ಕನ್ನಡ ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿ ಬರಹಗಾರರಾಗಿರುವ ಜಮಖಂಡಿಯ ಡಾ॥ ವಾದಿರಾಜ ದೇಶಪಾಂಡೆ, ನಮ್ಮ ಕನ್ನಡ ನಾಡಿನಲ್ಲಿ ಗುರುತಿಸಿ ಕೊಂಡಿರುವ ಮಹಾನ್ ಸಾಹಿತಿ. ಕಥೆ, ಕವನ, ಕಾದಂಬರಿ, ಪ್ರವಾಸ ಕಥನ, ಜೀವನ ಚರಿತ್ರೆ, ಧಾರ್ಮಿಕ ಮೊದಲಾದ ಕೃತಿಗಳನ್ನು ರಚಿಸಿ, ಸಾಹಿತ್ಯ ಲೋಕದಲ್ಲಿ ಗುರುತಿಸಿಕೊಂಡಿರುವ ಶ್ರೇಷ್ಠ ಬರಹಗಾರರು. ಸುಮಾರು 101 ಕೃತಿಗಳನ್ನು ಬರೆದು, ಪ್ರಕಟಿಸಿ, ಆಬಾಲವೃದ್ಧರೂ ಓದುವ ಸಾಹಿತ್ಯ ರಚಿಸಿ, ನಾಡಿಗೆ ನೀಡಿದ ಮಹನೀಯರು. ಧಾಮಿ೯ಕ, ಪೌರಾಣಿಕ, ಸಾಮಾಜಿಕ ವಸ್ತುಗಳನ್ನು ಅಳವಡಿಸಿ, ಸಾರಸ್ವತ ಲೋಕಕ್ಕೆ ಉತ್ತಮ ಕೃತಿಗಳನ್ನು ನೀಡಿ, ಪ್ರಸಿದ್ಧಿಯಾಗಿರುವ ಲೇಖಕರು. ಯಾವ ಪ್ರಶಸ್ತಿ, ಪುರಸ್ಕಾರಗಳಿಗೆ ಆಶಿಸದೇ ಸಾಹಿತ್ಯದ ಕೃಷಿಯಲ್ಲಿ ತೊಡಗಿ ಮನೆಮಾತಾಗಿರುವ ಅಪರೂಪದ ಲೇಖಕರು.
ಡಾ॥ವಾದಿರಾಜ ದೇಶಪಾಂಡೆ ಅವರು ಹಲವಾರು ಕೃತಿಗಳನ್ನು ರಚಿಸಿ ನಾಡಿಗೆ ನೀಡಿದ್ದಾರೆ. ಪ್ರೇಮ ಸಂಗಮ ಕವನ ಸಂಕಲನ, ಮುಕ್ತ ಎಂಬ ಕಥಾ ಸಂಕಲನ, ಮೃಣಾಲಿನಿ, ಮುಳುಗಡೆಯ ಬದುಕು, ಕಾದಂಬರಿಗಳನ್ನು ರಚಿಸಿ ಓದುಗರಿಗೆ ನೀಡಿ ಪ್ರಖ್ಯಾತರಾದ ಲೇಖಕರು. ಅನೇಕ ಪೌರಾಣಿಕದಲ್ಲಿನ ಕೃತಿಗಳಾದ, ಮಹಾಭಾರತ ಅನ್ವೇಷಣಂ, ಮೂಲರಾಮಾಯಣ, ಮುರಲಿಗೀತೆ, ಶ್ರೀ ಹರಿದಾಸರ ಚರಿತ್ರೆ, ಮಾಸ ಮಹಾತ್ಮೆಗಳು, ಶ್ರೀಮಂಗಳಕರ, ಮತ್ತು ಮಹಾ ಭಾಗವತ ಕಥಾ, ಹರಿಕಥಾಮೃತಸಾರ, ಮುಂತಾದ ಆಧ್ಯಾತ್ಮಿಕದ ಕೃತಿಗಳು, ಮಹಾಯಾತ್ರೆ ಎಂಬ ಪ್ರವಾಸ ಕಥನ, ಅನೇಕ ಓದುಗರು ಸಹ ಮೆಚ್ಚಿ, ಪ್ರಸಿದ್ದರಾದ ಲೇಖಕರು.
ವಿಶೇಷವೇನೆಂದರೇ ಇವರ ಒಂದು ಪ್ರವಾಸ ಕಥನವನ್ನು ಅಧ್ಯಯನ ಮಾಡಿ ಶ್ರೀಮತಿ ಅಕ್ಷತಾ ಶ ದೊಡ್ಡಮನಿ ಅವರು ಕನಾ೯ಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಚಿನ್ನದ ಪದಕ ಪಡೆದಿರುವರು. ಅನೇಕ ಸಾಹಿತಿ ಮಿತ್ರರನ್ನು ಸಂಪಾದಿಸಿ, ಸಾಹಿತ್ಯ ದಿಗ್ಗಜರ ಒಡನಾಟ ಪಡೆದು, ಅನೇಕ ಚಲನಚಿತ್ರ, ಧಾರಾವಾಹಿಗಳಿಗೆ ಸಹ ನಿದೇ೯ಶಕರಾಗಿ ಕೆಲಸ ಮಾಡಿದ ಅನುಭವವಿದೆ. ಅನೇಕ ಸಂಘ ಸಂಸ್ಥೆಗಳ ಸದಸ್ಯರಾಗಿ, ಸಾಮಾಜಿಕ ಸೇವೆ ಮಾಡಿ, ಕನ್ನಡ ಸಾಹಿತ್ಯಾಭಿಮಾನಿಗಳ ಪ್ರೀತಿಯನ್ನು ಸಹ ಸಂಪಾದಿಸಿದ ಕೀತಿ೯ ಇವರಿಗೆ ಸಲ್ಲುತ್ತದೆ.
ಡಾ॥ ವಾದಿರಾಜ ದೇಶಪಾಂಡೆ ಅವರಿಗೆ ಪ್ರಶಸ್ತಿಗಳು ಅರಸಿಕೊಂಡು ಬಂದಿವೆ. ವಿಜಯಪುರದ ಸಾಹಿತ್ಯ ಸಿಂಧು ಪ್ರಶಸ್ತಿ, ಸತ್ತಿ ಗ್ರಾಮದ ಪ್ರಾಣಕೂರ್ಮ ಪ್ರಶಸ್ತಿ, ಬಾಗಲಕೋಟೆ ಜಿಲ್ಲೆಯಲ್ಲಿ ನಡೆದ ಅನೇಕ ಸಾಂಸ್ಕೃತಿಕ, ಸಾಹಿತ್ಯ ಕಾಯ೯ಕ್ರಮದಲ್ಲಿ ರಾಜ್ಯೋತ್ಸವ ಪ್ರಶಸ್ತಿಗೆ ಪುರಸ್ಕೃತರಾದ ಮಹನೀಯರು. ಮಂತ್ರಾಲಯದ ರಾಘವೇಂದ್ರ ಮಠದ ಶ್ರೀ ಸುಜಯಶ್ರೀ ಪ್ರಶಸ್ತಿ, ಶ್ರೀ ಸುಶಮೀಂದ್ರ ಪುರಸ್ಕಾರ ಲಭಿಸಿವೆ. ಎಂ ಆರ್ ಎನ್ ಸಮಾಜ ಸೇವಾರತ್ನ ಪ್ರಶಸ್ತಿ, ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ "ಗೌರವ ಡಾಕ್ಟರೇಟ್" ನೀಡಿ ಸನ್ಮಾನಿಸಿದೆ. ಗವಿಮಠದ ಪ್ರತಿಷ್ಠಾನದ ವತಿಯಿಂದ ಸಾಧನಾಶ್ರೀ ಪ್ರಶಸ್ತಿ, ಕನಾ೯ಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ನಿಗಮ ಮಂಡಳಿಯಿಂದ ಕನಾ೯ಟಕ ಸರಕಾರದಿಂದ "ವಿಪ್ರಶ್ರೀ" ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಅನೇಕ ರಾಜಕೀಯ ಧುರೀಣರು, ಇವರನ್ನು ಗುರುತಿಸಿ ಪ್ರೋತ್ಸಾಹವನ್ನು ನೀಡಿ, ಗುರುತಿಸಿಕೊಂಡಿರುವ ಲೇಖಕರು. ಆ ರಾಜಕೀಯ ವ್ಯಕ್ತಿಗಳನ್ನು ಸದಾ ಸ್ಮರಿಸುವರು.
ಭಾವುರಾವ ಮತ್ತು ವತ್ಸಲಾಬಾಯಿ ಪುತ್ರರಾಗಿರುವ ವಾದಿರಾಜ ದೇಶಪಾಂಡೆ ಅವರು ಜಮಖಂಡಿಯಲ್ಲಿ ತಾ॥17-9-1966 ರಂದು ಜನಿಸಿದರು. ವಾಣಿಜ್ಯ ಪದವಿ ಪಡೆದು ಸಾಹಿತ್ಯದ ಕೃತಿಗಳು ರಚಿಸಿ, ನಾಡಿಗೆ ನೀಡಿದ ಲೇಖಕರು. ಅನೇಕ ಸಂಘ ಸಂಸ್ಥೆಗಳ ಸದಸ್ಯರಾಗಿ, ಬಹು ಕ್ರಿಯಾಶೀಲರಾಗಿ, ಹಲವಾರು ಸಾಹಿತ್ಯದ ಕಾರ್ಯಕ್ರಮಗಳನ್ನು ಇವರು ಯಶಸ್ವಿಗೊಳಿಸಿದ್ದಾರೆ. ಹರಿದಾಸ ಜೀವನ ಚರಿತ್ರೆಯ 14 ಕೃತಿಗಳು, 10 ಕಥಾ ಸಂಕಲನಗಳು, 3 ಕವನ ಸಂಕಲನಗಳು, 6 ಕಾದಂಬರಿಗಳು, 5 ಲೇಖನಗಳ ಸಂಗ್ರಹ, 6 ಸ್ತೋತ್ರ ಸಂಗ್ರಹ, 32 ಆಧ್ಯಾತ್ಮ ಕೃತಿಗಳು, ರಚಿಸಿ ನಮ್ಮ ನಾಡಿಗೆ ನೀಡಿದ ಮಹಾನುಭಾವರು.
ಸಾಹಿತ್ಯ ಕ್ಷೇತ್ರದಲ್ಲಿ ಅನೇಕ ಕೃಷಿ ಮಾಡಿ, ಜನಪ್ರಿಯ ಲೇಖಕರಾಗಿರುವ ಡಾ॥ವಾದಿರಾಜ ದೇಶಪಾಂಡೆ ಅವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಲಭಿಸಿ ಸಾರಸ್ವತ ಲೋಕಕ್ಕೆ ಉತ್ಕೃಷ್ಟ ಕೃತಿಗಳನ್ನು ಬರೆಯಲು ಭಗವಂತ ಶಕ್ತಿ ನೀಡಲಿ ಎಂದು ಹಾರೈಸುವೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ