ನಾವು - ನಮ್ಮ ಬದುಕು; ಕ್ರಿಯಾಶೀಲತೆಯೇ ಸೊಬಗು

Upayuktha
0


ದುಕು ಕೆಲವೊಮ್ಮೆ ಸುಸ್ಥಿರ ಮತ್ತು ಕೆಲವೊಮ್ಮೆ ದುಸ್ತರದ ಮಾರ್ಗಗಳಲ್ಲಿ ಚಲಿಸುತ್ತದೆ. ಈ ಮಾರ್ಗಗಳಲ್ಲಿ ನಾವು ಯಾರನ್ನೇ ಅಥವಾ ಏನನ್ನೇ ಕಳೆದುಕೊಂಡರೂ ಬದುಕಬಹುದು. ಆದರೆ ನಮ್ಮನ್ನು ನಾವೇ ಕಳೆದುಕೊಂಡರೆ ಬದುಕುವುದು ಕಷ್ಟ ಎಂಬುದು ನಮಗೆ ಅರಿವಾಗಬೇಕು. ನಮ್ಮ ಬದುಕು ಮತ್ತೊಬ್ಬರ ಮೇಲೆ ಹೆಚ್ಚಾಗಿ ಅವಲಂಬಿತವಾಗಬಾರದು ಬದಲಿಗೆ ನಾವೇ ನಮ್ಮ ಜೀವನವನ್ನು ರೂಪಿಸಿಕೊಳ್ಳುವ ಪ್ರಯತ್ನ ಮಾಡಬೇಕು. ಹೀಗೆ ರೂಪಿಸಿ ಕೊಳ್ಳುವ ಬದುಕಿನಲ್ಲಿ ನೆಮ್ಮದಿ ಬಹಳ ಮುಖ್ಯವಾಗುತ್ತದೆ. ಮನೆ, ಊರು, ಬಟ್ಟೆ, ಹೀಗೆ ಏನೇ ಬದಲಾಯಿಸಿದರೂ ನೆಮ್ಮದಿ ಸಿಗುವುದಿಲ್ಲ ಎಂಬುದನ್ನು ಅರಿತು ನಮ್ಮನ್ನು ನಾವು ಬದಲಾಯಿಸಿಕೊಂಡಾಗ ಮಾತ್ರ ನಿಜವಾದ ನೆಮ್ಮದಿ ಸಿಗುತ್ತದೆ ಎಂಬ ಅರಿವು ನಮ್ಮಲ್ಲೇ ಉಂಟಾಗಬೇಕು. ನಿಜವಾಗಿಯೂ ನಾವು ಯಾವಾಗ ಮಾನವತ್ವವುಳ್ಳವರಾಗಿ ಬೆಳೆಯುತ್ತೇವೆ ಎಂಬ ಆಲೋಚನೆ ಪ್ರತಿಯೊಬ್ಬರಲ್ಲೂ ಬಂದೇ ಬರುತ್ತದೆ. 


ಇತರರ ತಪ್ಪುಗಳನ್ನು ಎತ್ತಿ ತೋರಿಸುವವರು ಬದುಕಿನಲ್ಲಿ ಎಂದಿಗೂ ಬೆಳೆಯಲಾರರು. ಅವರ ತಪ್ಪುಗಳನ್ನು ತಿಳಿದು ತಿದ್ದುವವರು ಮಾತ್ರ ಬೆಳೆಯುತ್ತಾರೆ ಎಂಬ ಮಾತನ್ನು ನಾವೇ ಅರ್ಥೈಸಿಕೊಳ್ಳಬೇಕು. ನಾವು ನಮ್ಮ ಭಾವನೆಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಯಶಸ್ವಿಯಾದರೆ, ನಾವು ತುಂಬಾ ಬಲಶಾಲಿಗಳಾಗಿ ಬೆಳೆಯುತ್ತೇವೆ. ಅವಕಾಶ ಸಿಕ್ಕಿದೆ ಎಂದು ತಿಳಿದು ಯಾರಿಗೂ ಅವಮಾನ ಮಾಡಬಾರದು. ಏಕೆಂದರೆ ಬದುಕಿನಲ್ಲಿ ಸಮಯ ಒಂದೇ ರೀತಿ ಇರುವುದಿಲ್ಲ. ಸಮಯವು ಎಲ್ಲರಿಗೂ ಅವಕಾಶ ಮಾಡಿಕೊಡುತ್ತದೆ ಎಂಬುದನ್ನು ತಿಳಿದಿರಬೇಕು. ನಮ್ಮವರಲ್ಲೇ ನಮ್ಮವರನ್ನು ಹುಡುಕುವುದು ಈ ಜಗತ್ತಿನ ಅತ್ಯಂತ ಕಷ್ಟಕರ ಕೆಲಸವೆಂದು ಪ್ರಾಜ್ಞರು ಹೇಳಿದ್ದಾರೆ. 


ಹಾಗಂತ ಹುಡುಕದಿದ್ದರೆ ನಮ್ಮವರು ಎಂಬುವವರು ಎಂದಿಗೂ ಸಿಗುವುದಿಲ್ಲ. ಹುಡುಕಾಟ ನಮ್ಮ ಪ್ರಯತ್ನವಾಗಿರಬೇಕು. ಅಂತಹ ಪ್ರಯತ್ನದಲ್ಲಿ ಒಬ್ಬರಿಗೆ ಮಸಿ ಬಳಿಯಲು ಹೋದರೆ ಮೊದಲು ನಮ್ಮ ಕೈಯೆ ಮಸಿಯಾಗುವುದು. ಹಾಗೆಯೇ ಒಬ್ಬರಿಗೆ ಕಳಂಕ ತರಲು ಹೊರಟರೆ ಮೊದಲು ನಮ್ಮ ಮನಸೇ ಹೊಲಸಾಗುವುದು ಎಂಬುದನ್ನು ನಾವು ಅರಿತು ಬಾಳಬೇಕು. ಒಳ್ಳೆಯ ಮನಸ್ಸಿನಿಂದ ಮಾಡಿದ ಕೆಲಸ ಮತ್ತು ಸಹಾಯ, ಒಳ್ಳೆಯವರ ಜೊತೆ ಮಾಡಿದ ಸ್ನೇಹ ಎಂದಿಗೂ ಹಾಳಾಗುವುದಿಲ್ಲ. ಸಜ್ಜನರ ಸಂಗವದು ಹೆಜ್ಜೇನು ಸವಿದಂತೆ ಎಂದು ಮಹಾ  ಸಂತ ಸರ್ವಜ್ಞನೇ ಹೇಳಿದ್ದಾನೆ. ಆದ್ದರಿಂದ ನಾವು ನಮ್ಮ ಬದುಕನ್ನು ಕಟ್ಟಿಕೊಳ್ಳಲು ಸದಾ ಕ್ರಿಯಾಶೀಲತೆಯಿಂದ ಕೂಡಿರಬೇಕು. 



-ಕೆ. ಎನ್. ಚಿದಾನಂದ


  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top