ಬಳ್ಳಾರಿ: ಮೆದುಳು ಅನಾರೋಗ್ಯದ ಹಿನ್ನೆಲೆಯಲ್ಲಿ ನಿಧನ ಹೊಂದಿದ ಟಿವಿ9 ಕ್ಯಾಮರಮನ್ ಸಂತೋಷ್ ಅವರ ಆತ್ಮಕ್ಕೆ ದೇವರು ಶಾಂತಿ ಕೊಡಲಿ ಮತ್ತು ಅವರ ಕುಟುಂಬಕ್ಕೆ ಸಂತೋಷ್ ನಿಧನದ ದುಃಖವನ್ನು ಭರಿಸುವ ಶಕ್ತಿ ಕೊಡಲಿ ಎಂದು ಹಿರಿಯ ಪತ್ರಕರ್ತ ಎಚ್. ಎಮ್. ಪ್ರಾರ್ಥಿಸಿದರು.
ಅವರು ಇಂದು ನಗರದ ಪತ್ರಿಕ ಭವನದಲ್ಲಿ ಸಂತೋಷ ರವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಪತ್ರಕರ್ತರ ಜೀವನ ಅತ್ಯಂತ ಒತ್ತಡದ ಜೀವನ ಆಗಿರುತ್ತದೆ ಆ ಒತ್ತಡದ ಮಧ್ಯದಲ್ಲಿಯೂ ನಮ್ಮ ಆರೋಗ್ಯ ಮತ್ತು ಕುಟುಂಬದ ಬಗ್ಗೆ ಕೂಡ ಕಾಳಜಿ ವಹಿಸಬೇಕಾಗಿರುತ್ತದೆ, ನಿರ್ಲಕ್ಷ್ಯ ವಹಿಸಿದಲ್ಲಿ ಸಂತೋಷ್ ರೀತಿಯಲ್ಲಿ ನಮ್ಮ ಜೀವನ ಅತಂತ್ರವಾಗಲಿದೆ ಎಂದು ಅವರು ಪತ್ರಕರ್ತರಲ್ಲಿ ಮನವಿ ಮಾಡಿದರು.
ಸಂತೋಷ್ ಒಬ್ಬ ಸ್ನೇಹಜೀವಿ ಯಾರನ್ನೇ ಆಗಲಿ ಅವನು ಬಹಳ ಗೌರವ ಮತ್ತು ವಿನಯತೆಯಿಂದ ವಿನಯತೆಯಿಂದ ನಡೆದುಕೊಳ್ಳುತ್ತಿದ್ದ ಅವನೊಬ್ಬ ಸ್ನೇಹ ಮತ್ತು ಸಂಘ ಜೀವಿಯಾಗಿದ್ದ ಅವನ ಅಕಾಲಿಕ ನಿಧನ ಪತ್ರಿಕಾ ಮಾಧ್ಯಮದಲ್ಲಿ ದುಃಖವನ್ನುಂಟು ಮಾಡಿದೆ, ಅಂತ ಸ್ನೇಹ ಮತ್ತು ಸರಳ ಜೀವಿಗೆ ಇಷ್ಟು ಬೇಗ ಸಾವು ಬರಬಾರದಿತ್ತು ಎಂದು ಹಿರಿಯ ವರದಿಗಾರ ಎನ್ ವೀರಭದ್ರಗೌಡ ಸಂತೋಷ್ ಕುರಿತು ಖೇದ ವ್ಯಕ್ತಪಡಿಸಿದರು.
ಈ ಶ್ರದ್ಧಾಂಜಲಿ ಸಭೆಯಲ್ಲಿ ಹಿರಿಯ ಕಿರಿಯ ಪತ್ರಕರ್ತರು, ಕ್ಯಾಮರಾ ಮೆನ್ ಗಳು ಪತ್ರಕರ್ತರಿದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ