ಬೆಂಗಳೂರು: ಹೆಳವನಕಟ್ಟೆ ರಂಗನಾಥ ಭಕ್ತ ವೃಂದ, ಚಿಕ್ಕಲಸಂದ್ರ, ಬೆಂಗಳೂರು ಹಾಗೂ ಮೈತ್ರೇಯಿ ಕನ್ನಡ ಮಹಿಳಾ ಹರಿದಾಸ ಟ್ರಸ್ಟ್ ಇವರ ಸಂಯುಕ್ತ ಆಶ್ರಯದಲ್ಲಿ, ಶ್ರೀಮತಿ ಲಕ್ಷ್ಮಿ ಗುಪ್ತ ಅವರ ಮನೆಯಲ್ಲಿ ನವರಾತ್ರಿಯ ನಿಮಿತ್ತ ಶ್ರೀನಿವಾಸ ಕಲ್ಯಾಣ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಹೆಳವನಕಟ್ಟೆ ರಂಗನಾಥ ಭಕ್ತ ವೃಂದದ ಹಾಗೂ ಮೈತ್ರೇಯಿ ಕನ್ನಡ ಮಹಿಳಾ ಹರಿದಾಸ ಟ್ರಸ್ಟ್ನ ಸದಸ್ಯರಿಂದ ಶ್ರೀ ಅನಂತಾದ್ರೀಶರಿಂದ ವಿರಚಿತವಾದ ಶ್ರೀ ವೆಂಕಟೇಶ ಪಾರಿಜಾತ ಪಾರಾಯಣ ಮಾಡಲಾಯಿತು ಹಾಗೂ ಮೈತ್ರೇಯಿ ಕನ್ನಡ ಮಹಿಳಾ ಹರಿದಾಸ ಟ್ರಸ್ಟ್ನ ಉಪಾಧ್ಯಕ್ಷರು, ವಿಶೇಷ ಅಂಶಗಳ ಬಗ್ಗೆ ಅರ್ಥಚಿಂತನೆ ಮಾಡಿರುವುದು ವಿಭಿನ್ನವಾಗಿತ್ತು.
ಕಾರ್ಯಕ್ರಮದಲ್ಲಿ, ಹೆಳವನಕಟ್ಟೆ ರಂಗನಾಥ ಭಕ್ತ ವೃಂದ ಹಾಗೂ ಮೈತ್ರೇಯಿ ಕನ್ನಡ ಮಹಿಳಾ ಹರಿದಾಸ ಟ್ರಸ್ಟ್ ಭಜನಾ ಮಂಡಳಿಯ ಸದಸ್ಯರು ಹಾಗೂ ಕಾರ್ಯಕಾರಿ ಮಂಡಳಿಯ ಸದಸ್ಯರು ಹಾಜರಿದ್ದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


