ಉಡುಪಿ: ಮಾತೃಭೂಮಿ ಯುವಕರ ಸಂಘ (ರಿ) ಬೆಂಗಳೂರು ಇದರ ವತಿಯಿಂದ ಸೆ. 13 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಮಾತೃಭೂಮಿ ರಾಜ್ಯ ಪ್ರಶಸ್ತಿ ಪುರಸ್ಕೃತರ ಜಿಲ್ಲಾವಾರು ಪಟ್ಟಿ ಪ್ರಕಟಗೊಂಡಿದ್ದು ವಿವರ ಇಂತಿದೆ.
ಕಮಲಾಪುರ ಕ ರವಿ (ಲೆಕ್ಕಪತ್ರ ವಿಭಾಗ) ಕಲ್ಬುರ್ಗಿ ಜಿಲ್ಲೆ, ರಫೀಕ್ ಪಾಷಾ ಕೆಎಎಸ್ (ಸರ್ಕಾರಿ ಸೇವೆ) ಬೆಂಗಳೂರಿನ ನಗರ, ಸಿ.ಬಿ ರಂಗಯ್ಯ ಕೆಜಿಎಸ್ (ಕಾರ್ಮಿಕ ಸೇವೆ ) ತುಮಕೂರು, ಎಸ್ ಎಸ್ ವೆಂಕಟೇಶ್ (ಕಾನೂನು ಸೇವೆ) ಚಿಕ್ಕಮಗಳೂರು, ನೇತ್ರಾವತಿ ಮಂಜುನಾಥ್ (ಶಾಸ್ತ್ರೀಯ ನೃತ್ಯ) ಬೆಂಗಳೂರು ನಗರ, ಡಾ.ಮಲ್ಲಿಕಾರ್ಜುನ್ ಮರಿಗಪ್ಪ (ಕನ್ನಡ ಸಾಹಿತ್ಯ) ವಿಜಯಪುರ, ಜಿ.ಎಸ್ ಹಿರೇಮಠ (ಯುವ ಸಬಲೀಕರಣ) ರಾಯಚೂರು, ಡಾ. ದೇವಿಕಾ (ಕನ್ನಡ ಜಾನಪದ ಅಧ್ಯಯನ) ಬೆಂಗಳೂರು ನಗರ, ವಿಶಾಲಾಕ್ಷಮ್ಮ ಎಂ.ಎಸ್ (ಮಹಿಳಾ ಸಬಲೀಕರಣ) ಚಿಕ್ಕಮಗಳೂರು, ಪ್ರೋ. ನೆಗಳೂರು (ಶೈಕ್ಷಣಿಕ ) ಬೆಂಗಳೂರು ಗ್ರಾಮಾಂತರ, ಡಾ. ಚೇತನ್ ಕುಮಾರ್ (ಬಯಲಾಟ) ಬಳ್ಳಾರಿ, ಬಸವರಾಜು (ಸಂಘಟನೆ) ಮಂಡ್ಯ, ಪ್ರೊ. ಬಿ ವಿ ಸೂರ್ಯನಾರಾಯಣ (ಶೈಕ್ಷಣಿಕ) ದಕ್ಷಿಣ ಕನ್ನಡ, ಸಿದ್ದಣ್ಣ ದುರುಂಡಿ (ಯುವಜನ ಕ್ಷೇತ್ರ) ಬೆಳಗಾವಿ, ಮಹಮ್ಮದ್ ಆಸಿಫ್ ಹುಸೇನ್ (ಸಮಾಜಸೇವೆ) ಕೊಪ್ಪಳ, ಆರ್ ಮುನಿರಾಜು (ಸಾಹಸ ) ಬೆಂಗಳೂರು, ಮಾಲಿ ಪವನ್ ಗೌಡ (ಯುವ ಸಾಮಾಜಿಕ) ತುಮಕೂರು, ರಾಘವೇಂದ್ರ ಪ್ರಭು ಕರ್ವಾಲು (ಸಾಹಿತ್ಯ) ವೈಯಕ್ತಿಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಅದೇ ರೀತಿ ಯುವಜನ ಸಂಯುಕ್ತ ಮಂಡಳಿ ಸುಳ್ಯ ದಕ್ಷಿಣ ಕನ್ನಡ ಜಿಲ್ಲೆ (ಯುವ ಸಬಲೀಕರಣ) ಹಾಗೂ ಕೆ.ಪಿ ಪೂರ್ಣಚಂದ್ರ ತೇಜಸ್ವಿ ಜಾನಪದ ಕಲಾಸಂಘ ಮೂಡಿಗೆರೆ ಚಿಕ್ಕಮಗಳೂರು (ಜನಪದ ಕ್ಷೇತ್ರ) ಸಂಘ ಸಂಸ್ಥೆ ನೆಲೆಯಲ್ಲಿ ಆಯ್ಕೆಯಾಗಿದ್ದಾರೆ ಎಂದು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಹಾಗೂ ಭಾರತ ಸರ್ಕಾರದ ಐಸಿಸಿಆರ್ ಸದಸ್ಯ ಡಾ.ಜಾನಪದ ಎಸ್ ಬಾಲಾಜಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ