ವಿದ್ಯಾರ್ಥಿಗಳ ಭವಿಷ್ಯಕ್ಕೊಂದು ಕಿವಿ ಮಾತು: ವಿಷಯಗಳ ಆಯ್ಕೆ ಹೇಗಿರಬೇಕು?

Upayuktha
0


ಇಂದು ಹಲವಾರು ವಿದ್ಯಾರ್ಥಿಗಳು ಪೇೂಷಕರು ಕರೆ ಮಾಡಿ "ನನ್ನ ಮಗ/ ಮಗಳು ಎಸ್.ಎಸ್.ಎಲ್.ಸಿ./ಪಿ.ಯು.ಸಿ ಆಗಿದೆ. ಮುಂದೆ ಯಾವ ವಿಷಯ ಆಯ್ಕೆ ಮಾಡಿಕೊಂಡರೆ ಸೂಕ್ತ ಯಾವ ಕಾಲೇಜ್ ಉತ್ತಮ" ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳುತ್ತಾ ಇರುತ್ತಾರೆ. ಮೇ/ಜೂನ್ ಮಾಸ ಬಂದಾಗ ಸಾಧಾರಣ ಮಟ್ಟಿಗೆ ಪ್ರತಿಯೊಬ್ಬ ಹೆತ್ತವರಿಗೂ ಈ ಪ್ರಶ್ನೆಗಳು ಕಾಡುವುದು ಸಹಜವೂ ಹೌದು. ಹಾಗಾಗಿ ಬಹು ಮುಖ್ಯವಾಗಿ ವಿಷಯಗಳ ಆಯ್ಕೆ ಹೇಗಿರಬೇಕು ಅನ್ನುವುದರ ಮೇಲೆ ಬೆಳಕು ಚೆಲ್ಲುವ ಮಾಹಿತಿ ನಿಮ್ಮ ಜೊತೆ ಹಂಚಿಕೊಳ್ಳಲು ಬಯಸುತ್ತೇನೆ.


1. ಹೆತ್ತವರಿಗೆ ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಹತ್ತಾರು ಕನಸುಗಳು ಆಸೆಗಳು ಇರುವುದು ಸಹಜ. ಆದರೆ ಇದರ ಜೊತೆಗೆ ತಮ್ಮ ಮಕ್ಕಳ ಅಭಿರುಚಿ ಸಾಮರ್ಥ್ಯದ ಬಗ್ಗೆಯೂ ಹೆಚ್ಚಿನ ಕಾಳಜಿ ಬೇಕು.


2. ಈ ನಿಟ್ಟಿನಲ್ಲಿ ತಮ್ಮ ಮಗುವಿನ ಹಿಂದಿನ ಸಮಗ್ರ ಪ್ರಗತಿಯ ವರದಿ (progress report) ತಮ್ಮ ಮನಸ್ಸಿನಲ್ಲಿ ಇರಬೇಕು. ಈ ನಿಟ್ಟಿನಲ್ಲಿ ನಿಮ್ಮ ಮಕ್ಕಳಿಗೆ ಕಲಿಸಿದ ಶಿಕ್ಷಕರ ಜೊತೆ ಸಮಾಲೇೂಚನೆ ಮಾಡಿದರೂ ತೊಂದರೆ ಇಲ್ಲ. ಹಾಗಂತ ಕೆಲವು ವಿದ್ಯಾರ್ಥಿಗಳಿಗೆ ಇದರ ಗೊಂದಲ ಬರುವುದಿಲ್ಲ. ಅವರ ಸಾಮರ್ಥ್ಯ ಇದರ ಜೊತೆಗೆ ಗುರಿಯ ಸ್ವಷ್ಠತೆಯೂ ಅವರಲ್ಲಿಯೇ ಇರುತ್ತದೆ. ಇಲ್ಲಿ ಹೆತ್ತವರಿಗೆ ಹೆಚ್ಚಿನ ಸಮಸ್ಯೆ ಇಲ್ಲ.


3. ನಾನು ಆಟ್ಸ್೯ ತೆಗೆದು ಕೊಳ್ಳಬೇಕೋ, ಸೈನ್ಸ್ ತೆಗೆದು ಕೊಂಡ್ರೆ ಹೇಗೆ? ಕಾಮರ್ಸ್ ಒಳ್ಳೆಯದಾದೀತೊ ಏನೇೂ? ಈ ರೀತಿಯ ಗೊಂದಲದಲ್ಲಿರುವ ವಿದ್ಯಾರ್ಥಿಗಳು ಮೊದಲಿಗೆ ತಾವು ಮುಂದೆ ಏನಾಗ ಬೇಕು; ತನ್ನ ಬದುಕಿನ ಗುರಿ ಏನು ಅನ್ನುವುದನ್ನು ಮೊದಲು ಸ್ವಷ್ಥ ಮಾಡಿಕೊಂಡು ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಬೇಕೇ ಹೊರತು, ನನ್ನ ಸ್ನೇಹಿತರು ಹೀಗೆ ಹೇಳುತ್ತಿದ್ದಾರೆ ,ಯಾವುದೊ ಕಾಲೇಜಿನ ಮೇಸ್ಟರು ಹೀಗೆ ಹೇಳುತ್ತಿದ್ದಾರೆ ಅನ್ನುವುದು ಮುಖ್ಯವಲ್ಲ. ಇವತ್ತಿನ ಪರಿಸ್ಥಿತಿ ಏನಾಗಿದೆ ಅಂದರೆ ವಿದ್ಯಾರ್ಥಿಗಳ ಕೊರತೆ ಬಂದಾಗ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಜಾಹೀರಾತು ಮಾಡುವ ತಂತ್ರಗಾರಿಕೆಯನ್ನು ಬಳಸಿ ಕೊಳ್ಳುವುದನ್ನು ಕಾಣುತ್ತಿದ್ದೇವೆ. ತಾವು ಖುದ್ದಾಗಿ ವಿಷಯ /ಕೇೂರ್ಸುಗಳ ತನಗೆ ಮುಂದೆ ಯಾವ ರೀತಿಯಲ್ಲಿ ಉದ್ಯೋಗ ಭರವಸೆ ನೀಡೀತು ಅನ್ನುವುದನ್ನು ತಿಳಿದುಕೊಂಡು ಮುನ್ನಡೆಯುವುದು ಉತ್ತಮ.


4. ವಿಷಯಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಉನ್ನತ ಶಿಕ್ಷಣಕ್ಕೆ ಎಷ್ಟು ದಾರಿಗಳು ಇವೆ ಅನ್ನುವುದನ್ನು ನೇೂಡಿಕೊಂಡು ಇದರಿಂದ ಉದ್ಯೋಗಕ್ಕೆ ಎಷ್ಟು ಅವಕಾಶಗಳಿವೆ ಅನ್ನುವುದು ಮೊದಲೇ ತಿಳಿದುಕೊಳ್ಳುವುದು ಉತ್ತಮ ನಿಧಾ೯ರವಾಗಬಹುದು.


5. ವಿಷಯ ಯಾವುದೇ ಇರಲಿ ಮೇಲು ಕೀಳು ಅನ್ನುವುದಿಲ್ಲ. ಯಶಸ್ಸು ಸೇೂಲು ನಮ್ಮ ಅಭಿರುಚಿ ಪ್ರಯತ್ನದ ಮೇಲೆ ನಿಂತಿರುತ್ತದೆ ಅನ್ನುವುದು ಶತ ಸಿದ್ಧ. ನೀವು ಎಷ್ಟರ ಮಟ್ಟಿಗೆ ವಿಷಯಗಳಿಗೆ ನ್ಯಾಯ ನೀಡುತ್ತೀರೊ ಅಷ್ಟರ ಮಟ್ಟಿನ ನ್ಯಾಯ ಸಿಕ್ಕಿಯೇ ಸಿಗುತ್ತದೆ.


6. ನೀವು ಯಾವುದೇ ವಿಷಯ ಆಯ್ಕೆ ಮಾಡಿಕೊಳ್ಳಿ ಆ ವಿಷಯದ ಮೇಲೆ ಪ್ರೀತಿ ವಿಶ್ವಾಸ ಅಭಿಮಾನವಿರಲೇಬೇಕು.


7. ಕಾಲೇಜು ಆಯ್ಕೆ ಮಾಡಿಕೊಳ್ಳುವಾಗ ನುರಿತ ಅನುಭವಿ ಉಪನ್ಯಾಸಕರು ಆ ಸಂಸ್ಥೆಯಲ್ಲಿ ಇದ್ದಾರೆಯೇ ಅನ್ನುವುದು ಕೇಳಿ ತಿಳಿದುಕೊಳ್ಳಿ. ಪಾಠ ಪ್ರವಚನಗಳು ಸರಿಯಾಗಿ ನಡೆಯುತ್ತವೆ ಅನ್ನುವುದನ್ನು ಕೂಡಾ ಖುದ್ದಾಗಿ ನೇೂಡಿ ಕೇಳಿ ತಿಳಿದು ಕೊಳ್ಳಿ.


8. ಉತ್ತಮ ಗುಣಮಟ್ಟದ ಶಿಕ್ಷಣ ಸಂಪಾದಿಸುವುದು ನಿಮ್ಮಮೊದಲ ಆದ್ಯತೆ ಆಗ ಬೇಕು. ಬಡತನ ಇಂದಿನ ಶಿಕ್ಷಣ ಸಂಪಾದನೆಗೆ ಅಡ್ಡಿ ಬರುವುದಿಲ್ಲ. ಈ ನಿಟ್ಟಿನಲ್ಲಿ ಬ್ಯಾಂಕ್ ಗಳಿಂದ ಕಡಿಮೆ ಬಡ್ಡಿಯ ಸಾಲದ ವ್ಯವಸ್ಥೆ; ಸರಕಾರ ಮತ್ತು ಸರಕಾರೇತರ ಸಂಘ ಸಂಸ್ಥೆಗಳಿಂದ ವಿದ್ಯಾರ್ಥಿ ವೇತನಗಳು ಸಾಕಷ್ಟು ಲಭ್ಯವಿದೆ. ಆದರೆ ನಮ್ಮ ವಿದ್ಯಾರ್ಥಿಗಳಿಗೆ ಈ ಕುರಿತಾಗಿ ಮಾಹಿತಿ ತುಂಬಾ ಕಡಿಮೆ ಇದೆ.


9. ಈ ಒಂದೆರಡು ವಷ೯ದ ಶೈಕ್ಷಣಿಕ ವರುಷ ವಿದ್ಯಾರ್ಥಿಗಳ ಮತ್ತು ಹೆತ್ತವರ ಪಾಲಿಗೆ ದೊಡ್ಡ ಸವಾಲು ಹೌದು ದೂರದ ಶಾಲೆಗಳಲ್ಲಿ ವಸತಿ ವ್ಯವಸ್ಥೆ ಹುಡುಕುವಾಗಲೂ ತುಂಬಾ ಜಾಗೃತಿ ವಹಿಸ ಬೇಕು. ಹಾಗಾಗಿ ಮನೆಯ ಹತ್ತಿರದಲ್ಲಿನ ಉತ್ತಮ ಶಾಲೆ/ಕಾಲೇಜುಗಳನ್ನು ಆಯ್ಕೆಮಾಡಿ ಕೊಳ್ಳುವುದು ಸೂಕ್ತ. ಆದರೆ ತಮ್ಮ ಅಭಿರುಚಿಗೆ ತಕ್ಕ ವಿಷಯ ಅಲ್ಲಿ ಸಿಗಬಹುದೇ ನೇೂಡಿಕೊಂಡು ಸೇರ್ಪಡೆ ಮಾಡಿಕೊಳ್ಳಿ.


10. ವಿಷಯಗಳ ಆಯ್ಕೆ ಮಾಡಿಕೊಳ್ಳುವ ಸಂದರ್ಭದಲ್ಲಿ ಯಾವುದೇ ಫಲಾಪೇಕ್ಷೆ ಇಲ್ಲದ ನುರಿತ ವಿಷಯ ತಜ್ಞರಿಂದಲೇ ಮಾಹಿತಿ ಪಡೆದು ಮತ್ತೆ ನಿಮ್ಮದೇ ನಿರ್ಣಯ ತೆಗೆದುಕೊಳ್ಳಿ. ಅನಂತರ ನೀವು ಸೇೂತು ಅಸಹಾಯಕರಾಗಿ ನಿಂತಾಗ ನಿಮಗೆ ಸಹಾಯ ಮಾಡಲು ಯಾರು ಬರುವುದಿಲ್ಲ. ಇದು ಶತ ಸಿದ್ದ. ಯಶಸ್ಸು ನಿಮ್ಮದಾಗಲಿ ಅನ್ನುವುದು ನಮ್ಮ ಹಾರೈಕೆಯೂ ಹೌದು.


- ಕೊಕ್ಕರ್ಣೆ  ಸುರೇಂದ್ರನಾಥ ಶೆಟ್ಟಿ ಉಡುಪಿ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top