ಶ್ರೀ ಶ್ರೀಧರ ಸೇವಾ ಮಹಾಮಂಡಲ (ರಿ.): ಭಕ್ತಾದಿಗಳ ಗಮನಕ್ಕೆ

Upayuktha
0


ಗವಾನ್ ಸದ್ಗುರು ಶ್ರೀ ಶ್ರೀಧರ ಸ್ವಾಮಿಗಳವರು ಶ್ರೀ ಕ್ಷೇತ್ರ ವರದಪುರದಲ್ಲಿ 1954ನೇ ಇಸವಿಯಲ್ಲಿ ಶ್ರೀ ಶ್ರೀಧರಾಶ್ರಮವನ್ನು ಸ್ಥಾಪಿಸಿರುತ್ತಾರೆ. ಅಲ್ಲದೇ ಭಾರತ ದೇಶಾದ್ಯಾಂತ ಕೆಲವು ಸ್ಥಳಗಳಲ್ಲಿ ಆಶ್ರಮಗಳನ್ನು ಸ್ಥಾಪಿಸಿರುತ್ತಾರೆ. ಇತ್ತೀಚಿಗೆ ಕೆಲವರು ಶ್ರೀ ಶ್ರೀಧರ ಸ್ವಾಮಿಗಳವರ ಹೆಸರನ್ನು ಉಪಯೋಗಿಸಿಕೊಂಡರೆ ಧನ ಕನಕಗಳು ಒಟ್ಟಾಗುತ್ತದೆ ಎಂಬ ದುರಾಲೋಚನೆಯಿಂದ ಶ್ರೀ ಶ್ರೀಧರ ಸ್ವಾಮಿಗಳವರ ಹೆಸರಿನಲ್ಲಿ ಆಶ್ರಮ, ಮಠ ಮುಂತಾದವುಗಳನ್ನು ಪ್ರಾರಂಭಿಸಿರುತ್ತಾರೆ. ಈ ಸಂಸ್ಥೆಗಳು ಶ್ರೀ ಶ್ರೀಧರಸ್ವಾಮಿಗಳವರ ತತ್ವ ಪ್ರಸಾರ ಮತ್ತು ಅವರ ಧ್ಯೇಯೋದ್ಧೇಶಗಳನ್ನು ಪ್ರಸಾರ ಮಾಡುವ ಬದಲು ತಮ್ಮ ಮನಬಂದಂತೆ ತತ್ವಗಳನ್ನು ತಿರುಚಿ ಹೇಳುತ್ತಾ ಮುಗ್ದ ಜನರ ಹಣ ಮುಂತಾದವುಗಳನ್ನು ವಸೂಲಿ ಮಾಡುತ್ತಾ ಮತ್ತು ಧರ್ಮದ ಹೆಸರಿನಲ್ಲಿ ತಪ್ಪು ಸಂದೇಶಗಳನ್ನು ನೀಡುತ್ತಾ ಸಮಾಜದಲ್ಲಿ ಅಶಾಂತಿ, ಗೊಂದಲ ಹಾಗೂ ವೈರತ್ವವನ್ನು ನಿರ್ಮಿಸಲು ತೊಡಗಿರುವುದು ಶ್ರೀ ಶ್ರೀಧರ ಸೇವಾ ಮಹಾಮಂಡಲದ ಗಮನಕ್ಕೆ ಬಂದಿರುತ್ತದೆ.


ಇದರಿಂದಾಗಿ ಭಗವಾನ್ ಸದ್ಗುರು ಶ್ರೀ ಶ್ರೀಧರ ಸ್ವಾಮಿಗಳವರ ಹೆಸರಿಗೆ ಮತ್ತು ಅವರ ವ್ಯಕ್ತಿತ್ವದ ಘನತೆಗೆ ಕುಂದು ಬರುತ್ತಿದೆ. ಇಂತಹವರುಗಳ ಉಪದೇಶವನ್ನು ಕೇಳಿ ಇದೇ ಶ್ರೀ ಶ್ರೀಧರಸ್ವಾಮಿಗಳವರ ತತ್ವವೆಂದು ತಪ್ಪು ತಿಳಿದು ತಾವು ಮೌಡ್ಯಕ್ಕೆ ಒಳಗಾಗಿ ಸಮಾಜದಲ್ಲಿ ಶ್ರೀ ಭಗವಾನರ ಬಗ್ಗೆ ತಪ್ಪು ಸಂದೇಶ ಹರಡಲು ಕಾರಣೀಭೂತವಾಗಿರುತ್ತಾರೆ. ಆದಕಾರಣ ಶ್ರೀ ಶ್ರೀಧರ ಸ್ವಾಮಿಗಳವರು ಸ್ಥಾಪಿಸಿರುವ ಮತ್ತು ಅವರ ನಿಜವಾದ ಶಿಷ್ಯರು ಸ್ಥಾಪಿಸಿರುವ ಆಶ್ರಮ ಮತ್ತು ಸಂಸ್ಥೆಗಳ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ. ಅವುಗಳು...


1. ಶ್ರೀ ಶ್ರೀಧರಾಶ್ರಮ, ಶ್ರೀಕ್ಷೇತ್ರ ವರದಪುರ

2. ಶ್ರೀ ಶ್ರೀಧರ ಸ್ವಾಮೀ ಜನ್ಮಭೂಮಿ ಸೇವಾ ಸಮಿತಿ, ಲಾಡ್ ಚಿಂಚೋಳಿ, ಅಳಂದಾ ತಾ. ಕಲಬುರಗಿ ಜಿಲ್ಲೆ

3. ಭಗವಾನ್ ಸದ್ಗುರು ಶ್ರೀ ಶ್ರೀಧರಸ್ವಾಮಿಗಳವರ ಪಾದುಕಾ ಮಂದಿರ, ವಸಂತಪುರ ಬೆಂಗಳೂರು

4. ಶ್ರೀ ದತ್ತಾತ್ರೇಯ ದೇವಸ್ಥಾನ, ಮರಲಗೊಂಡಲ ಗ್ರಾಮ, ಮಾಗಡಿ ತಾ. ರಾಮನಗರ ಜಿಲ್ಲೆ

5. ಶ್ರೀ ಶ್ರೀಧರ ಸ್ಪೂರ್ತಿನಿವಾಸ, ವಾರಾಣಾಸಿ, ಉತ್ತರ ಪ್ರದೇಶ

6. ಶ್ರೀ ಶ್ರೀಧರಾಶ್ರಮ, ಪದ್ಮಾವತಿ, ಪುಣೆ, ಮಹಾರಾಷ್ಟ್ರ

7. ಶ್ರೀ ಶ್ರೀಧರಾಶ್ರಮ, ಸಾಗರ ಶಾಖೆ, ಕಾನಲೆ ದೇವಪ್ಪನವರ ಛತ್ರ, ಸಾಗರ

8. ಶ್ರೀ ಸಮರ್ಥ ಶ್ರೀಧರ ತತ್ವಜ್ಞಾನ ಮಂಡಳಿ, ಬಸವನಗಲ್ಲಿ, ಬೆಳಗಾಂ

9. ಶ್ರೀ ಪರಮಾನಂದ ಮಠ ಶೀಗೆಹಳ್ಳಿ, ಶಿರಸಿ ತಾ, ಉತ್ತರ ಕನ್ನಡ ಜಿಲ್ಲೆ

10. ಶ್ರೀ ಶ್ರೀಧರ ಕುಟಿ, ಸಜ್ಜನಘಡ, ಮಹಾರಾಷ್ಟ್ರ

11. ಶ್ರೀ ಶ್ರೀಧರಾಶ್ರಮ, ಗೋರೆ, ಕುಮಟಾ ತಾ. ಉತ್ತರ ಕನ್ನಡ ಜಿಲ್ಲೆ

12. ಶ್ರೀ ಪಾದುಕಾ ಮಂದಿರ, ಶ್ರೀ ಶ್ರೀಧರ ನಿವಾಸ, ರಾಮತೀರ್ಥ, ಹೊನ್ನಾವರ, ಉತ್ತರ ಕನ್ನಡ ಜಿಲ್ಲೆ

13. ಶ್ರೀ ಶ್ರೀಧರಾನಂದ ಮಠ, ನಾಗತೀರ್ಥ, ಧಾರೇಶ್ವರ, ಕುಮಟಾ ತಾ, ಉತ್ತರ ಕನ್ನಡ ಜಿಲ್ಲೆ


ಭಗವಾನ್ ಸದ್ಗುರು ಶ್ರೀಧರ ಸ್ವಾಮಿಗಳವರು ಅತ್ಯಂತ ಧಾರ್ಮಿಕ ಪ್ರಿಯರು ಮತ್ತು ಅತ್ಯಂತ ಶಾಂತಿ ಪ್ರಿಯರಾಗಿದ್ದುದು ತಮಗೆಲ್ಲರಿಗೂ ತಿಳಿದ ವಿಚಾರವೇ ಸರಿ. ಅವರೆಂದು ಸಮಾಜದಲ್ಲಿ ಅಶಾಂತಿಯನ್ನು ಹರಡುವುದು, ವೈರತ್ವವನ್ನು ಪ್ರಸರಿಸುವುದು, ಧರ್ಮಧ ಹೆಸರಿನಲ್ಲಿ ಕಲಹಗಳನ್ನುಂಟು ಮಾಡುವುದಕ್ಕೆ ಸಂಪೂರ್ಣ ವಿರೋಧ ಹೊಂದಿದ್ದರು. ದೇಶದಲ್ಲಿ ಎಲ್ಲಾ ಸಮಾಜದವರು ತಮ್ಮ ತಮ್ಮ ಧರ್ಮಗಳನ್ನು ಶಾಂತಿಯುತವಾಗಿ ಆಚರಿಸಿ ಸಹಬಾಳ್ವೆಯನ್ನು ಮಾಡಬೇಕೆಂಬುದು ಅವರ ಉದ್ದೇಶವಾಗಿತ್ತು ಇದು ಶ್ರೀ ಭಗವಾನರೊಂದಿಗೆ ಒಡನಾಟವಿದ್ದವರ ಅಭಿಪ್ರಾಯ ಹಾಗೂ ಅವರ ಜೀವನ ಚರಿತ್ರೆಯನ್ನು ಅವಲೋಕಿಸಿದರೆ ತಿಳಿಯುತ್ತದೆ. 


ದಯಮಾಡಿ ಭಕ್ತಾದಿಗಳು ಹಾಗೂ ಸಾರ್ವಜನಿಕರು ವಂಚಕರ ಮೋಸಜಾಲಕ್ಕೆ ಒಳಗಾಗದೇ ವಿಚಾರಿಸಿ ನಡೆದುಕೊಳ್ಳಬೇಕಾಗಿ ವಿನಂತಿ. ತಮಗೇನಾದರು ಸಂಶಯ ಉಂಟಾದಲ್ಲಿ ಶ್ರೀ ಶ್ರೀಧರ ಸೇವಾ ಮಹಾಮಂಡಲ(ರಿ.) ಶ್ರೀ ಶ್ರೀಧರಾಶ್ರಮ, ಶ್ರೀಕ್ಷೇತ್ರ ವರದಪುರಕ್ಕೆ (08183-295722, 8762716698 ವಾಟ್ಸಾಪ್) ಸಂಪರ್ಕಿಸಿ.


ಶ್ರೀ ಶ್ರೀಧರ ಸೇವಾ ಮಹಾಮಂಡಲ (ರಿ.)

ಶ್ರೀ ಶ್ರೀಧರಾಶ್ರಮ-ಶ್ರೀಕ್ಷೇತ್ರ ವರದಪುರ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top