ಉಡುಪಿ: ಕನ್ನಡ ಸಾರಸ್ವತ ಲೋಕದ ಧೀಮಂತರಲ್ಲಿ ಓರ್ವರಾದ ಹಿರಿಯ ಕವಿ ಹೆಚ್ ಎಸ್ ವೆಂಕಟೇಶಮೂರ್ತಿಯವರ ನಿಧನಕ್ಕೆ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಶ್ರೀಯುತರು ತಮ್ಮ ನೂರಾರು ಭಾವಪೂರ್ಣ ಕವನಗಳ ಮೂಲಕ ಕೋಟ್ಯಂತರ ಕನ್ನಡಿಗರ ಮನೆ ಮನಸ್ಸುಗಳಲ್ಲಿ ಸ್ಥಾಯಿಯಾದ ಸ್ಥಾನ ಪಡೆದಿದ್ದಾರೆ. ಕೃಷ್ಣ ಪರಮಾತ್ಮನ ಬಗೆಗೂ ಮನೋಜ್ಞವೂ ಲಾಲಿತ್ಯಪೂರ್ಣವೂ ಆಗಿರುವ ಅವರ ಹಲವು ಕವನಗಳಂತೂ ಕೃಷ್ಣಭಕ್ತರ ಅಪಾರ ಪ್ರಶಂಸೆಗೂ ಪಾತ್ರವಾಗಿರುವುದು ಅವರ ಸಾಹಿತ್ಯ ಪ್ರಗಲ್ಭತೆಗೆ ಮತ್ತು ದೈವನಿಷ್ಠಗೆ ಸಾಕ್ಷಿಯಾಗಿವೆ. ಶ್ರೀ ಮಠ ಮತ್ತು ನಮ್ಮ ಗುರುಗಳಾದ ಶ್ರೀ ವಿಶ್ವೇಶ ತೀರ್ಥರೊಂದಿಗೂ ಅನೇಕ ವರ್ಷಗಳ ಆತ್ಮೀಯ ಬಾಂಧವ್ಯ ಹೊಂದಿದ್ದರು. ಗುರುಗಳ ಪರ್ಯಾಯ ಕಾಲದಲ್ಲಿ ಹಮ್ಮಿಕೊಳ್ಳುತ್ತಿದ್ದ ಕವಿ ಗೋಷ್ಠಿಗಳಲ್ಲೂ ಭಾಗವಹಿಸಿದ್ದನ್ನು ಸ್ಮರಿಸುತ್ತೇವೆ. ನಮ್ಮ ಆರಾಧ್ಯಮೂರ್ತಿಯಾದ ಶ್ರೀಕೃಷ್ಣ ಪರಮಾತ್ಮನು ಅವರಿಗೆ ಸದ್ಗತಿಯನ್ನು ಕರುಣಿಸಲೆಂದು ಪ್ರಾರ್ಥಿಸುತ್ತೇವೆ ಎಂದು ಶ್ರೀಗಳು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ