ಹಲೋ, ಹೇಗಿದ್ದೀರಾ?
ನಮ್ಮ ಜೀವನದಲ್ಲಿ ನಾವು ಪ್ರತಿಯೊಂದಕ್ಕೂ ಲೆಕ್ಕಾಚಾರ ಮಾಡಿದಂತೆ ನಮ್ಮ ಬದುಕು ಸಹ. ತನ್ನದೇ ಆದ ಲೆಕ್ಕಾಚಾರ ಹೊಂದಿರುತ್ತದೆ.
ನಮಗೆ ಬೇಕಾದ ಸಂಪನ್ಮೂಲಗಳನ್ನು ಹೆಚ್ಚಿಸಿಕೊಂಡು, ಬೇಡವಾದ ವ್ಯಕ್ತಿಗಳನ್ನು ತೆಗೆದು ಹಾಕಿ, ಖುಷಿಯನ್ನು ಗುಣಿಸಿ, ನಮ್ಮ ದೌರ್ಬಲ್ಯ ಭಾಗಿಸಿದರೆ, ನಮ್ಮ ಜೀವನದಲ್ಲಿ ಯಶಸ್ಸು ಎಂಬ ಉತ್ತರ ಸಿದ್ಧ.
ಆದರೆ ಎಷ್ಟೋ ಸಾರಿ, ಬದುಕು ತನ್ನದೇ ಆದ ಸಮೀಕರಣ ಹೊಂದಿರುತ್ತದೆ. ಬದುಕು ಎಷ್ಟೋ ಸಾರಿ ತನ್ನದೇ ಆದ a ಮತ್ತು b ಹೆಸರಿನಲ್ಲಿ ವ್ಯಕ್ತಿಗಳು ಪ್ರವೇಶವಾಗಿ ಅವರು ನಮ್ಮ ಜೀವನದ ಲೆಕ್ಕಾಚಾರದಲ್ಲಿ ತಮ್ಮ ದಾಳ ಉರುಳಿಸಿ ನಮ್ಮ ಜೀವನವನ್ನು ಎಲ್ಲೆಲ್ಲಿಯೋ ಕೊಂಡೊಯ್ಯುತ್ತಾರೆ.
ನಮ್ಮ ಜೀವನದ ಮೇಲೆ ನಮ್ಮ ಹತೋಟಿ ಇದ್ದರೆ, ನಮಗೆ ಬೇಕಾದ ಉತ್ತರ ಸಿಗುತ್ತದೆ, ಇಲ್ಲದಿದ್ದರೆ ಲೆಕ್ಕಾಚಾರ. ಹದಗೆಡುವ ಸಂಭವ ಇರುತ್ತದೆ. ನಮ್ಮ ಜೀವನದಲ್ಲಿ, ನಮ್ಮ ಸಂಪನ್ಮೂಲ ಅರಿತು. ಕೊಂಡು,ಲೆಕ್ಕಾಚಾರ ಹಾಕಿದರೆ ತಪ್ಪು ವ್ಯಕ್ತಿಗಳಿಗೆ check out ಕೊಟ್ಟರೆ, ಒಳ್ಳೆಯ ವ್ಯಕ್ತಿಗಳು get in ಆದರೆ. ಉತ್ತಮ ಸಮೀಕರಣ ಸಾಧ್ಯ ಅಲ್ಲವೇ? ಏನಂತೀರಾ?
-ಗಾಯತ್ರಿ ಸುಂಕದ, ಬದಾಮಿ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


