ಕೆಂಗೇರಿ ಉಪನಗರ: ಶ್ರೀಹೃದ್ಯಾ ಅಕಾಡೆಮಿ ವಿದ್ಯಾರ್ಥಿನಿಯರಿಂದ ಭರತನಾಟ್ಯ ಪ್ರದರ್ಶನ

Upayuktha
0


ಬೆಂಗಳೂರು: ಅಖಿಲ ಭಾರತೀಯ ಸಂಗೀತ ನೃತ್ಯ ಕಲಾವಿದರ ಒಕ್ಕೂಟ, ಕರ್ನಾಟಕ, ಬೆಂಗಳೂರು ಪಶ್ಚಿಮ ವಲಯ, ಇದರ ಆಯೋಜನೆಯಲ್ಲಿ ಕೆಂಗೇರಿ ಉಪನಗರ ಶ್ರೀ ಕಾಳಿಕಾಂಬ ದೇವಸ್ಥಾನದಲ್ಲಿ ಶಾಸ್ತ್ರೀಯ ಸಂಗೀತ ನೃತ್ಯ ವೇದಿಕೆಯ 2 ನೇ ಸರಣಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ದಿನಾಂಕ ಮೇ 30 ಈ ಶುಕ್ರವಾರ ಸಂಜೆ 6.30 ರಿಂದ 8.00 ರ ವರೆಗೆ ವಿದುಷಿ ಶ್ರೀಮತಿ ರೂಪಶ್ರೀ ಕೆ. ಎಸ್. ಬೆಂಗಳೂರು ಇವರ ನಿರ್ದೇಶನದಲ್ಲಿ ಶ್ರೀ ಹೃದ್ಯಾ ಅಕಾಡಮಿ (ರಿ.)ಯ ವಿದ್ಯಾರ್ಥಿನಿಯರಿಂದ ಭರತನಾಟ್ಯ ಜರಗಿತು.


ಕುಮಾರಿಯರಾದ ಹೃದ್ಯಾ ಭಟ್ ಕೆ., ಅಸ್ವತಿ ಮಹೇಶ್, ಇಶಿತ ಶರ್ಮ, ನಮಿತ ಎಂ., ಕ್ಷೇಮ ವಾಸಿ ಶಶಿಧರ್, ಹಾಗೂ ಲಕ್ಷಣಶ್ರೀ ಕೆ. ನೃತ್ಯ ಕಾರ್ಯಕ್ರಮ ನೀಡಿದರು. ಕಾರ್ಯಕ್ರಮ ಸಂಚಾಲಕರಾದ ವಿದುಷಿ ಶ್ರೀಮತಿ ಮಮತಾ ಎಸ್. ಕಾರ್ಯಕ್ರಮಕ್ಕೆ ಚಾಲನೆ ನೀಡಿ ಹಾರೈಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top