಯಶ್ರೀ ಅವರ ವಿಶೇಷ ಸಾಧನೆ ಸರಿ.
ಮಂಗಳೂರು ವಿಶ್ವವಿದ್ಯಾನಿಲಯದ ತಂಡವನ್ನು ಎರಡು ಬಾರಿ ಪ್ರತಿನಿಧಿಸಿದ್ದಾರೆ. ಮೂರು ಬಾರಿ ಏಷ್ಯನ್ ಗೇಮ್- ಏಷ್ಯನ್ ಚಾಂಪಿಯನ್ ಶಿಪ್ ಗೂ ಕರ್ನಾಟಕ ತಂಡದಿಂದ ಆಯ್ಕೆಯಾಗಿದ್ದಾರೆ. 2015ರ ಕರ್ನಾಟಕ ಒಲಿಂಪಿಕ್ ಅಸೋಸಿಯೇಷನ್ ಅವಾರ್ಡ್ ನ್ನು ಪಡೆದುಕೊಂಡಿದ್ದಾರೆ.
"ಭವಿಷ್ಯದಲ್ಲಿ ತಾನು ಕಬಡ್ಡಿಯಿಂದಲೇ ಸಕಾ೯ರಿ ಉದ್ಯೋಗವನ್ನು ಗಿಟ್ಟಿಸಿಕೊಳ್ಳಬೇಕು ಎಂಬ ಕನಸನ್ನು ಹೊಂದಿದ್ದೆ. ಹಾಗೆಯೇ, ಇಂದು ನನಗೆ ಉತ್ತಮ ಕೆಲಸವೂ ಸಿಕ್ಕಿದೆ. ತುಂಬಾ ಹೆಮ್ಮೆ ಇದೆ. ನನ್ನ ಈ ಸಾಧನೆಗೆ ಸ್ಪೂರ್ತಿ ನೀಡಿದವರು ಹೆತ್ತವರು ಮತ್ತು ಗುರುಗಳು. ಇನ್ನು ಮುಂದೆಯೂ ನಾನು ನನ್ನ ಕತ೯ವ್ಯದ ಜೊತೆಗೆ ಕಬಡ್ಡಿಯಲ್ಲಿ ಕನಾ೯ಟಕ ತಂಡವನ್ನು ಪ್ರತಿನಿಧಿಸಬೇಕೆಂಬ ಆಸೆ ಇದೆ" ಎನ್ನುತ್ತಾರೆ ನವ್ಯಶ್ರೀ.
ತನ್ನ ಪ್ರಾಥಮಿಕ ಶಿಕ್ಷಣವನ್ನು ಕುದ್ಮಾರು ಸಕಾ೯ರಿ ಶಾಲೆಯಲ್ಲಿ ಮತ್ತು ಪ್ರೌಢ ಶಿಕ್ಷಣವನ್ನು ಕಾಣಿಯೂರಿನ ಪ್ರಗತಿ ವಿದ್ಯಾಸಂಸ್ಥೆಯಲ್ಲಿ ಪಡೆದರು. ತನ್ನ ಪದವಿ ಪೂರ್ವ ಮತ್ತು ಪದವಿ ಶಿಕ್ಷಣವನ್ನು ಪುತ್ತೂರಿನ ದಬೆ೯ಯ ಸಂತ ಫಿಲೋಮಿನಾ ಕಾಲೇಜಿನಲ್ಲಿ ಪೂರ್ಣಗೊಳಿಸಿ, ಪ್ರಸ್ತುತ ಬೆಂಗಳೂರಿನಲ್ಲಿ ಅರಣ್ಯ ಇಲಾಖೆಯಲ್ಲಿ ಕಾಯ೯ ನಿವ೯ಹಿಸುತ್ತಿದ್ದಾರೆ. ಕುದ್ಮಾರು ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿಯಾದ ಶ್ರೀಮತಿ ರೇವತಿ, ಪ್ರಗತಿ ವಿದ್ಯಾಸಂಸ್ಥೆಯ ಶಿಕ್ಷಕರಾದ ಗಿರಿಶಂಕರ ಸುಲಾಯ ಮತ್ತು ಜಯಸೂರ್ಯ ರೈ ಮಾದೋಡಿ ಹಾಗೂ ಫಿಲೋಮಿನಾ ಕಾಲೇಜಿನ ದೈಹಿಕ ಶಿಕ್ಷಣ ಶಿಕ್ಷಕರಾದ ಪ್ರಕಾಶ್, ಅಬೀಬ್ ಹಾಗೂ ಏರಿಯಾಸ್ ಪಿಂಟೋ ಇವರಿಂದ ನವ್ಯಶ್ರೀ ಅವರು ಕ್ರೀಡಾ ಮಾಗ೯ದಶ೯ನವನ್ನು ಪಡೆದಿದ್ದಾರೆ. ಉದ್ಯೋಗದಲ್ಲಿ ಇದ್ದುಕೊಂಡೇ ತನ್ನ ಸಾಧನೆಯನ್ನು ಮುಂದುವರಿಸಿಕೊಂಡು ಹೋಗಬೇಕೆಂಬ ಹಂಬಲ ಹೊಂದಿರುವ ನವ್ಯಶ್ರೀ ಅವರು ಇಂದಿನ ಸಮಾಜಕ್ಕೆ ಸ್ಫೂರ್ತಿಯಾಗಲಿ ಎಂದು ಆಶಿಸೋಣ.
-ಸರೋಜ ಪಿ.ಜೆ ದೋಳ್ಪಾಡಿ
ದ್ವಿತೀಯ ಬಿ.ಎ ಪತ್ರಿಕೋದ್ಯಮ ವಿಭಾಗ
ವಿವೇಕಾನಂದ ಪದವಿ ಕಾಲೇಜು ಪುತ್ತೂರು
(ಉಪಯುಕ್ತ ನ್ಯೂಸ್)
Visit: Upayuktha Directory- You get here You want
‘ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ