ಹಿಂದೂ ರಾಷ್ಟ್ರರತ್ನ: ನ್ಯಾಯವಾದಿ (ಪೂ.) ಹರಿಶಂಕರ ಜೈನ್;
ಸನಾತನ ಧರ್ಮಶ್ರೀ: ಸಚಿವ ಕಪಿಲ್ ಮಿಶ್ರಾ, ಚಲನಚಿತ್ರ ನಿರ್ಮಾಪಕ ವಿಪುಲ್ ಷಾ, ವಕೀಲ ಸಂಜೀವ ಪುಣಾಲೇಕರ್, ಗೌರಿಶಂಕರ ಮೋಹತಾ, ಶಿಲ್ಪಿ ಪ್ರಮೋದ್ ಕಾಂಬಳೆ
ಸನಾತನ ಸಂಸ್ಥೆಯು 2025 ರ ಮೇ 17 ರಿಂದ 19 ರವರೆಗೆ ಗೋವಾದ ಫೊಂಡಾದಲ್ಲಿ ನಡೆದ 'ಸನಾತನ ರಾಷ್ಟ್ರ ಶಂಖನಾದ' ಮಹೋತ್ಸವದಲ್ಲಿ ಹಿಂದೂ ಧರ್ಮ ಮತ್ತು ರಾಷ್ಟ್ರ ರಕ್ಷಣೆಗಾಗಿ ವಿಶೇಷ ಕಾರ್ಯ ಮಾಡಿದ ಹಲವರಿಗೆ 'ಹಿಂದೂ ರಾಷ್ಟ್ರರತ್ನ' ಮತ್ತು 'ಸನಾತನ ಧರ್ಮಶ್ರೀ' ಪ್ರಶಸ್ತಿಗಳನ್ನು ಘೋಷಿಸಿತ್ತು.
ಅವರಲ್ಲಿ, ದೆಹಲಿಯ 'ಹಿಂದೂ ಫ್ರಂಟ್ ಫಾರ್ ಜಸ್ಟೀಸ್' ಅಧ್ಯಕ್ಷರು ಮತ್ತು ಸರ್ವೋಚ್ಚ ನ್ಯಾಯಾಲಯದ ವಕೀಲರಾದ ಪೂ. ಹರಿಶಂಕರ ಜೈನ್ ಅವರಿಗೆ 'ಹಿಂದೂ ರಾಷ್ಟ್ರ ರತ್ನ' ಪ್ರಶಸ್ತಿ, ಮತ್ತು ದೆಹಲಿ ರಾಜ್ಯದ ಕಲೆ ಮತ್ತು ಸಂಸ್ಕೃತಿ ಸಚಿವ ಕಪಿಲ್ ಮಿಶ್ರಾ, ಮುಂಬೈಯ ಪ್ರಸಿದ್ಧ ಚಲನಚಿತ್ರ ನಿರ್ಮಾಪಕ ಮತ್ತು ನಿರ್ದೇಶಕ ವಿಪುಲ್ ಷಾ, ಮುಂಬೈ ಹಿಂದೂ ವಿಧಿಜ್ಞ ಪರಿಷತ್ನ ರಾಷ್ಟ್ರೀಯ ಕಾರ್ಯದರ್ಶಿ ನ್ಯಾಯವಾದಿ ಸಂಜೀವ ಪುಣಾಲೇಕರ್, ಋಷಿಕೇಶದ ಗೀತಾ ಭವನದ ಗೌರಿಶಂಕರ ಮೋಹತಾ ಮತ್ತು ಅಹಿಲ್ಯಾನಗರದ ಪ್ರಸಿದ್ಧ ಭಾರತೀಯ ಶಿಲ್ಪಿ ಹಾಗೂ ಚಿತ್ರಕಾರ ಪ್ರಮೋದ್ ಕಾಂಬಳೆ ಅವರಿಗೆ ಇತ್ತೀಚೆಗೆ ಸಂತರಿಂದ 'ಸನಾತನ ಧರ್ಮಶ್ರೀ' ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಮಂದಿರ ಮುಕ್ತಿಗಾಗಿ ಹೋರಾಟ : ಶ್ರೀರಾಮ ಮಂದಿರ, ಉತ್ತರಪ್ರದೇಶದ ಕಾಶಿ, ಮಥುರಾ, ಮಧ್ಯಪ್ರದೇಶದ ಭೋಜಶಾಲಾ ಮುಂತಾದ ಮಂದಿರಗಳ ಮುಕ್ತಿಗಾಗಿ ಉಚಿತವಾಗಿ ನ್ಯಾಯಾಲಯದಲ್ಲಿ ಹೋರಾಡಿದ ಪ್ರಖರ ಧರ್ಮಾಭಿಮಾನಿ ವಕೀಲ (ಪೂ.) ಹರಿಶಂಕರ ಜೈನ್ ಅವರಿಗೆ ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕ ಸದ್ಗುರು (ಡಾ.) ಚಾರುದತ್ತ ಪಿಂಗಳೆ ಅವರ ಶುಭ ಹಸ್ತದಿಂದ ದೆಹಲಿಯಲ್ಲಿ 'ಹಿಂದೂ ರಾಷ್ಟ್ರರತ್ನ' ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಪೂ. ಹರಿ ಶಂಕರ ಜೈನ್ ಅವರು ತಮ್ಮ ಮನೋಗತ ವ್ಯಕ್ತಪಡಿಸುತ್ತಾ, "ಈ ಪ್ರಶಸ್ತಿ ಮೂಲಕ ಹೊಸ ಕಾರ್ಯ ಮಾಡಲು ಶಕ್ತಿ ಸಿಕ್ಕಿದೆ. ಜೀವ ಇರುವವರೆಗೂ ಅನೇಕ ಮಂದಿರಗಳ ಮುಕ್ತಿ ಕಾರ್ಯವನ್ನು ಪೂರ್ಣಗೊಳಿಸುವುದು ನಮ್ಮ ಜವಾಬ್ದಾರಿ ಎಂದು ತಿಳಿದು ಅದನ್ನು ಪೂರ್ಣಗೊಳಿಸುತ್ತೇನೆ" ಎಂದರು.
ಹಿಂದೂ ಇಕೋಸಿಸ್ಟಮ್ ನಿಂದ ಸಂಘಟನೆ : ಹಿಂದೂ ಇಕೋಸಿಸ್ಟಮ್ ಮೂಲಕ ಲೇಖಕರು, ಪ್ರಾಧ್ಯಾಪಕರು, ವಿಜ್ಞಾನಿಗಳು, ಕಲಾವಿದರು, ಇತಿಹಾಸಕಾರರು ಮತ್ತು ಧರ್ಮಪ್ರೇಮಿಗಳನ್ನು ಒಗ್ಗೂಡಿಸಿ ಧರ್ಮ ಮತ್ತು ರಾಷ್ಟ್ರ ಸೇವೆಗಾಗಿ ಪರಿಣಾಮಕಾರಿ ವೇದಿಕೆಯನ್ನು ನಿರ್ಮಿಸಿದ, ಹಾಗೂ ದೆಹಲಿ ಗಲಭೆಯಲ್ಲಿ ಹಿಂದೂಗಳಿಗೆ ಸಹಾಯ ಮಾಡಿದ ದೆಹಲಿಯ ಕಲೆ ಮತ್ತು ಸಂಸ್ಕೃತಿ ಸಚಿವ ಕಪಿಲ್ ಮಿಶ್ರಾ ಅವರಿಗೆ ಸದ್ಗುರು (ಡಾ.) ಚಾರುದತ್ತ ಪಿಂಗಳೆ ಅವರ ಶುಭ ಹಸ್ತದಿಂದ ದೆಹಲಿಯಲ್ಲಿ 'ಹಿಂದೂ ರಾಷ್ಟ್ರರತ್ನ' ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಮನೋಗತ ವ್ಯಕ್ತಪಡಿಸುತ್ತಾ ಸಚಿವ ಕಪಿಲ್ ಮಿಶ್ರಾ ಅವರು, "ಗೋವಾದಲ್ಲಿ ನಡೆದ ಮಹೋತ್ಸವದಲ್ಲಿ ಮಾಡಿದ ಶಂಖನಾದದ ಧ್ವನಿ ವರ್ಷಗಳವರೆಗೆ ಪ್ರತಿಧ್ವನಿಸುತ್ತದೆ. ಇಂತಹ ಶಂಖನಾದ ಮಹೋತ್ಸವ ದೆಹಲಿಯಲ್ಲೂ ನಡೆಯಬೇಕು ಎಂದು ವಿನಂತಿಸುತ್ತೇನೆ" ಎಂದರು. ಅದೇ ರೀತಿ ಋಷಿಕೇಶದ ಗೀತಾ ಭವನದ ಗೌರಿಶಂಕರ ಮೋಹತಾ ಅವರಿಗೆ ಸದ್ಗುರು (ಡಾ.) ಪಿಂಗಳೆ ಅವರು 'ಸನಾತನ ಧರ್ಮಶ್ರೀ' ಪ್ರಶಸ್ತಿ ನೀಡಿ ಸನ್ಮಾನಿಸಿದರು.
ಸತ್ಯ ಮತ್ತು ಸಂವೇದನಾಶೀಲ ವಿಷಯಗಳ ಮೇಲೆ ಚಲನಚಿತ್ರ ನಿರ್ಮಾಣ : ವಿಪುಲ್ ಷಾ ಅವರು 'ದಿ ಕೇರಳ ಸ್ಟೋರಿ' ಮತ್ತು 'ಬಸ್ತರ್: ದಿ ನಕ್ಸಲ್ ಸ್ಟೋರಿ' ಚಲನಚಿತ್ರಗಳ ಮೂಲಕ 'ಲವ್ ಜಿಹಾದ್' ಮತ್ತು ನಕ್ಸಲಿಸಂನಂತಹ ಸಂವೇದನಾಶೀಲ ಸಾಮಾಜಿಕ ವಿಷಯಗಳ ಮೇಲೆ ಬೆಳಕು ಚೆಲ್ಲಿದರು. ಈ ಸತ್ಯಘಟನೆ ಆಧಾರಿತ ಚಲನಚಿತ್ರಗಳಿಂದ ಅವರು ಕೇವಲ ವ್ಯಾವಹಾರಿಕ ಯಶಸ್ಸನ್ನು ಮಾತ್ರ ಗಳಿಸಲಿಲ್ಲ, ಬದಲಿಗೆ ಪ್ರಪಂಚದಾದ್ಯಂತ ದೊಡ್ಡ ಮಟ್ಟದ ಜಾಗೃತಿ ಮೂಡಿಸುವ ಕಾರ್ಯವನ್ನೂ ಪರಿಣಾಮಕಾರಿಯಾಗಿ ಮಾಡಿದರು.
ಇಂತಹ ಸತ್ಯನಿಷ್ಠ ಮತ್ತು ರಾಷ್ಟ್ರಭಕ್ತ ಚಲನಚಿತ್ರ ನಿರ್ಮಾಪಕ-ನಿರ್ದೇಶಕ ವಿಪುಲ್ ಷಾ ಅವರಿಗೆ ಮುಂಬೈನಲ್ಲಿ ಸನಾತನ ಸಂಸ್ಥೆಯ ಧರ್ಮಪ್ರಚಾರಕ ಸದ್ಗುರು ಅನುರಾಧಾ ವಾಡೇಕರ್ ಅವರು 'ಸನಾತನ ಧರ್ಮಶ್ರೀ' ಪ್ರಶಸ್ತಿ ನೀಡಿ ಸತ್ಕರಿಸಿದರು. ತಮ್ಮ ಮನೋಗತ ವ್ಯಕ್ತಪಡಿಸುತ್ತಾ ವಿಪುಲ್ ಷಾ ಅವರು, "ಸನಾತನ ಧರ್ಮಶ್ರೀ ಪ್ರಶಸ್ತಿಯನ್ನು ಸ್ವೀಕರಿಸಿದಾಗ ನಾನು ಭಾವಮಯ ಮತ್ತು ಆನಂದಿಯಾಗಿದ್ದೇನೆ. ಈ ಪ್ರಶಸ್ತಿಯು ನನಗೆ ಸ್ಫೂರ್ತಿ ನೀಡುತ್ತದೆ, ಇದರಿಂದ ನಮ್ಮ ಹಿಂದೂ ಸಮಾಜಕ್ಕಾಗಿ ಇನ್ನೂ ಉತ್ತಮ ಚಲನಚಿತ್ರಗಳನ್ನು ನಿರ್ಮಿಸಲು ಸಾಧ್ಯವಾಗುತ್ತದೆ ಮತ್ತು ಜಾಗೃತಿ ಹಾಗೂ ನಿರಂತರ ಪ್ರಯತ್ನಗಳು ಮುಂದುವರಿಯುತ್ತವೆ" ಎಂದರು.
ನಿರಪರಾಧಿ ಹಿಂದೂಗಳು ಮತ್ತು ಸಾಮಾನ್ಯ ಜನರಿಗೆ ಸಹಾಯ : ಕಾಂಗ್ರೆಸ್ ಆಳ್ವಿಕೆಯಲ್ಲಿ 'ಹಿಂದೂ ಭಯೋತ್ಪಾದಕರು' ಎಂದು ಬಿಂಬಿಸಲು ಭಯಾನಕ ಪಿತೂರಿಗಳನ್ನು ಮಾಡಿ ಹಿಂದುತ್ವವಾದಿಗಳನ್ನು ವಿವಿಧ ಪ್ರಕರಣಗಳಲ್ಲಿ ಸಿಲುಕಿಸಲಾಯಿತು. ಇಂತಹ ಸಮಯದಲ್ಲಿ ವಕೀಲ ಸಂಜೀವ ಪುಣಾಲೇಕರ್ ಅವರು ಮಾಲೇಗಾಂವ್ ಬಾಂಬ್ ಸ್ಫೋಟ ಪ್ರಕರಣ, ಮಡ್ಗಾಂವ್ ಬಾಂಬ್ ಸ್ಫೋಟ ಪ್ರಕರಣ, ಹಾಗೂ ಅನೇಕ ಮೊಕದ್ದಮೆಗಳಲ್ಲಿ ಹಿಂದುತ್ವವಾದಿಗಳಿಗೆ ಮತ್ತು ಸಾಮಾನ್ಯ ಜನರಿಗೆ ಉಚಿತವಾಗಿ ಸಹಾಯ ಮಾಡಿ ಸತ್ಯವನ್ನು ಸಮಾಜದಲ್ಲಿ ದೃಢವಾಗಿ ಮಂಡಿಸಿದರು.
ಅವರಿಗೆ ಸನಾತನ ಸಂಸ್ಥೆಯ ಧರ್ಮಪ್ರಚಾರಕ ಸದ್ಗುರು ಅನುರಾಧಾ ವಾಡೇಕರ್ ಅವರು 'ಸನಾತನ ಧರ್ಮಶ್ರೀ' ಪ್ರಶಸ್ತಿ ನೀಡಿ ಸತ್ಕರಿಸಿದರು. ಈ ಸಂದರ್ಭದಲ್ಲಿ ಮನೋಗತ ವ್ಯಕ್ತಪಡಿಸುತ್ತಾ ವಕೀಲ ಪುಣಾಲೇಕರ್ ಅವರು, "ಈಗ ರಾಷ್ಟ್ರ ಮತ್ತು ಧರ್ಮದ ಕಾರ್ಯಕ್ಕಾಗಿ ಅನೇಕ ವಕೀಲರು ಮುಂದೆ ಬಂದಿದ್ದಾರೆ. ನನ್ನೊಂದಿಗೆ ಕಾರ್ಯ ಮಾಡಿದ ಎಲ್ಲ ವಕೀಲರ ಗೌರವ ಇದು, ಮತ್ತು ವಕೀಲರ ಪ್ರತಿನಿಧಿಯಾಗಿ ನಾನು ಇದನ್ನು ನಮ್ರತೆಯಿಂದ ಸ್ವೀಕರಿಸುತ್ತಿದ್ದೇನೆ. ಹಿಂದೂ ರಾಷ್ಟ್ರದ ಸ್ಥಾಪನೆಯಾಗುವವರೆಗೆ ನಾವು ಶಾಂತರಾಗುವುದಿಲ್ಲ" ಎಂದರು.
ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಕಲೆಯ ನಿರ್ಮಾಣ : ಪ್ರಸಿದ್ಧ ಭಾರತೀಯ ಶಿಲ್ಪಿ ಮತ್ತು ಚಿತ್ರಕಾರ ಪ್ರಮೋದ್ ಕಾಂಬಳೆ ಅವರಿಗೆ ಸನಾತನ ಸಂಸ್ಥೆಯ ಧರ್ಮಪ್ರಚಾರಕ ಸದ್ಗುರು ನಂದಕುಮಾರ್ ಜಾಧವ್ ಅವರು ನಗರದಲ್ಲಿ 'ಸನಾತನ ಧರ್ಮಶ್ರೀ' ಪ್ರಶಸ್ತಿ ನೀಡಿ ಸತ್ಕರಿಸಿದರು. ಪ್ರಮೋದ್ ಕಾಂಬಳೆ ಅವರು ಸ್ವಾಮಿನಾರಾಯಣ ಮಂದಿರಕ್ಕಾಗಿ ಸ್ವಾಮಿನಾರಾಯಣರ ಜೀವನವನ್ನು ಆಧರಿಸಿದ 10 ಭವ್ಯ ಸೆಟ್ಗಳನ್ನು, 'ಸಾರೆ ಜಹಾಂ ಸೇ ಅಚ್ಚಾ' ಎಂಬ ಹೆಸರಿನಲ್ಲಿ 500 ಮಹಾನ್ ಭಾರತೀಯ ವ್ಯಕ್ತಿಗಳ ವಿಶಾಲ ಪೆನ್ಸಿಲ್ ಸ್ಕೆಚ್ಗಳನ್ನು, ಛತ್ರಪತಿ ಶಿವಾಜಿ ಮಹಾರಾಜರ ಅನೇಕ ಮೂರ್ತಿಗಳನ್ನು, ಹಾಗೂ ಶಿರಡಿಯ ಪ್ರಸಾದಾಲಯದಲ್ಲಿ 70 ಅಡಿ ಎತ್ತರದ ಸಾಯಿಬಾಬಾ ಮೂರ್ತಿಯನ್ನು ನಿರ್ಮಿಸಿದ್ದಾರೆ.
ಅಯೋಧ್ಯೆಯ ಶ್ರೀರಾಮ ಮಂದಿರದ ಪರಿಕ್ರಮ ಮಾರ್ಗದಲ್ಲಿ ಭಗವಾನ್ ಶ್ರೀರಾಮನ ಜೀವನಕ್ಕೆ ಸಂಬಂಧಿಸಿದ 125 ಚಿತ್ರರಥಗಳು ಅವರ ಮಾರ್ಗದರ್ಶನದಲ್ಲಿ ಸಿದ್ಧಗೊಂಡಿವೆ. ಕಾಂಬಳೆ ಅವರು ತಮ್ಮ ಮನೋಗತ ವ್ಯಕ್ತಪಡಿಸುತ್ತಾ, "ಈ ಪ್ರಶಸ್ತಿಗಾಗಿ ನಾನು ನನ್ನನ್ನು ಅದೃಷ್ಟಶಾಲಿ ಎಂದು ಭಾವಿಸುತ್ತೇನೆ ಮತ್ತು ಮುಂದಿನ ಕಾರ್ಯ ಮಾಡಲು ಇದರಿಂದ ನನಗೆ ಸ್ಫೂರ್ತಿ ಸಿಗುತ್ತದೆ" ಎಂದರು.
ಮೇ ತಿಂಗಳಲ್ಲಿ ನಡೆದ 'ಸನಾತನ ರಾಷ್ಟ್ರ ಶಂಖನಾದ' ಮಹೋತ್ಸವದಲ್ಲಿ ಸನಾತನ ಸಂಸ್ಥೆಯ ಸಂಸ್ಥಾಪಕ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಲಾಜಿ ಆಠವಲೆ ಅವರ 83ನೇ ಜನ್ಮೋತ್ಸವದ ನಿಮಿತ್ತ ಅವರ ಶುಭ ಹಸ್ತದಿಂದ 4 ಜನರಿಗೆ 'ಹಿಂದೂ ರಾಷ್ಟ್ರರತ್ನ' ಮತ್ತು 21 ಜನರಿಗೆ 'ಸನಾತನ ಧರ್ಮಶ್ರೀ' ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿತ್ತು. ಆ ಸಮಯದಲ್ಲಿ ರಾಷ್ಟ್ರ ಮಟ್ಟದಲ್ಲಿ ಆಧ್ಯಾತ್ಮಿಕ, ಸಾಂಸ್ಕೃತಿಕ ಮತ್ತು ರಾಷ್ಟ್ರೀಯ ಚೇತನ ಮೂಡಿಸಿದ ಗೋವಾದ ಐತಿಹಾಸಿಕ ಸನಾತನ ರಾಷ್ಟ್ರ ಶಂಖನಾದ ಮಹೋತ್ಸವದಲ್ಲಿ ಭಾರತ ಸೇರಿದಂತೆ 23 ದೇಶಗಳಿಂದ 30 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು.
-ಅಭಯ ವರ್ತಕ್,
ವಕ್ತಾರರು, ಸನಾತನ ಸಂಸ್ಥೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ