ಮಂಗಳೂರು: ಸದಾ ಹೊಸತನವನ್ನು ಹುಡುಕುತ್ತಾ ಕಲಿಕೆಯಲ್ಲಿ ಅದನ್ನು ಅಳವಡಿಸಿಕೊಳ್ಳುತ್ತಾ ರಂಗಭೂಮಿಯನ್ನು ಪ್ರೀತಿಸುವ ಮಂಗಳೂರಿನ ರಂಗ ಸಂಸ್ಥೆ ಕಲಾಭಿ. ಮುಂದಿನ ದಿನಗಳಲ್ಲಿ ಆಸಕ್ತರಿಗೆ ನಟನ ಕೌಶಲ್ಯಗಳ ತರಬೇತಿ ನೀಡಲಿದೆ.
ಈ ತರಬೇತಿಯು ನೀನಾಸಂ ಪದವೀಧರ, ಚಲನಚಿತ್ರ & ಸಿನಿಮಾ ನಟ ಹಾಗೂ ಕಲಾಭಿಯ ಕಾರ್ಯದರ್ಶಿ ಉಜ್ವಲ್ ಯು.ವಿ ಅವರ ಸಾರಥ್ಯದಲ್ಲಿ ನಡೆಯಲಿದೆ.
ಈ ನಿಟ್ಟಿನಲ್ಲಿ ಎನ್ ಎಸ್ ಡಿ, ನಿನಾಸಂ ಪದವೀಧರ ಕಲಾವಿದರು, ನಿರ್ದೇಶಕರು, ಅನೇಕ ರಂಗ ಕಲಾವಿದರು ಮತ್ತು ಚಿತ್ರ ನಿರ್ದೇಶಕರು, ಕಲಾವಿದರನ್ನು ಸೇರಿಸಿಕೊಂಡು ನಟನೆಯ ಪಠ್ಯಕ್ಕಾಗಿ ಪೂರ್ವಭಾವಿ ಸಭೆ ನಡೆಸಲಾಯಿತು.
ಈ ಸಭೆಯಲ್ಲಿ ಮುಂದೆ ನಡೆಯಲಿರುವ ತರಬೇತಿ ಮೂರು ಹಂತದಲ್ಲಿ ನಡೆಯಲ್ಲಿದು ಅದು ಎನ್ನನ್ನು ಒಳಗೊಂಡಿರಬೇಕು ಎಂದು ಚರ್ಚಿಸಲಾಯಿತು. ಶೀಘ್ರವೇ ಪಠ್ಯಕ್ರಮ ಸಿದ್ದವಾಗಲಿದ್ದು ತರಬೇತಿ ಆರಂಭವಾಗಲಿದೆ.
ಈ ಸಭೆಯಲ್ಲಿ ಜರ್ನಿ ಮ್ಯಾನ್ ಫಿಲ್ಮ್ಸ್ ನ ಸುಮಂತ್ ಭಟ್, ತುಳು ಸಿನಿಮಾದ ನಟ & ನಿರ್ದೇಶಕ ರಾಹುಲ್ ಅಮೀನ್, ನೀನಾಸಂ ಪದವೀಧ, ರಂಗಭೂಮಿ & ಚಲನಚಿತ್ರ ನಟ ಹಾಗೂ ತರಬೇತುದಾರರಾದ ಅವಿನಾಶ್ ರೈ, ರಂಗಭೂಮಿ ಮತ್ತು ಚಲನಚಿತ್ರ ನಟ ಪುನೀತ್ ಶೆಟ್ಟಿ, ನೀನಾಸಂ ಮತ್ತು NSD ನಿರ್ದೇಶನದಲ್ಲಿ ಪದವಿ ಪಡೆದಿರುವ ಸಲ್ಮಾ, ನೀನಾಸಂ ಪದವೀಧರ & ಸಂಗೀತಗಾರರಾದ ಶ್ರೀಪಾದ ತೀರ್ಥಳ್ಳಿ, ನೀನಾಸಂ ಪದವೀಧರ & ರಂಗಭೂಮಿ ನಿರ್ದೇಶಕರಾದ ಭುವನ್ ಮಣಿಪಾಲ್, ರಂಗಭೂಮಿ ಮತ್ತು ಚಲನಚಿತ್ರ ನಟರಾದ ವಿನೋದ್ ಶೆಟ್ಟಿ, ಚಲನಚಿತ್ರ ನಟಿಯಾದ ಚೈತ್ರ ಶೆಟ್ಟಿ, ನಿರ್ದೇಶಕರಾದ ಸೌಮೇಶ್, ರಂಗಭೂಮಿ ನಟಿಯಾದ ಹರ್ಷಿತಾ ಶಿರೂರು, ಭರತನಾಟ್ಯ & ರಂಗಭೂಮಿ ಕಲಾವಿದೆ ಭಾವನಾ ವಿಷ್ಣುಮೂರ್ತಿ ಕೆರೆಮಠ ಮತ್ತು ರಂಗಭೂಮಿ ನಟಿ ಭಾರ್ಗವಿ ನಾಯಕ್ ಉಪಸ್ಥಿತರಿದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ