ಬಿಐಟಿಎಂ ಬಳ್ಳಾರಿಯಲ್ಲಿ ರಾಷ್ಟ್ರೀಯ ತಂತ್ರಜ್ಞಾನ ದಿನಾಚರಣೆ–2025

Upayuktha
0



ಬಳ್ಳಾರಿ:  ಪ್ರತಿಷ್ಠಿತ ಬಳ್ಳಾರಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ -ಮ್ಯಾನೇಜ್ಮೆಂಟ್ , ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್‌ ವಿಭಾಗದ ನೇತೃತ್ವದಲ್ಲಿ 2025 ರ ರಾಷ್ಟ್ರೀಯ ತಂತ್ರಜ್ಞಾನ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು.

ವಿಪ್ರೋ ಎಂಜಿನಿಯರಿಂಗ್‌ ಪ್ರಾಕ್ಟೀಸ್ ಹೆಡ್ ಡಾ. ಬಿ. ಶೈಲೇಂದ್ರ ಕಾರ್ಯಕ್ರಮವನ್ನು ಉದ್ಘಾಟಿಸಿ , ವಿದ್ಯಾರ್ಥಿಗಳನ್ನು ಸಂಶೋಧನೆ , ಉದ್ಯಮ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಮುನ್ನಡೆಸುವಂತೆ ಪ್ರೇರೇಪಿಸಿದರು. ಈ ವರ್ಷದ ಥೀಮ್ :ಯಂತ್ರ - ಯುಗಾಂತರ್ ಫಾರ್ ಅಡ್ವಾನ್ಸಿಂಗ್ ನ್ಯೂ ಟೆಕ್ನಾಲಜಿ , ರಿಸರ್ಚ್- ಅಕ್ಸೆಲರೇಶನ್‌  ಆಧರಿಸಿ ಅವರು ಮಾತನಾಡಿದರು , ಎಐ , ಪೇಟೆಂಟ್ , ಸಂಶೋಧನಾ ಅನುದಾನಗಳ ಮಹತ್ವ , ಎಐ ಮಾದರಿಗಳನ್ನು ರೂಪಿಸುವ ಸಾಮರ್ಥ್ಯವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದು ಸಂದೇಶವನ್ನು ನೀಡಿದ್ದಾರೆ. ಭಾರತೀಯ ಸಂಶೋಧನೆಗಳ ಪರಂಪರೆಯ ಮೇಲೆ ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ಕಟ್ಟಿಕೊಳ್ಳಬೇಕು, ವಿಪ್ರೋ ಸಂಸ್ಥೆಯ ಪರಂಪರೆ , ಎಐ ಆಧಾರಿತ ನೇಮಕಾತಿ ಪ್ರಕ್ರಿಯೆ , ಮತ್ತು ಶಿಕ್ಷಣ- ಸಂಶೋಧನೆಗೆ ನೀಡುತ್ತಿರುವ ಬೆಂಬಲ , ಎಐ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ಸ್ವಂತವಾಗಿ ಮಾದರಿಗಳನ್ನು ರೂಪಿಸಬೇಕು , ಕೇವಲ ತಯಾರಾದ ಮಾದರಿಗಳನ್ನು ಬಳಸಲಾಗಿದೆ  ಎಂದು ಸಲಹೆ ಸೂಚನೆ. ಭಾರತದ ಡಿಜಿಟಲ್ ವಸತಿ ಅಭಿವೃದ್ಧಿ ಮತ್ತು ಬಾಹ್ಯಾಕಾಶ ಸಾಧನೆಗಳನ್ನು , ವಿದ್ಯಾರ್ಥಿಗಳು ಸಂಶೋಧನೆ ಮತ್ತು ತಂತ್ರಜ್ಞಾನದ ಮುಂದಾಳುಗಳಾಗಬೇಕು ಎಂದು ಕರೆ ನೀಡಿದರು. 

ವಿಪ್ರೋನ ಎಐ ಆಧಾರಿತ ನೇಮಕಾತಿ ,ಉದ್ಯೋಗಾವಕಾಶಗಳು , ಮತ್ತು ಉನ್ನತ ಶಿಕ್ಷಣ ಕ್ಷೇತ್ರಕ್ಕೆ ನೀಡುತ್ತಿರುವ ಕೊಡುಗೆಗಳ ಬಗ್ಗೆ ಮಾಹಿತಿ ನೀಡಿದರು. 

ನಿರ್ದೇಶಕ ಪ್ರೊ. ಪೃಥ್ವಿರಾಜ್ ವೈ. ಜೆ. ಅಧ್ಯಕ್ಷೀಯ ಭಾಷಣದಲ್ಲಿ , ಭಾರತವು ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧಿಸಿರುವ ಸಾಧನೆಗಳ ಕುರಿತು. ವಿಶೇಷವಾಗಿ ಭಾರತದ ತ್ರಿಸ್ತರ ರಕ್ಷಣಾ ಪ್ರಾಣಾಳಿ , ಕ್ಷಿಪಣಿ ತಂತ್ರಜ್ಞಾನದಲ್ಲಿ ದೇಶ ಸಾಧಿಸಿರುವ ಪ್ರಗತಿಯತ್ತ ಗಮನ ಸೆಳೆಯುತ್ತಾ, ತಂತ್ರಜ್ಞಾನ ದಿನದ ಮಹತ್ವವನ್ನು ವಿವರಿಸಿದರು. ಭಾರತೀಯ ತಂತ್ರಜ್ಞಾನವು ಜಾಗತಿಕ ಮಟ್ಟದಲ್ಲಿ ಹೇಗೆ ಮುನ್ನಡೆಯುತ್ತಿದೆ ಎಂಬುದರ ಬಗ್ಗೆ ಅವರು ಚರ್ಚಿಸಿದರು. ತೈವಾನ್‌ನಲ್ಲಿ ರೋಬೋಟಿಕ್ಸ್ ಸಹಾಯದಿಂದ ಚಿಪ್ ತಯಾರಿಕೆಗೆ ಬಳಸುವ ತಂತ್ರಜ್ಞಾನವನ್ನು ಉದಾಹರಣೆಯಾಗಿ ನೀಡುತ್ತಾ , ವಿದ್ಯಾರ್ಥಿಗಳ ಅಂತರರಾಷ್ಟಿಯ ಅಧ್ಯಯನವನ್ನು ಅಳವಡಿಸಿ ಕೊಳ್ಳಬೇಕು ಎಂದು ಉಲ್ಲೇಖಿಸಿದರು.

ಉಪಪ್ರಾಚಾರ್ಯ ಡಾ. ಬಿ. ಎಸ್. ಖೇಣದ್ ಅವರು,  ಭಾರತದ ವಿಜ್ಞಾನ ತಂತ್ರಜ್ಞಾನ ಮತ್ತು ಕ್ಷೇತ್ರದ ಯಶಸ್ಸಿನ ಕುರಿತು ಮಾಹಿತಿ. ಐಟಿ , ಆರೋಗ್ಯ ಮತ್ತು ರಕ್ಷಣಾ ಕ್ಷೇತ್ರಗಳಲ್ಲಿ ಭಾರತ ಸಾಧಿಸಿರುವ ಪ್ರಗತಿಯ ಸಾಧನೆಗಳನ್ನು ಸ್ಮರಿಸಿದರು. ವರದಾ ಅಲೇಖ್ಯ ಅವರು ಸ್ವಾಗತಿಸಿದರು. ಡಾ. ಆರ್. ಎನ್. ಕುಲಕರ್ಣಿ ಕಂಪ್ಯೂಟರ್, ಸೈನ್ಸ್ ಮತ್ತು ಇಂಜಿನಿಯರಿಂಗ್‌ ವಿಭಾಗದ ಡೀನ್ ಅವರು ಮುಖ್ಯ ಅತಿಥಿಯನ್ನು ಪರಿಚಯಿಸಿದರು.  ಪ್ರತಿಭಾ ಮಿಶ್ರಾ ವಂದನಾರ್ಪಣೆ ಸಲ್ಲಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter


Post a Comment

0 Comments
Post a Comment (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top