ಹದಿನಾಲ್ಕು ಬಾಲೆಯರ ನೃತ್ಯಾರೋಹಣ -ಕಲಾಸಕ್ತರಿಂದ ಆಸ್ವಾದನೆ

Upayuktha
0


ಬೆಂಗಳೂರು: ಕಲಾಗ್ರಣಿ ಪ್ರತಿಷ್ಠಾನದ ವತಿಯಿಂದ ಮಲ್ಲೇಶ್ವರದ ಸೇವಾ ಸದನದಲ್ಲಿ ಹದಿನಾಲ್ಕು ಬಾಲೆಯರ ಭರತನಾಟ್ಯ ನೃತ್ಯಾರೋಹಣ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದಂತಹ ಖ್ಯಾತ ವೀಣಾ ವಾದಕರಾದ ವಿದ್ವಾನ್ ಎ ಶಂಕರ್ ರಾಮನ್ ಹಾಗೂ ಕಲಾವಿದರು ಸಸ್ಯಕ್ಕೆ ನೀರೆರೆಯುವ ಮೂಲಕ ಉದ್ಘಾಟನೆ ನೆರವೇರಿಸಿದರು.


ನೃತ್ಯರೋಹಣದ ಮೊದಲನೇ ಹಂತವಾದ ರಂಗ ಪ್ರವೇಶಕ್ಕೆ ಸಿದ್ಧರಾದ  ಹದಿನಾಲ್ಕು ಜನ ವಿದ್ಯಾರ್ಥಿನಿಯರು (ಧೃತಿ, ಸಾನ್ವಿ, ಮನಸ್ವಿ, ಶ್ರಾವ್ಯ, ಗುರುಸನ್ನಿಧಿ, ನಿವೇದಿತಾ, ಸಿರಿ, ಅವ್ನಿ, ನಂದನ, ಅರ್ಚನಾ ಹಾಗೂ ಮನು ನೃತ್ಯ ಶಾಲೆಯ ವಿದ್ಯಾರ್ಥಿನಿಯರಾದ ಸಂಹಿತಾ, ಧನ್ವಿತಾ, ಉನ್ನತಿ ಹಾಗೂ ಪುಣ್ಯಶ್ರೀ)  ಪ್ರಮಾಣ  ಮಾಡಿ ತಮ್ಮ ಗುರುಗಳಿಂದ ಗೆಜ್ಜೆಯನ್ನು ಸ್ವೀಕರಿಸಿ ನೃತ್ಯ ಪ್ರದರ್ಶನವನ್ನು ನೀಡಿದರು. ನೃತ್ಯರೋಹಣದ ಮೂರನೇ ಹಂತವಾದ ಸೃಜನಿಕದಲ್ಲಿ ಕು. ಸಂಗೀತ ಬಿ ಎಸ್ ರವರು 45 ನಿಮಿಷಗಳ ಕಾಲ ನೃತ್ಯವನ್ನು ಪ್ರಸ್ತುತಪಡಿಸಿದರು. 


ಕಾರ್ಯಕ್ರಮದಲ್ಲಿ ವಿದ್ವಾನ್ ಎ ಶಂಕರ್ ರಾಮನ್ ರವರನ್ನು ಸನ್ಮಾನಿಸಿ ಗೌರವವನ್ನು ಸಲ್ಲಿಸ ಲಾಯಿತು. ಗಾಯನದಲ್ಲಿ ವಿದುಷಿ ಶ್ರೀಮತಿ ರಾಧಿಕಾ ಪೊದುವಳ್, ನಟುವಾಂಗದಲ್ಲಿ ವಿದುಷಿ  ಸೋನಿಯಾ ಪೊದುವಾಳ್, ದೀಪ ಕಲ್ಮಾಡಿ, ಮೃದಂಗ ವಾದನದಲ್ಲಿ ವಿದ್ವಾನ್ ಎಸ್. ವಿ. ಗಿರಿಧರ್, ಕೊಳಲು ವಾದನದಲ್ಲಿ ವಿದ್ವಾನ್ ಕೃಷ್ಣಭಟ್, ವಿಶೇಷ ತಾಳವಾದ್ಯದಲ್ಲಿ ವಿದ್ವಾನ್ ಕಾರ್ತಿಕ್ ವೈಧಾತ್ರಿ ಹಾಗೂ ವೀಣಾ ವಾದನದಲ್ಲಿ ಅಚ್ಯುತ್  ರವರು ಹಿಮ್ಮೇಳದಲ್ಲಿ ಸಹಕಾರ ನೀಡಿದರು.



ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Advt Slider:
To Top