ಕರಾವಳಿಯ ‎ಗತ ಕಾಲವನ್ನು ನೆನಪಿಸುವ ಕನ್ನಡ ಸಾಂಸ್ಕೃತಿಕ ವಸ್ತುಸಂಗ್ರಹಾಲಯ

Upayuktha
0



‎ಮಂಗಳೂರು: ವಿಭಿನ್ನ ಸಂಸ್ಕೃತಿ, ಜೀವನ ಶೈಲಿ, ಧಾರ್ಮಿಕ ಆಚರಣೆಗಳಿಗೆ ಹೆಸರು ವಾಸಿಯಾದ ಕರಾವಳಿ ಜಿಲ್ಲೆಗಳು, ಆಧುನಿಕರಣಕ್ಕೆ ಕಾಲಿಡುತ್ತಿದ್ದಂತೆ ಅಭಿವೃದ್ಧಿಯ ಹೆಸರಿನಲ್ಲಿ ಆ ಸಂಸ್ಕೃತಿ, ಜೀವನಶೈಲಿ ಬದಲಾಗುತ್ತಿವೆ. ಬದಲಾಗುತ್ತಿರುವ ಕಾಲವನ್ನು ತಡೆಯಲು ಸಾಧ್ಯವಿಲ್ಲದಿದ್ದರೂ ಹಿಂದಿನ ಸಂಸ್ಕೃತಿ ಕರಾವಳಿಯ ಜೀವನ ಶೈಲಿಯ ವೈಭೋಗದ ಸವಿ ನೆನಪುಗಳನ್ನು ಮರುಕಳಿಸುವಂತೆ ಮಾಡುತ್ತದೆ ಈ ಕನ್ನಡ ಸಾಂಸ್ಕೃತಿಕ ವಸ್ತುಸಂಗ್ರಹಾಲಯ.

‎ಮಂಗಳೂರು ವಿಶ್ವವಿದ್ಯಾನಿಲಯದ ವಿಜ್ಞಾನ ಸಂಕಿರ್ಣದ ಹಿಂಭಾಗದಲ್ಲಿರುವ ಈ ಮ್ಯೂಸಿಯಂ ನೋಡುಗರನ್ನು ಕೆಲವು ವರ್ಷಗಳ ಹಿಂದಿನ ಜೀವನಕ್ಕೆ ಕರೆದೊಯ್ಯುವುದು ಖಂಡಿತ.

‎ಸುಮಾರು 35ರಿಂದ 40 ವರ್ಷಗಳ ಹಿಂದೆ, ಕರಾವಳಿಯ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೂ ಪರಿಚಯಿಸಬೇಕೆಂಬ ದಿಟ್ಟ ಮನಸ್ಸಿನಿಂದ ಈ ಮಹತ್ವ ಕಾರ್ಯಕ್ಕೆ ಮೊದಲು ಕೈ ಹಾಕಿದವರು ಕನ್ನಡ ಸಾಂಸ್ಕೃತಿಕ ವಿಭಾಗ ಅಧ್ಯಕ್ಷರಾದ ಪ್ರೊ. ಬಿ.ಎ. ವಿವೇಕ ರೈ ಮತ್ತು ಸಹ ಅಧ್ಯಾಪಕರು. ಇವರೊಂದಿಗೆ ವಿದ್ಯಾರ್ಥಿಗಳು ಕೈ ಜೋಡಿಸಿದ್ದು ಈ ಯೋಜನೆಗೆ ಮತ್ತಷ್ಟು ಮೆರುಗು ಬಂತು.

‎ಈ ವಸ್ತುಸಂಗ್ರಹಾಲಯವು ಹಿಂದಿನ ಕಾಲದ  ಸಂಸ್ಕೃತಿ, ಕೃಷಿ ಪದ್ಧತಿ, ಕಲೆಯನ್ನು, ತಾಯಿಯಂತೆ ತನ್ನ ಒಡಲಲ್ಲಿಟ್ಟುಕೊಂಡು ಜೋಪಾನ ಮಾಡುತ್ತಿದೆ.

‎ಇಲ್ಲಿ ಸುಮಾರು 300ವರ್ಷಗಳಷ್ಟು ಹಳೆಯದಾದ ಸೂರ್ಯ ದೇವನ ಕಲ್ಲಿನ ಪ್ರತಿಮೆ, ಅಲ್ಲದೆ ಬ್ರಿಟಿಷರ ಕಾಲದಲ್ಲಿ ಹೋರಾಡಿದ ಸುಳ್ಯದ ಕಲ್ಯಾಣಪ್ಪ ಕಾಟ್ ಕಾಯಿಯವರು ಉಪಯೋಗಿಸಿದ ಖಡ್ಗ ಈ ಸಂಗ್ರಹಾಲಯಕ್ಕೆ ಮತ್ತಷ್ಟು ಮೆರುಗನ್ನು ನೀಡಿದೆ.

‎ಪಂಜುರ್ಲಿ ದೈವದ ಮುಖವಾಡ,  ವಿವಿಧ ಬಗೆಯ ನಾಗರ ವಿಗ್ರಹಗಳು, ಬಬ್ಬರಿಯನ ಹುರುಗಳು, ಮರದ ಬೃಹತ್ ಶಿಲ್ಪಕಲೆಗಳು, ಹಿಂದಿನ ಕಾಲದ ಕೃಷಿ ಉಪಕರಣಗಳು, ವಿಭಿನ್ನ ಶೈಲಿಯ ಮಣ್ಣಿನ ಮಡಿಕೆಗಳು, ಸಾಲು ದೀಪ ಸ್ತಂಭಗಳು. ಮೀನುಗಾರಿಕಾ ಉಪಕರಣಗಳು, ನಾಣ್ಯಗಳು,

‎ಗೃಹಉಪಯೋಗಿ ವಸ್ತುಗಳು, ಮರದ ಒಳಾಂಗಣ ಆಟಿಕೆಗಳು ಸಾಮಗ್ರಿಗಳು, ಹೀಗೆ ಒಂದಲ್ಲ ಎರಡಲ್ಲ  ಕರಾವಳಿ ಜೀವನ ಮತ್ತು ಸಂಸ್ಕೃತಿಯನ್ನು ನೆನಪಿಸುವ ಬಹುತೇಕ ವಸ್ತುಗಳನ್ನು ಬಹಳ ನಾಜೂಕಾಗಿ ಕಾಪಾಡಿಕೊಂಡು ಬಂದಿದೆ.

‎ಈ ವಸ್ತು ಸಂಗ್ರಹಾಲಯಕ್ಕೆ ವಿಶ್ವವಿದ್ಯಾನಿಲಯಕ್ಕೆ ರ್‍ಯಾಂಕಿಂಗ್ ಕೊಡುವ ನ್ಯಾಕ್ ತಂಡದವರು ಬಂದು ವೀಕ್ಷಿಸಿ ಉತ್ತಮ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


‎ಅಲ್ಲದೆ ಸ್ಥಳೀಯ ಶಾಲಾ ಮಕ್ಕಳು, ಇತರೆ ಕಾಲೇಜು ವಿದ್ಯಾರ್ಥಿಗಳು, ಕೆಲವು ಹಿರಿಯ ವ್ಯಕ್ತಿಗಳು ಬಂದು ವೀಕ್ಷಿಸಿದ್ದಾರೆ. ವೀಕ್ಷಣೆಗೆ ಆಗಾಗ ಬರುತ್ತಾರೆ. ‎ಸಂಗ್ರಹಾಲಯಲ್ಲಿರುವ ಸಾಮಗ್ರಿಗಳ ಸಂಗ್ರಹವನ್ನು ಅಧ್ಯಾಪಕರು ಮತ್ತು ವಿದ್ಯಾರ್ಥಿಗಳೇ ಸೇರಿ ಮಾಡಿರುವುದು ವಿಶೇಷ. ಇದರಲ್ಲಿರುವ ಸಾಮಗ್ರಿಗಳನ್ನು ಕುಂದಾಪುರ, ಸುಬ್ರಮಣ್ಯ, ಕಾಸರಗೋಡು, ಹೀಗೆ ವಿವಿಧ ಭಾಗಗಳಿಂದ ಸಂಗ್ರಹಿಸಲಾಗಿದೆ.

‎ಹಿಂದಿನ ಸಂಸ್ಕೃತಿ, ಜೀವನ ಪದ್ಧತಿಯನ್ನು ನೆನಪಿಸುವಲ್ಲಿ ಈ ಮ್ಯೂಸಿಯಂ ಉತ್ತಮ ನಿದರ್ಶನವಾಗಿದೆ. ಉತ್ತಮ ರೀತಿಯಲ್ಲಿ ಕಂಗೊಳಿತ್ತಿರುವ ಈ ಮ್ಯೂಸಿಯಂ ಅಭಿವೃದ್ಧಿಗೆ  ಇನ್ನಷ್ಟು  ಪ್ರೋತ್ಸಾಹ ನೀಡಿದರೆ ಇನ್ನೂ ಭವ್ಯವಾಗಿ ಕಂಗೊಳಿಸುತ್ತದೆ.

- ‎ಹನುಮಂತ ಎಸ್ ಕೆ.

ಪತ್ರಿಕೋದ್ಯಮ ವಿದ್ಯಾರ್ಥಿ. ಪುತ್ತೂರು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top