ಸಂಗೀತದ ಜೊತೆಗೆ ಧಾರ್ಮಿಕ ಸಾಂಸ್ಕೃತಿಕ ಮೌಲ್ಯಗಳನ್ನು ದಾಟಿಸಬೇಕಾಗಿದೆ: ಎಡನೀರು ಶ್ರೀಗಳು

Upayuktha
0


ಬದಿಯಡ್ಕ: ಕಾಸರಗೋಡಿನ ಬದಿಯಡ್ಕ ಬಳಿಯ ವೀಣಾವಾದಿನಿ ಸಂಗೀತ ವೈದಿಕ ತಾಂತ್ರಿಕ ವಿದ್ಯಾಪೀಠದ ನಾಲ್ಕು ದಿನಗಳ ಕಾಲದ ವಾರ್ಷಿಕೋತ್ಸವದ ಉದ್ಘಾಟನಾ ಕಾರ್ಯಕ್ರಮ ಇಂದು ಜರುಗಿತು.


ಉದ್ಘಾಟನೆ ನೆರವೇರಿಸಿದ ಎಡನೀರಿನ ಸ್ವಾಮೀಜಿಗಳಾದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಯುವ ತಲೆಮಾರಿಗೆ ಭಾರತೀಯ ಶಾಸ್ತ್ರೀಯ ಸಂಗೀತ ಶಿಕ್ಷಣ ನೀಡುತ್ತಿರುವ ವೀಣಾವಾದಿನಿ ಸಂಸ್ಥೆಯನ್ನು ಶ್ಲಾಘಿಸಿದರಲ್ಲದೆ ಸಂಗೀತದ ಜೊತೆಗೆ ಸಂಸ್ಕೃತಿಯ ಮೌಲ್ಯವನ್ನು ಎತ್ತಿ ಹಿಡಿಯುವ ಈ ಶಿಕ್ಷಣ ಸಂಸ್ಥೆ ಕಾಸರಗೋಡಿನಲ್ಲಿ ಅದ್ದಿತೀಯವಾದದ್ದು ಎಂದು ವರ್ಣಿಸಿದರು.


ಈ ಪರಿಸರದಲ್ಲಿ ಕನ್ನಡ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಪ್ರಯತ್ನ ನಡೆಯಬೇಕಾಗಿದೆ. ಜೊತೆಗೆ ಭಾರತೀಯ ಪರಂಪರೆಯ ಧಾರ್ಮಿಕ ಸಾಂಸ್ಕೃತಿಕ ತಿಳುವಳಿಕೆಯನ್ನು ಯುವ ಜನತೆಗೆ ನೀಡಬೇಕಾಗಿದೆ ಎಂದು ಹೇಳಿದರು. ವೇದಿಕೆಯಲ್ಲಿ ಕೇರಳದ ಅಲ್ವಾಯಿಯ ತಾಂತ್ರಿಕ ವಿದ್ಯಾಪೀಠದ ಪ್ರಾಂಶುಪಾಲರಾದ ಪುತ್ತೂರಿನ ಪೈರಪುಣಿ ಬಾಲಕೃಷ್ಣ ಭಟ್, ಬ್ರಹ್ಮಶ್ರೀ ಮುಲ್ಲಪಲ್ಲಿ ಕೃಷ್ಣನ್ ನಂಬೂದಿರಿ, ಬದಿಯಡ್ಕದ ವೈದ್ಯ ಡಾ. ಶ್ರೀನಿಧಿ ಸರಳಾಯ ಹಾಗೂ ಬೇಳದ ಕೌಮುದಿ ನೇತ್ರಾಲಯದ ನೇತ್ರತಜ್ಞ ಡಾ.ಸುನಿಲ್ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ರಾಜಾರಾಮ್ ಪೆರ್ಲ ಅವರು ನಿರ್ವಹಿಸಿದರು. ಸಂಚಾಲಕರಾದ ಯೋಗೀಶ ಶರ್ಮ ಅವರು ವಿದ್ಯಾಲಯದ ಬಗ್ಗೆ ಪ್ರಾಸ್ತಾವಿಕವಾಗಿ ಮಾತಾಡಿದರು. ಶ್ರೀಹರಿ ನೀಲಂಗಳ ಅವರು ವಂದಿಸಿದರು.


ಬಳಿಕ ಸಂಗೀತ ಗುರುಗಳು ಹಾಗೂ ವಿದ್ಯಾರ್ಥಿಗಳ ಸಾಮೂಹಿಕ ನವಾವರಣ ಸಂಗೀತದ ಜೊತೆಗೆ ಮುಲ್ಲಪಲ್ಲಿ ಕೃಷ್ಣನ್ ನಂಬೂದಿರಿ ನೇತೃತ್ವದಲ್ಲಿ ಅಪರೂಪದ ಶ್ರೀಚಕ್ರ ಪೂಜೆ ಜರಗಿತು.


ಬೆಳಗ್ಗೆ ಉದ್ಘಾಟನೆಯ ಬಳಿಕ ಶ್ರೀಶಂಕರನ್ ಮಳಿಯೂರು ಎಂಬ ಪ್ರತಿಭಾವಂತ ಬಾಲಕಲಾವಿದನ ನೇತೃತ್ವದಲ್ಲಿ ಸಮನ್ವಯ ಎಂಬ ವಿವಿಧ ವಾದ್ಯವಾದನಗಳ ಸಂಯೋಗದಲ್ಲಿ ಫ್ಯೂಶನ್ ವಾದ್ಯಮೇಳ ಜರಗಿತು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top