ಪಿ.ವಿ.ಎಸ್ ವೃತ್ತದಿಂದ ಲಕ್ಷ್ಮೀ ನಗರ ವಸತಿ ಸಂಕೀರ್ಣ- ಕಾಂಕ್ರಿಟೀಕೃತ ಸಂಪರ್ಕ ರಸ್ತೆ ಉದ್ಘಾಟನೆ

Upayuktha
0


ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ 29 ನೇ ಕಂಬ್ಳ ವಾರ್ಡ್‌ನ ಪಿ.ವಿ.ಎಸ್ ವೃತ್ತದಿಂದ ಲಕ್ಷ್ಮೀ ನಗರ ವಸತಿ ಸಂಕೀರ್ಣ ಸಂಪರ್ಕ ರಸ್ತೆಯು ರೂ 5.ಲಕ್ಷ ವೆಚ್ಚದಲ್ಲಿ ಕಾಂಕ್ರೀಟೀಕರಣಗೊಂಡಿದ್ದು ಶಾಸಕ ವೇದವ್ಯಾಸ ಕಾಮತ್ ರವರು ಉದ್ಘಾಟಿಸಿದರು.


ನಂತರ ಮಾತನಾಡಿದ ಶಾಸಕರು, ಸ್ಥಳೀಯ ನಿಕಟ ಪೂರ್ವ ಪಾಲಿಕೆ ಸದಸ್ಯೆ ಶ್ರೀಮತಿ ಲೀಲಾವತಿ ಪ್ರಕಾಶ್ ರವರು ವಿಶೇಷ ಮುತುವರ್ಜಿ ವಹಿಸಿದ್ದರ ಪರಿಣಾಮ ಈ ರಸ್ತೆಯು ಕಾಂಕ್ರೀಟೀಕರಣ ಗೊಂಡಿದ್ದು ವಿಶೇಷವಾಗಿ ಲಕ್ಷ್ಮೀನಗರ ಅಪಾರ್ಟ್ಮೆಂಟ್ ನಿವಾಸಿಗಳಿಗೆ ಅನುಕೂಲವಾಗಿರುವುದು ಸಂತಸದ ಸಂಗತಿ ಎಂದರು.


ಇದೇ ಸಂದರ್ಭದಲ್ಲಿ ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಪುಷ್ಪರಾಜ್ ಬಿ.ಎನ್, ರಾಜ್ಯ ಕಾರ್ಯಕಾರಿಣಿ ಸದಸ್ಯ ಶ್ರೀನಿವಾಸ್ ನಾಯಕ್ ಇಂದಾಜೆ, ಕಾರ್ಯದರ್ಶಿ ಸತೀಶ್ ಇರಾ ರವರನ್ನು ಶಾಸಕರು ಸನ್ಮಾನಿಸಿದರು.


ದಕ್ಷಿಣ ಮಂಡಲದ ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ, ಜಿಲ್ಲಾ ವಕ್ತಾರ ರಾಜಗೋಪಾಲ್ ರೈ, ಶಕ್ತಿ ಕೇಂದ್ರದ ಅಧ್ಯಕ್ಷ ಪ್ರಕಾಶ್ ಕೊಡಿಯಾಲ್ ಬೈಲ್, ಮಂಡಲದ ಕಾರ್ಯಾಲಯ ಕಾರ್ಯದರ್ಶಿ ನೀಲೇಶ್ ಕಾಮತ್, ಲಕ್ಷ್ಮೀ ನಾರಾಯಣಿ ದೇವಸ್ಥಾನದ ಕೃಷ್ಣ ಶೇಟ್,  ಅರ್ಚಕ ಅಶೋಕ್ ಭಟ್, ಲಕ್ಷ್ಮೀನಗರ ಅಪಾರ್ಟ್ಮೆಂಟ್ ಅಸೋಸಿಯೇಶನ್ ಅಧ್ಯಕ್ಷರಾದ ಶರತ್ ಕುಮಾರ್, ಕೋಶಾಧಿಕಾರಿ ಪದ್ಮಜ ಎನ್, ಅಚ್ಯುತ ಎಲ್, ಜಗದೀಶ್ ಕಾಮತ್, ಪದ್ಮಿನಿ ಕಾಮತ್, ಪ್ರಭಾವತಿ ಶೆಟ್ಟಿ, ರಾಧಿಕಾ ಆರ್.ನಾಯಕ್, ವಾರಿಜಾ ಎಂ.ಪಿ, ಗೀತಾ ಪೈ, ಗೀತಾ ಬಿ. ರೈ, ಶಾಂತೇರಿ ಪೈ, ಸುರೇಶ್ ಪ್ರಭು, ದೀಪಾ ಕಾಮತ್, ಶೋಭಾ, ಬಸಪ್ಪ, ಹನುಮವ್ವ, ಮಣಿಕಂಠ, ಭರತ್ ಮೊದಲಾದವರು ಉಪಸ್ಥಿತರಿದ್ದರು. ಭಾಸ್ಕರ್ ರೈ ಕಟ್ಟ ಕಾರ್ಯಕ್ರಮ ನಿರೂಪಿಸಿದರೆ ಗೀತಾ ಬಿ.ರೈ ಸಹಕರಿಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
To Top