ಮಂಗಳೂರಿನಲ್ಲಿ ಕಲಾಭಿ ಯಕ್ಷಗಾನ ಅಧ್ಯಯನ ಕೇಂದ್ರ ಆರಂಭ

Upayuktha
0



ಮಂಗಳೂರು: ಕಲೆ, ಕಲಾವಿದ ಮತ್ತು ಕಲಿಕೆ ಎನ್ನುವ ಉದ್ದೇಶದಿಂದ ಮುನ್ನಡೆಯುತ್ತಿರುವ ಮಂಗಳೂರಿನ ಪ್ರತಿಷ್ಠಿತ ರಂಗ ಸಂಸ್ಥೆ ಕಲಾಭಿ ಮಂಗಳೂರು ಇದೀಗ ಮತ್ತೊಂದು ಮೈಲಿಗಲ್ಲಿನತ್ತ ಪಯಣ ಬೆಳೆಸಿದೆ. 


ಆಸಕ್ತ ಯಕ್ಷಗಾನ ಪ್ರಿಯರಿಗೆ ಯಕ್ಷ ನಾಟ್ಯ ಕಲಿಸುವ ಉದ್ದೇಶದಿಂದ ಕಲಾಭಿ ಯಕ್ಷಗಾನ ಅಧ್ಯಯನ ಕೇಂದ್ರ ಮಂಗಳೂರನ್ನು ಆರಂಭಿಸಲಾಗಿದೆ. ಕಲಾಭಿ ಸಂಸ್ಥೆಯ ಅಧ್ಯಕ್ಷ ಸುರೇಶ್ ವರ್ಕಾಡಿ ಮತ್ತು ಕೇಂದ್ರದ ಗುರುಗಳಾದ ರಾಕೇಶ್ ರೈ ಅಡ್ಕ ಇವರ ನೇತೃತ್ವದಲ್ಲಿ ಜೂ. 6ರಂದು ಉದ್ಘಾಟನೆ ನಡೆಯಿತು. ಕಲಾಭಿ ತಂಡದ ಕಲಾವಿದರು ಕಲಿಕೆಯನ್ನು ಆರಂಭಿಸಿದ್ದಾರೆ. 


ಆಸಕ್ತರು Kalabhi.org ಇನ್ಸ್ಟಾಗ್ರಾಮ್ ಚಾನಲ್ ಮೂಲಕ ಅಥವಾ +918431631998 ಈ ದೂರವಾಣಿಯನ್ನು ಸಂಪರ್ಕಿಸಬಹುದು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top