ಸುರತ್ಕಲ್: ನಮ್ಮ ನಾಡಿನ ಶ್ರೇಷ್ಠ ಇತಿಹಾಸಕಾರರಾಗಿರುವ ಡಾ. ವಸಂತ ಮಾಧವ ಕೆ.ಜಿ.ಯವರು ಇತಿಹಾಸ ಸಂಶೋಧನೆಗೆ ತಮ್ಮ ಬದುಕನ್ನು ಅರ್ಪಿಸಿಕೊಂಡವರು. ಕರಾವಳಿ ಕರ್ನಾಟಕದ ಇತಿಹಾಸದ ಅಧ್ಯಯನಕ್ಕೆ ಬೇಕಾದ ಆಕರಗಳು ವೈಜ್ಞಾನಿಕವಾಗಿ ಕ್ರೋಡೀಕೃತವಾಗಲು ಶ್ರಮಿಸಿದವರು. ಎಂದು ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಸಂಸ್ಥಾಪಕ ಇತಿಹಾಸ ತಜ್ಞ ಡಾ. ತುಕಾರಾಮ್ ಪೂಜಾರಿ ನುಡಿದರು.
ಅವರು ಸುರತ್ಕಲ್ನ ಎಸ್. ಆರ್. ಹೆಗ್ಡೆ ಚಾರಿಟೇಬಲ್ ಟ್ರಸ್ಟ್ ಆಯೋಜಿಸಿದ್ದ ಡಾ. ಕೆ. ಜಿ. ವಸಂತ ಮಾಧವ ನುಡಿ ನಮನದಲ್ಲಿ ಮಾತನಾಡಿದರು.
ಇತಿಹಾಸಕಾರರ ಅವಜ್ಞೆ ಪ್ರಸ್ತುತ ಸಂದರ್ಭದಲ್ಲಿ ನಡೆಯುತ್ತಿದ್ದು ಅವರ ಕಾರ್ಯಗಳನ್ನು ಗುರುತಿಸುವ ಕಾರ್ಯ ನಡೆಯಬೇಕು ಎಂದರು.
ಸಂಶೋಧಕ ಬೆನೆಟ್ ಅಮನ್ನ ಮಾತನಾಡಿ, ವಸಂತ ಮಾಧವರ ಸಂಶೋಧನಾ ಆಸಕ್ತಿ ಅವರ ಕೃತಿ ಸಂಗ್ರಹ ಅನನ್ಯವಾಗಿದ್ದು ಅದನ್ನು ಉಳಿಸಿ ಕೊಂಡು ಮುಂದಿನ ತಲೆಮಾರಿಗೆ ವರ್ಗಾವಣೆ ಮಾಡುವ ಹೊಣೆಗಾರಿಕೆ ಸಮಾಜದ್ದಾಗಿದೆ ಎಂದರು.
ಎಸ್.ಆರ್. ಹೆಗ್ಡೆ ಚಾರಿಟೇಬಲ್ ಟ್ರಸ್ಟ್ ಕಾರ್ಯದರ್ಶಿ ಕೃಷ್ಣಮೂರ್ತಿ ಮಾತನಾಡಿ, ಕರಾವಳಿ ಕರ್ನಾಟಕದ ಇತಿಹಾಸವನ್ನು ಕಟ್ಟುವಲ್ಲಿ ದೇಶ ವಿದೇಶಗಳ ಆಕರಗಳನ್ನು ವಸಂತ ಮಾಧವರು ಸಮರ್ಥವಾಗಿ ಬಳಸಿ ಕೊಂಡರು. ಪ್ರಾದೇಶಿಕ ಇತಿಹಾಸದ ಅಧ್ಯಯನದ ಪರಂಪರೆಯನ್ನು ಇವರು ಸಮರ್ಥವಾಗಿ ಮುನ್ನಡೆಸಿದವರು ಎಂದರು.
ಹಿರಿಯ ಸಂಶೋಧಕಿ ಮತ್ತು ಎಸ್. ಆರ್. ಹೆಗ್ಡೆ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷೆ ಡಾ. ಇಂದಿರಾ ಹೆಗ್ಗಡೆ ಮಾತನಾಡಿ, 2005-06 ರ ಪೊಳಲಿ ಶೀನಪ್ಪ ಹೆಗ್ಗಡೆ ಪ್ರಶಸ್ತಿ ಪುರಸ್ಕೃತರಾಗಿದ್ದ ವಸಂತ ಮಾಧವರು ರಾಜ್ಯ ಇತಿಹಾಸ ಅಕಾಡೆಮಿ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದು ಯುವ ಸಂಶೋಧಕರಿಗೆ ಮಾರ್ಗದರ್ಶಕ ರಾಗಿದ್ದವರು. ಅವರು ಸೂಚಿಸಿರುವ ಹೊಳಹುಗಳೊಂದಿಗೆ ಇತಿಹಾಸ ಸಂಶೋಧನೆಯ ವ್ಯಾಪ್ತಿಯನ್ನು ವಿಸ್ತರಿಸ ಬೇಕು ಎಂದರು.
ಎಸ್. ಆರ್. ಹೆಗ್ಡೆ ಚಾರಿಟೇಬಲ್ ಟ್ರಸ್ಟ್ ಕೋಶಾಧಿಕಾರಿ ಡಾ. ಜ್ಯೋತಿ ಚೇಳಾರು ಪ್ರಸ್ತಾವನೆಯ ನುಡಿಗಳನ್ನಾಡಿದರು.
ಕರ್ನಾಟಕ ರಾಜ್ಯ ಸಾಹಿತ್ಯ ಪರಿಷತ್ ಸುರತ್ಕಲ್ ಹೋಬಳಿ ಘಟಕದ ಅಧ್ಯಕ್ಷೆ ಗುಣವತಿ ರಮೇಶ್ ವಂದಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


