• 10000 ದೊಳಗೆ 21 ರ್ಯಾಂಕ್ ಗಳನ್ನು ಪಡೆದುಕೊಂಡ ವಿವೇಕಾನಂದ ಪದವಿಪೂರ್ವ ಕಾಲೇಜು
• ಚೇತನ್ ಎಸ್. ಎನ್ ಗೆ ಅಗ್ರಿಕಲ್ಚರ್ಬಿಎಸ್ಸಿಯಲ್ಲಿ 1264ನೇ ರ್ಯಾಂಕ್
• ಆಶಿಶ್ ಎಸ್.ಜಿ ಗೆ ಇಂಜಿನಿಯರಿಂಗ್ ನಲ್ಲಿ 1395 ನೇ ರ್ಯಾಂಕ್
ಪುತ್ತೂರು: ವೃತ್ತಿಪರ ಕೋರ್ಸ್ ಗಳಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಕೆ-ಸಿಇಟಿ 2025 ರಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಸಹನ್ ಕೆ. ಎಲ್ (ಪುತ್ತೂರು -ಸುಳ್ಯಪದವಿನ ಲಕ್ಷ್ಮಣ್ ಕೆ ಹಾಗೂ ನಿರ್ಮಲಾ ಕೆ.ಎ ದಂಪತಿಗಳ ಪುತ್ರ) ಇಂಜಿನಿಯರಿಂಗ್ ನಲ್ಲಿ 542ನೇ ರ್ಯಾಂಕ್ ಗಳಿಸುವ ಮೂಲಕ ಪುತ್ತೂರು ತಾಲೂಕಿಗೆ ಪ್ರಥಮ ಸ್ಥಾನಿಯಾಗಿರುತ್ತಾರೆ. ಇಂಜಿನಿಯರಿಂಗ್ ವಿಭಾಗದಲ್ಲಿ ಆಶಿಶ್ ಎಸ್.ಜಿ (ಬೆಳ್ತಂಗಡಿ ತಾಲೂಕಿನ ಕೆ. ಶ್ಯಾಮರಾಜ ಶರ್ಮ ಹಾಗೂ ಗಂಗಾವೇಣಿ ದಂಪತಿಗಳ ಪುತ್ರ.)ನಲ್ಲಿ 1395 ನೇ ರ್ಯಾಂಕ್, ಅನಘಾ ಡಿ ಶೆಟ್ಟಿ (ಪುತ್ತೂರು ತಾಲೂಕಿನ ದಿನೇಶ್ ಶೆಟ್ಟಿ ಹಾಗೂ ಸವಿತಾ ಡಿ. ಶೆಟ್ಟಿ ದಂಪತಿಗಳ ಪುತ್ರಿ) 2047ನೇ ರ್ಯಾಂಕ್, ಕೀರ್ತಿವರ್ಧನ್ಎಂ (ಪುತ್ತೂರುತಾಲೂಕು, ಪಡ್ನೂರು ಗ್ರಾಮದ ಲಕ್ಷ್ಮಿವೆಂಕಟಕೃಷ್ಣಭಟ್ ಹಾಗೂ ಹೇಮರಶ್ಮಿ ದಂಪತಿಗಳ ಪುತ್ರ) 2481ನೇ ರ್ಯಾಂಕ್, ತೇಜಚಿನ್ಮಯ ಹೊಳ್ಳ (ಪುತ್ತೂರಿನ ಎಸ್ ಹರೀಶ್ ಹೊಳ್ಳ ಹಾಗೂ ಸುಚಿತ್ರಾ ಎನ್ ದಂಪತಿಗಳ ಪುತ್ರ.) 3263ನೇ ರ್ಯಾಂಕ್, ಸ್ಮೃತಿಮಾಲಾ (ಪೆರಡಾಲದ ಕೇಶವ ಭಟ್ ಹಾಗೂ ಪರಮೇಶ್ವರಿ ಎ ದಂಪತಿಗಳ ಪುತ್ರಿ) 3282 ನೇ ರ್ಯಾಂಕ್, ಅನನ್ಯ ಪಿ ಎಸ್ (ಬೊಳ್ವಾರಿನ ಡಾ. ಸುರೇಶ್ ಕುಮಾರ್ ಪಿ. ಆರ್ ಹಾಗೂ ಅಶ್ವಿನಿ ಜಿ. ಎಸ್ ದಂಪತಿಗಳ ಪುತ್ರಿ) 6650ನೇ ರಾಂಕ್, ಹರ್ಷಿತ (ಬಂಟ್ವಾಳ ತಾಲೂಕಿನ ಪುರಂದರ ಪೂಜಾರಿ ಹಾಗೂ ಮಾಲತಿ ದಂಪತಿಗಳ ಪುತ್ರಿ) 7959ನೇ ರ್ಯಾಂಕ್, ಹೃತಿಕ್ (ಬಂಟ್ವಾಳ ತಾಲೂಕಿನ ಸಂತೋಷ್ ಕುಮಾರ್ ಹಾಗೂ ವಸಂತಿ ದಂಪತಿಗಳ ಪುತ್ರ) 8055ನೇ ರಾಂಕ್, ಅನುದೀಪ್ ಪಿ (ಪುತ್ತೂರು ತಾಲೂಕು, ನರಿಮೊಗರಿನ ನಾರಾಯಣ ಬನ್ನಿಂತಾಯ ಪಿ ಹಾಗೂವಿನುತಾ ಪಿ.ಎನ್ ದಂಪತಿಗಳ ಪುತ್ರ) 8163ನೇ ರ್ಯಾಂಕ್ , ಪ್ರಥಮ್ ಕೆ (ಕಾಸರಗೋಡು ನೆಟ್ಟಣಿಗೆಯ ರತ್ನಾಕರ ಕೆ ಹಾಗೂ ನಿಶಾಪ್ರಭಾ ದಂಪತಿಗಳ ಪುತ್ರ) 9663ನೇ ರಾಂಕ್ ಸಿಂಚನ್ ವೈ ಆರ್ (ಕಡಬ ತಾಲೂಕಿನ ರಾಮಚಂದ್ರ ಹಾಗೂ ವಿಜಯ ದಂಪತಿಗಳ ಪುತ್ರ) 9766ನೇ ರ್ಯಾಂಕ್ ಪಡೆದುಕೊಂಡಿರುತ್ತಾರೆ.
ಚೇತನ್ ಎಸ್. ಎನ್ (ಮೈಸೂರಿನ ನಾಗೇಂದ್ರ ಎಸ್.ಎ ಜ್ಯೋತಿ ಲಕ್ಷ್ಮಿ ದಂಪತಿಗಳ ಪುತ್ರ)ಅಗ್ರಿಕಲ್ಚರ್ ಬಿಎಸ್ಸಿಯಲ್ಲಿ 1264ನೇ ರ್ಯಾಂಕ್, ನ್ಯಾಚುರೋಪತಿ ಮತ್ತು ಯೋಗ ವಿಭಾಗದಲ್ಲಿ (BNYS) 2417,ಇಂಜಿನಿಯರಿಂಗ್ ನಲ್ಲಿ 4335ನೇ ರ್ಯಾಂಕ್, ವೆಟರ್ನರಿಯಲ್ಲಿ 3444ನೇ ರ್ಯಾಂಕ್, ಬಿ.ಫಾರ್ಮಾ ಹಾಗೂ ಫಾರ್ಮಾ ಡಿಯಲ್ಲಿ 4780 ನೇ ರ್ಯಾಂಕ್ ಪಡೆದಿರುತ್ತಾರೆ. ಇಂಚರಾ. ಬಿ (ಬಂಟ್ವಾಳ ತಾಲೂಕಿನ ಜಗದೀಶ ಬಿ ಹಾಗೂ ಪ್ರಜ್ಞಾದೇವಿ ಎಸ್ ದಂಪತಿಗಳ ಪುತ್ರಿ)ಅಗ್ರಿಕಲ್ಚರ್ ಬಿಎಸ್ಸಿಯಲ್ಲಿ 4219ನೇ ರಾಂಕ್, ಇಂಜಿನಿಯರಿಂಗ್ ನಲ್ಲಿ 5689ನೇ ರ್ಯಾಂಕ್, ನ್ಯಾಚುರೋಪತಿ ಮತ್ತು ಯೋಗ ವಿಭಾಗದಲ್ಲಿ (BNYS) 4342ನೇ ರ್ಯಾಂಕ್, ವೆಟರ್ನರಿಯಲ್ಲಿ 6343ನೇ ರ್ಯಾಂಕ್, ಯಶ್ವಿತಾಕುಲಾಲ್(ಬಂಟ್ವಾಳ ತಾಲೂಕಿನ ದಿನೇಶ್ ಕೆ ಹಾಗೂ ಸುಮತಿ ದಂಪತಿಗಳ ಪುತ್ರಿ) ಅಗ್ರಿಕಲ್ಚರ್ ಬಿಎಸ್ಸಿಯಲ್ಲಿ 3768, ನ್ಯಾಚುರೋಪತಿ ಮತ್ತು ಯೋಗ ವಿಭಾಗದಲ್ಲಿ 4342, ವೆಟರ್ನರಿಯಲ್ಲಿ 6343, ಇಂಜಿನಿಯರಿಂಗ್ ನಲ್ಲಿ 7796ನೇ ರಾಂಕ್,ಅಭಿಷೇಕ್ ಡಿ ಭಟ್ (ಕುಮಟಾದ ದತ್ತಾತ್ರೇಯ ನಾರಾಯಣ ಭಟ್ ಹಾಗೂ ಸಾವಿತ್ರಿ ಡಿ ಭಟ್ ದಂಪತಿಗಳ ಪುತ್ರ) ಅಗ್ರಿಕಲ್ಚರ್ ಬಿಎಸ್ಸಿಯಲ್ಲಿ 5464, ಇಂಜಿನಿಯರಿಂಗ್ ನಲ್ಲಿ 6507ನೇ ರ್ಯಾಂಕ್, ತನ್ಮಯ್ ಕೃಷ್ಣ ಜಿ.ಎಸ್ (ನೇರಳಕಟ್ಟೆಯ ಗೋಪಾಲಕೃಷ್ಣ ಎನ್ಹಾಗೂ ಸ್ವಪ್ನಾ ಎನ್ದಂಪತಿಗಳ ಪುತ್ರ.) ನರ್ಸಿಂಗ್ ನಲ್ಲಿ 5302, ವೆಟರ್ನರಿಯಲ್ಲಿ 5277, ಬಿ.ಫಾರ್ಮಾ ಹಾಗೂ ಫಾರ್ಮಾ ಡಿಯಲ್ಲಿ 7172ನೇ ರ್ಯಾಂಕ್, ಸುಹಾಸ್ ಟಿ (ದಾವಣಗೆರೆಯ ತಿಪ್ಪೆಸ್ವಾಮಿ ಹಾಗೂ ರಶ್ಮಿ ಬಿ ವಿ ದಂಪತಿಗಳ ಪುತ್ರ) ಅಗ್ರಿಕಲ್ಚರ್ ಬಿಎಸ್ಸಿಯಲ್ಲಿ 9053, ನ್ಯಾಚುರೋಪತಿ ಮತ್ತು ಯೋಗ ವಿಭಾಗದಲ್ಲಿ 9538ನೇ ರ್ಯಾಂಕ್, ಹಿತೈಷಿನಿ ಸಿ.ಎನ್ (ಮೈಸೂರಿನ ನಾರಾಯಣ ಜೆ ಹಾಗೂ ರೇಣುಕಾ ದಂಪತಿ ಪುತ್ರಿ) ವೆಟರ್ನರಿಯಲ್ಲಿ 8121ನೇ ರ್ಯಾಂಕ್, ಸೃಷ್ಟಿ ( ವಿಟ್ಲದ ಗೀತಾಪ್ರಕಾಶ್ ಹಾಗೂ ಗಾಯತ್ರಿ ಪ್ರಕಾಶ್ ದಂಪತಿಗಳ ಪುತ್ರಿ) ಅಗ್ರಿಕಲ್ಚರ್ ಬಿಎಸ್ಸಿಯಲ್ಲಿ 8134, ಆತ್ಮಿ ಕೆ (ಕೋಡಿಂಬಾಡಿಯ ಶೀಧರ ಪೂಜಾರಿ ಹಾಗೂ ಶ್ವೇತಾ ದಂಪತಿಗಳ ಪುತ್ರಿ) ಅಗ್ರಿಕಲ್ಚರ್ ಬಿಎಸ್ಸಿಯಲ್ಲಿ 8911ನೇ ರ್ಯಾಂಕ್ ಗಳಿಸಿರುತ್ತಾರೆ.
10000ದೊಳಗೆ ಸುಮಾರು 21 ರ್ಯಾಂಕ್ ಗಳನ್ನು ವಿದ್ಯಾರ್ಥಿಗಳು ಪಡೆದುಕೊಂಡು ಕಾಲೇಜಿಗೆ ಕೀರ್ತಿ ತಂದಿರುತ್ತಾರೆ. ಇವರನ್ನು ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪಪ್ರಾಂಶುಪಾಲರು, ಉಪನ್ಯಾಸಕ, ಉಪನ್ಯಾಸಕೇತರ ವೃಂದದವರು ಅಭಿನಂದಿಸಿರುತ್ತಾರೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ