ಕುಮಾರಿ ವಾಸವಿ ವಿನೂತನಳ ಭರತನಾಟ್ಯ ರಂಗ ಪ್ರವೇಶ

Upayuktha
0


ಬೆಂಗಳೂರು: ನಿರಂತರ ಸ್ಕೂಲ್ ಆಫ್ ಡಾನ್ಸ್ ಸಂಸ್ಥೆಯ ಗುರುಗಳಾದ ವಿದುಷಿ ಸೌಮ್ಯ ಸೋಮಶೇಖರ್ ಹಾಗೂ ವಿದ್ವಾನ್ ಸೋಮಶೇಖರ್ ಚುಡನಾಥ್ ಇವರ ಶಿಷ್ಯಯಾದ ಕುಮಾರಿ ವಾಸವಿ ವಿನೂತನಳ ಭರತನಾಟ್ಯ ರಂಗ ಪ್ರವೇಶ ಕೆಆರ್ ಪುರಂ ನಲ್ಲಿರುವ 'ಜನಪದರು' ಸಭಾಂಗಣದಲ್ಲಿ ನಡೆಯಿತು.


ಸಾಂಪ್ರದಾಯಿಕವಾದ ಪೂಜೆಯೊಂದಿಗೆ ಪ್ರಾರಂಭಿಸಿ, ಗುರುಗಳ ಬಳಿ ಗೆಜ್ಜೆಗಳನ್ನು ಪಡೆದು ಅವರ ಆಶೀರ್ವಾದದೊಂದಿಗೆ ಹಾಗೂ ತಂದೆ ತಾಯಿಯರಾದ ಲಕ್ಷ್ಮಿ ಸುದೀಪ್ತಿ ಹಾಗೂ ರಾಮ್ ಕುಮಾರ್ ರವರ ಆಶೀರ್ವಾದದೊಂದಿಗೆ ಗುರುಹಿರಿಯರ ಸಮ್ಮುಖದಲ್ಲಿ ಶುಭ ಪ್ರಾರಂಭ ಮಾಡಿದಳು.


ಭರತನಾಟ್ಯ ಮಾರ್ಗದ ಪ್ರಾರಂಭಿಕ ನೃತ್ಯಬಂದವಾದ ಪುಷ್ಪಂಜಲಿಯೊಂದಿಗೆ ವಿಘ್ನ ನಿವಾರಕ ವಿನಾಯಕನ ಕುರಿತಾದ "ಗಜವದನಾ ಕರುಣಾ ಸದನ" ಎಂಬ ಸ್ತುತಿಯೊಂದಿಗೆ ರಂಗಪ್ರವೇಶ ಪ್ರಾರಂಭವಾಯಿತು. ದುಷ್ಟ ಶಿಕ್ಷಣ ಶಿಷ್ಟ ರಕ್ಷಣಾ ಮಾಡುವ ಪರಿಯನ್ನು ಮಹಿಷಾಸುರ ಸಂಹಾರದೊಂದಿಗೆ ವಿವರಿಸುತ್ತಾ ದುರ್ಗೆಯ ಹಲವಾರು ರೂಪಗಳನ್ನು ದುರ್ಗಾ ಕೌತ್ವಂ ಮುಖಾಂತರ ನೃತ್ಯ ಪ್ರದರ್ಶನ ಮುಂದುವರೆಯಿತು. ದುರ್ಗೆಯ ಸಾಕ್ಷಾತ್ಕಾರ ಬಹಳ ಸೊಗಸಾಗಿ ರೂಪುಗೊಂಡಿತು. ದಾಸ ಶ್ರೇಷ್ಠರಾದ ಪುರಂದರದಾಸರ “ವೇಂಕಟಾಚಲ ನಿಲಯಂ” ಕೃತಿಯೊಂದಿಗೆ ವಾಸವಿ ವಿನೂತ್ ನ ಸಭಿಕರೆಲ್ಲರನ್ನು ವೈಕುಂಠಪುರಕ್ಕೆ ಕರೆದೊಯ್ದಳು. ಶಂಖ ಚಕ್ರ ಗದಾಪದ್ಮ ಸಹಿತನಾದ ವೆಂಕಟೇಶನ ವರ್ಣನೆಯನ್ನು ಬಹಳ ಸುಂದರವಾಗಿ ಈ ಕೃತಿಯಲ್ಲಿ ಪ್ರದರ್ಶಿಸಲಾಗಿತ್ತು. ಆನಂತರ ಪದವರ್ಣ ದೊಂದಿಗೆ ವಿನೂತ್ನ- ತನ್ನ ಶಕ್ತಿ ಸಾಮರ್ಥ್ಯವನ್ನು, ಜತಿಗಳ ಮೇಲಿರುವ ಹಿಡಿತವನ್ನು, ಸೃಜನಾತ್ಮಕ ಕೌಶಲ್ಯವನ್ನು, ಭಕ್ತಿರಸಭರಿತವಾದ ಅಭಿನಯದೊಂದಿಗೆ ತನ್ನ ನೃತ್ಯದ ಮುಖಾಂತರ ಸಭೆಯಲ್ಲಿದ್ದ ಕಲಾ ರಸಿಕರ ಮನಸೆಳೆದಳು.


ಮುಂದಿನ ನೃತ್ಯ ಬಂದಗಳನ್ನು ಶ್ರೀ ಕೃಷ್ಣನಿಗೆ ಸಮರ್ಪಿಸುತ್ತಾ ಜಾವಳಿಯೊಂದಿಗೆ ಪ್ರಾರಂಭಿಸಿದಳು. ವಿದ್ವಾನ್‌ ಪ್ರಸನ್ನ ಕುಮಾರ್‌ ರವರ ರಚನೆಯ “ನೋಡಿದಾಕ್ಷಣ” ಎಂಬ ಜಾವಳಿಗೆ ವಿನೂತ್ನಾಳ ರಸಭರಿತವಾದ ಅಭಿನಾಯ ಶ್ರೀ ಕೃಷ್ಣನಿಗಾಗಿ ಕಾತುರದಿಂದ ಕಾಯುವ ಗೋಪಿಯ ಮನಸ್ಸನ್ನು ಪ್ರತಿಬಿಂಬಿಸಿತು. ಕಾಣುವಷ್ಟು ಹತ್ತಿರದಲ್ಲಿದ್ದರೂ ಸಿಗದಷ್ಟು ದೂರದಲ್ಲಿದ್ದ ಕೃಷ್ಣನ ಕೈಯಲ್ಲಿದ್ದ ಕೊಳಲು, ತಲೆಯ ಮೇಲಿನ ನವಿಲುಗರಿ ತಾನಾಗಬಾರದೇ ಎಂಬ ಹಂಬಲ ಬಹಳಾ ಸುಂದರವಾಗಿ ರೂಪುಗೊಂಡಿತು. ಈ ಚಿತ್ರಣವನ್ನು ಮುಂದಕ್ಕೆ ಕೊಂಡೊಯ್ಯುತ್ತಾ “ವಾರಣಂಆಯಿರಂ” ನಲ್ಲಿ ಆಂಡಾಳ್‌ (ಗೋದಾದೇವಿ) ಆಗಿ, ಕನಸಿನಲ್ಲಿ ಶ್ರೀ ಕೃಷ್ಣನೊಂದಿಗೆ ವಿವಾಹವಾದ ವಿವರಣೆಯನ್ನು ಸೊಗಸಾಗಿ ಪ್ರದರ್ಶಿಸಲಾಯಿತು. ಡಾ|| ಬಾಲಮುರಳಿ ಕೃಷ್ಣ ರವರ ರಚನೆಯ ಕದನಕುತೂಹಲ ರಾಗದ ತಿಲ್ಲಾನ ಜನ ಮನಸೂರೆಗೊಂಡಿತು. ಸುಮಾರು 9೦ ನಿಮಿಷಗಳ ಕಾಲ ನೃತ್ಯ ಪ್ರದರ್ಶನ ಮಾಡಿದ್ದರೂ ಯಾವುದೇ ರೀತಿಯಲ್ಲಿ ಶಕ್ತಿಗುಂದದೆ, ಚೈತನ್ಯ ಭರಿತಳಾಗಿ ತಿಲ್ಲಾನವನ್ನು ಮಾಡಿದಳು. ಪುಟ್ಟಪರ್ತಿ ಸಾಯಿ ಬಾಬಾರವರ 100ನೇ ಜನ್ಮದಿನವಾದ್ದರಿಂದ ಅವರ ಆರತಿಯೊಂದಿಗೆ ಮಂಗಳವನ್ನು ಮಾಡಿದಳು.


ಪ್ರಖ್ಯಾತ ನೃತ್ಯ ಗುರುಗಳಾದ ವಿದುಷಿ ಡಾ|| ಮಾನಸ ಕಂಟಿ, ವಿದುಷಿ ರೇಖಾ ಜಗದೀಶ್‌ ಹಾಗೂ ಪ್ರಸಿದ್ದ ಹೋಮಿಯೋಪತಿ ವೈದ್ಯರಾದ ಡಾ|| ರಾಜೀವ್‌ ರವರು ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಉಪಸ್ತಿತರಿದ್ದರು.


ವಿದ್ವಾನ್‌ ರಾಜೀವ್‌ ರಾಜಗೋಪಾಲನ್‌ ರವರ ಗಾಯನ, ವಿದ್ವಾನ್‌ ವಿದ್ಯಾಶಂಕರ್‌, ವಿದ್ವಾನ್‌ ರಘು ಸಿಂಹ, ವಿದ್ವಾನ್‌  ಶ್ರೀನಿಧಿ ಮಾಥುರ್‌, ವಿದ್ವಾನ್‌ ಮಿಥುನ್‌ ಶಕ್ತಿ ರವರ ವಾದ್ಯವೃಂದ ಅತ್ಯದ್ಭುತವಾದ ಸಹಕಾರವನ್ನು ವಿನೂತನಾತಳಿಗೆ ನೀಡಿದರು.

- ಮಾನಸ ಬಿ ಆರ್



 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Advt Slider:
To Top