ವೇದ-ಉಪನಿಷತ್ತುಗಳ ಸಾರ ಸಂಗ್ರಹ- 'ಶಾಶ್ವತ ಮೌಲ್ಯಗಳು' ಕೃತಿ

Upayuktha
0



ಶಾಶ್ವತ ಮೌಲ್ಯಗಳು ಇದೊಂದು ವಿಶಿಷ್ಟ ಕೃತಿ. ನಮ್ಮ ಭಾರತೀಯ ಸಂಸ್ಕೃತಿಯ ಮೂಲಾಧಾರಗಳಾದ ವೇದ ಉಪನಿಷತ್ತುಗಳಿಂದ ಆಯ್ದ 108 ಶ್ಲೋಕಗಳನ್ನು ಲೇಖಕರಾದ ಶ್ರೀಧರ ಶರ್ಮ ಅವರು ಅತ್ಯಂತ ಸರಳವಾಗಿ ಭಾವಾನುವಾದ ಮಾಡಿದ್ದಾರೆ. ಈ ಕೃತಿ ಜನಸಾಮಾನ್ಯರನ್ನು ಗಮನದಲ್ಲಿಟ್ಟುಕೊಂಡು ರಚಿಸಲಾಗಿದೆ.


ಮೂಲತಃ ವೃತ್ತಿಯಿಂದ ಶಿಕ್ಷಕರಾಗಿರುವ ಲೇಖಕರಿಗೆ ಅತ್ಯಂತ ಸರಳವಾಗಿ ತನ್ನ ಎದುರಿಗಿರುವವರಿಗೆ ವಿವರಿಸುವ ಕಲೆ ಸಿದ್ದಿಸಿರುವುದು ಇಲ್ಲಿನ ಭಾವಾನುವಾದಗಳನ್ನು ಗಮನಿಸಿದರೆ ತಿಳಿಯುತ್ತದೆ. ವೇದ ಉಪನಿಷತ್ತುಗಳ ಕುರಿತು ಯಾವುದೇ ಜ್ಞಾನವಿಲ್ಲದೆ ಸುಮ್ಮನೆ ಅದನ್ನು ಟೀಕಿಸುವವರಿಗೆ ಈ ಕೃತಿ ಉತ್ತರವಾಗಬಲ್ಲದು. ವೇದ ಉಪನಿಷತ್ತುಗಳೆಂದರೆ ಇಂದಿಗೆ ಉಪಯೋಗವಿಲ್ಲದ ಒಣ ಪಾಂಡಿತ್ಯದ ಕೃತಿ ಎಂದು ಭಾವಿಸುವವರಿಗೆ ಇಲ್ಲಿರುವ ಮಾಹಿತಿಗಳನ್ನು ತಿಳಿದರೆ ಅಚ್ಚರಿಯಾಗುತ್ತದೆ.


ದೃಷ್ಟಾರರಾದ ನಮ್ಮ ಪ್ರಾಚೀನ ಮುನಿಗಳು ಜಪ ತಪಗಳ ಜೊತೆಗೆ ಲೌಕಿಕ ಜೀವನದ ಕುರಿತು ತಿಳಿಸುತ್ತಾರೆ. ಇಂದಿಗೂ ಪ್ರಸ್ತುತವಿರುವ ವಿಷಯಗಳು ವೇದ ಉಪನಿಷತ್ತುಗಳಲ್ಲಿವೆ. ಕೃಷಿ, ಗೋವಿನ ಮಹತ್ವ, ಮಳೆ, ಅಗ್ನಿ, ಅಣೆಕಟ್ಟುಗಳ ಮಹತ್ವ, ಮುಂತಾದವನು ಇಲ್ಲಿ ಹಾಗೆಯೇ ಮನುಷ್ಯ ತನ್ನ ಜೀವನದಲ್ಲಿ ಹೇಗೆ ಬದುಕಬೇಕು, ಅವನ ಕರ್ತವ್ಯಗಳು, ಉತ್ತಮ ವ್ಯಕ್ತಿತ್ವದ ಲಕ್ಷಣಗಳು ಇವೆಲ್ಲವನ್ನು ಈ ಅನುವಾದಗಳಲ್ಲಿ ಗಮನಿಸಬಹುದು.


ಲೇಖಕರು ಈ ಅನುವಾದದ ಮುಂದುವರಿದ ಭಾಗಗಳನ್ನು ಪುಟ್ಟ ಪುಟ್ಟ ಕೃತಿಗಳ ಮೂಲಕ ಮತ್ತಷ್ಟು ವೇದ ಉಪನಿಷತ್ತಿನ ಪರಿಚಯವನ್ನು ಮಾಡಿಕೊಡುವುದು ಅತ್ಯಂತ ಅವಶ್ಯಕ.  ಈ ಕೃತಿಯ ಕುರಿತು ಆಸಕ್ತಿ ಇರುವವರು ಪುಸ್ತಕಕ್ಕಾಗಿ ಲೇಖಕರನ್ನು ನೇರವಾಗಿ ಸಂಪರ್ಕಿಸಬಹುದು. ಲೇಖಕರ ದೂರವಾಣಿ ಸಂಖ್ಯೆ - 9480473568


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top