ತೋರಬೇಡ ನಿನ್ನ ಎದೆಯಾಳದ ಗಾಯವ ಯಾರ ಮುಂದೆ,
ಕಣ್ಣೀರು ಸುರಿಸುವರು ಇಲ್ಲಿ ಕೇವಲ ನಾಟಕದ ಹಿಂದೆ ll೦೧ll
ಹೊರಗೆ ನಗುವ ಮುಖವಾಡ, ಒಳಗೆ ಮುರಿದ ಪಂಜರ,
ನಿನ್ನ ನೋವ ಕಂಡು ನಗುವವರೇ ಇಲ್ಲಿ ಅತಿ ಚತುರ ll೦೨ll
ಕಲ್ಲು ಮುಳ್ಳಿನ ಹಾದಿಯಲಿ ನಡದೇ ಗೆಲುವ ಪಥ ಸಿಗುವುದು,
ಸಂಕಷ್ಟದ ಬೆಂಕಿಯಲಿ ಬೆಂದಾಗಲೇ ಬದುಕು ಬೆಳಗುವುದು ll೦೩ll
ನಿನ್ನ ಪ್ರತಿ ಕಣ್ಣೀರಿನ ಹನಿಯೂ ಸಫಲತೆಯ ಹಾದಿಯಾಗಲಿ,
ಇಂದಿನ ಈ ಮೌನದ ನೋವೇ ಮುಂದೊಂದು ದಿನ ಇತಿಹಾಸವಾಗಲಿ ll೦೪ll
- ಕುಮಾರಿ ರೂಪಾ ಬಿ. ನಾಟೀಕಾರ ಮುದ್ದೇಬಿಹಾಳ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


