ಹೈದರಾಬಾದ್ ಮತ್ತು ಬೆಂಗಳೂರುಗಳಲ್ಲಿ ಸ್ಯಾಮ್ಸಂಗ್ 'ಸಾಲ್ವ್ ಫಾರ್ ಟುಮಾರೋ'

Upayuktha
0


ಮಂಗಳೂರು: ಸ್ಯಾಮ್ಸಂಗ್ 'ಸಾಲ್ವ್ ಫಾರ್ ಟುಮಾರೋ' ಸೀಸನ್ 4 ದಕ್ಷಿಣ ಭಾರತಕ್ಕೆ ಕಾಲಿಟ್ಟಿದ್ದು, ಯುವಕರಲ್ಲಿ ನಾವೀನ್ಯತೆಗಳ ಅಲೆಯನ್ನು ಹುಟ್ಟುಹಾಕಿದೆ. ಹೈದರಾಬಾದ್‌ನ ಕ್ರಿಯಾತ್ಮಕ ಕ್ಯಾಂಪಸ್‌ಗಳು ಮತ್ತು ಬೆಂಗಳೂರಿನ ವ್ಯಸ್ಥ ತಂತ್ರಜ್ಞಾನ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ತಮ್ಮ ಸಮುದಾಯಗಳಿಗೆ ಉಜ್ವಲ ಭವಿಷ್ಯವನ್ನುರೂಪಿಸಲು ಒಗ್ಗೂಡುತ್ತಿದ್ದಾರೆ.


ಸ್ಯಾಮ್ಸಂಗ್ 'ಸಾಲ್ವ್ ಫಾರ್ ಟುಮಾರೋ 2025' ಎಂಬುದು ಒಂದು ರಾಷ್ಟ್ರವ್ಯಾಪಿ ಸ್ಪರ್ಧೆಯಾಗಿದ್ದು, ತಂತ್ರಜ್ಞಾನದ ಸದ್ಬಳಕೆಯ ಮೂಲಕ ಸಮಾಜದ ಕೆಲವೊಂದು ತುರ್ತಾದ ಸವಾಲುಗಳನ್ನು ಪರಿಹರಿಸಲು ನೆರವಾಗುವ ಆಧುನಿಕ ಪರಿಹಾರಗಳನ್ನು ರೂಪಿಸಲು ವಿದ್ಯಾರ್ಥಿಗಳನ್ನು ಪ್ರೇರೇಪಿಸಲೋಸುಗ ಇದನ್ನು ವಿನ್ಯಾಸಗೊಳಿಸಲಾಗಿದೆ. ಈ ಸ್ಪರ್ಧೆಯಲ್ಲಿ ಸ್ಯಾಮ್ಸಂಗ್ ನಾಯಕರು ಮತು ಐಐಟಿ ದೆಹಲಿ ಅಧ್ಯಾಪಕರು ತಮ್ಮ ಯೋಜನೆಗಳ ಇನ್ಕ್ಯುಬೇಶನ್ ನೆರವಾಗಲು ಅಗ್ರ ನಾಲ್ಕು ವಿಜೇತ ತಂಡಗಳಿಗೆ 1 ಕೋಟಿ ರೂಪಾಯಿಗಳನ್ನು ಒದಗಿಸುತ್ತಾರಂತೆ. 


ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಆರೋಗ್ಯ ಮತ್ತುಆಸ್ಪತ್ರೆ ನಿರ್ವಹಣಾ ವಿದ್ಯಾರ್ಥಿನಿ ಮುಕ್ತಾ ಕೂಡ ತಮ್ಮ ದೃಷ್ಟಿಕೋನವನ್ನು ಬದಲಿಸಿಕೊಂಡಿದ್ದಾರಂತೆ. "ಈ ಅಧಿವೇಶನ ನನಗೆ ಉದ್ಯಮಿಯಂತೆ ಯೋಚಿಸಲು ಕಲಿಸಿತು. ಒಂದು ಸರಳ ಕಲ್ಪನೆ ಇಡೀ ಜಗತ್ತನ್ನೆ ಪರಿವರ್ತಿಸಬಹುದು. ಈಗ ನಾನು ನನ್ನ ಕಲ್ಪನೆಗೆ ಜೀವತುಂಬಲು ನಿರ್ಧರಿಸಿದ್ದೇನೆ" ಎಂದು ಅವರು ಹೇಳಿದ್ದಾರೆ.


ಇಷ್ಟೇ ಅಲ್ಲ, ಹೈದರಾಬಾದ್ನ ಕೆಜಿ ರೆಡ್ಡಿ ಎಂಜಿನಿಯರಿಂಗ್ ಕಾಲೇಜಿನಲ್ಲಿ, ಬಿ.ಟೆಕ್ ಕಂಪ್ಯೂಟರ್ ಸೈನ್ಸ್ಎಂ ಜಿನಿಯರಿಂಗ್ ವಿದ್ಯಾರ್ಥಿಯಾಗಿರುವ ಡಿ. ಗಣೇಶ್ ರೆಡ್ಡಿ, ಈ ಕಾರ್ಯಾಗಾರದಲ್ಲಿ ಭಾಗವಹಿಸಿದ ನಂತರ ತಂತ್ರಜ್ಞಾನ ಸ್ಥಳೀಯ ಸವಾಲುಗಳನ್ನು ಹೇಗೆ ಎದುರಿಸಬಹುದು ಎಂಬುದರ ಸ್ಪಷ್ಟ ತಿಳುವಳಿಕೆಯನ್ನು ಪಡೆದರು. "ವಿದ್ಯಾರ್ಥಿಗಳ ಆಲೋಚನೆಗಳ ಜೊತೆಗೆ ಕುತೂಹಲ ಮತ್ತು ರಚನಾತ್ಮಕ ಶಕ್ತಿಯನ್ನು ಬೆರೆಸಿದರೆ ಅವು ನೈಜ ಜಗತ್ತಿನ ಬದಲಾವಣೆಗೆ ಕಾರಣವಾಗಬಹುದು ಎಂದು ಈ ಅಧಿವೇಶನವು ನನಗೆ ತೋರಿಸಿದೆ" ಎಂದು ಅವರು ಹೇಳುತ್ತಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top