ಪ್ರಯತ್ನ ಎಂಬುವುದು ಮನುಷ್ಯನ ಮೂಲಭೂತ ಸ್ವಭಾವವಾಗಿದೆ. ಮಗು ನಡೆಯಲು ಕೂಡ ಬಿದ್ದು ಎದ್ದು ನಡೆಯಲು ಪ್ರಾರಂಭಿಸುತ್ತದೆ. ತನ್ನ ಕನಸುಗಳನ್ನು ಪೂರೈಸಿಕೊಳ್ಳಲು ಮನುಷ್ಯ ಪ್ರತಿ ಕ್ಷಣವೂ ಯತ್ನಿಸುತ್ತಾನೆ.
ಪ್ರಯತ್ನ ಎಂಬುವುದು ಮನುಷ್ಯನನ್ನು ಕನಸಿನ ದಿಕ್ಕಿನತ್ತ ಕೊಂಡೊಯ್ಯುತ್ತದೆ. ಅದು ಮನುಷ್ಯ. ಉಳಿದೆಲ್ಲ ವಿಚಾರಗಳನ್ನು ಬಿಟ್ಟು ತನ್ನ ದೈಹಿಕ ಶಕ್ತಿ ಮತ್ತು ಮಾನಸಿಕ ಶಕ್ತಿ, ಇಚ್ಛಾ ಶಕ್ತಿ ಎಲ್ಲವನ್ನೂ ಒಂದು ಕಡೆ ಹೂಡಿಕೆ ಮಾಡಿ ತನ್ನ ಕನಸನ್ನು ನನಸು ಮಾಡಲು ಮಾಡಿಕೊಳ್ಳಲು ಹೋರಾಡುತ್ತಾನೆ.
ಪ್ರಯತ್ನ ಇಲ್ಲದೆ ಫಲವಿಲ್ಲ. ಅದಕ್ಕೆ "ಮಂತ್ರಕ್ಕೆ ಮಾವಿನಕಾಯಿ ಉದುರುತ್ತದೆಯೇ?" ಎಂದು ಕೇಳುವುದುಂಟು. "ಹಾಡಿ ಹಾಡಿ ರಾಗ, ಉಗುಳಿ ಉಗುಳಿ ರೋಗ" ಎಂದು ಕೆಲವರು ಒಳ್ಳೆಯ ಅಭ್ಯಾಸ ಮತ್ತು ಕೆಟ್ಟ ಅಭ್ಯಾಸ ಎಂದು ವಿಭಜಿಸುವುದುಂಟು.
ಪ್ರಯತ್ನದಿಂದ ಒಬ್ಬ ಗಾರೆ ಕೆಲಸ ಮಾಡುವವನು ಮುಂದೆ ಮೇಸ್ತ್ರಿಯಾಗಿ ಬದಲಾಗುತ್ತಾನೆ. ಒಬ್ಬ ಮೇಸ್ತ್ರಿ ಮನೆ ಕಟ್ಟುವ ಕಂಟ್ರಾಕ್ಟರ್ ಆಗಿ ಪ್ರಮೋಷನ್ ತಗೋತಾನೆ. ಐದಾರು ಸಾರಿ ಪ್ರಯತ್ನ ಮಾಡಿ ಐಎಎಸ್ ಪಾಸಾದ ಉದಾಹರಣೆಗಳನ್ನು ಕಾಣುತ್ತೇವೆ. ಪ್ರಯತ್ನ ನಮ್ಮನ್ನು ಪರಿಪೂರ್ಣತೆಯ ಕಡೆಗೆ ಒಯ್ಯುತ್ತದೆ. ಅದಕ್ಕೆ practice makes perfect ಎನ್ನುವುದುಂಟು.
ಮಹಾಭಾರತದಲ್ಲಿ ಒಂದು ಘಟನೆ ಬರುತ್ತದೆ. ಅರ್ಜುನನು ಶ್ರೀಕೃಷ್ಣನಿಗೆ ಕೇಳುತ್ತಾನೆ. "ಎಲ್ಲವೂ ಹಣೆ ಬರಹ ದಲ್ಲಿ ಬರೆದಿದ್ದ ಮೇಲೆ ಪ್ರಯತ್ನ ಏಕೆ ಮಾಡಬೇಕು? ಅದಕ್ಕೆ ಶ್ರೀಕೃಷ್ಣನು ಹೇಳುತ್ತಾನೆ- "ಪ್ರಯತ್ನ ಮಾಡಿದರೆ ಮಾತ್ರ ಯಶಸ್ಸು ಎಂದು ಹಣೆಬರಹದಲ್ಲಿ ಬರೆದಿದ್ರೆ ಆಗ ಏನು ಮಾಡ್ತೀಯಾ?" ಇದು ಪ್ರಯತ್ನದ ಮಹತ್ತ್ವವನ್ನು ಎತ್ತಿ ತೋರಿಸುತ್ತದೆ. ಅಸತ್ಯದಿಂದ ಸತ್ಯದ ಕಡೆಗೆ, ಕತ್ತಲೆಯಿಂದ ಬೆಳಕಿನೆಡೆಗೆ ಹೋಗುವಂತೆ, ನಾವು ಪ್ರಯತ್ನದಿಂದ ಪರಿಪೂರ್ಣತೆಯ ಕಡೆಗೆ ಸಾಗೋಣ. ಏನಂತೀರಾ?
- ಗಾಯತ್ರಿ ಸುಂಕದ, ಬದಾಮಿ
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ