ಹಲೋ ಹೇಗಿದ್ದೀರಾ?
ಬದುಕೆಂಬುದು ಒಂದು ಪ್ರವಾಸ. ಇಲ್ಲಿ ನಮಗೆ ಗೊತ್ತಿಲ್ಲದಂತೆ ಎಷ್ಟೊಂದು ಆಯ್ಕೆಗಳು, ಎಷ್ಟೊಂದು ನಿರ್ಧಾರಗಳು ನಮ್ಮ ಪಾಲಿಗೆ ಸವಾಲಾಗಿ ಬಂದಿರುತ್ತವೆ. ಆದರೆ ನಮ್ಮ ಜೀವನ ಗುರಿ ಮುಟ್ಟಲು ಸರಿಯಾದ ದಿಕ್ಕಿನ ಕಡೆ ಪಯಣ ಅತ್ಯಗತ್ಯ. ಇಲ್ಲಾಂದ್ರೆ ಬದುಕು ಯೂಟರ್ನ್ ಹೊಡೆದು ಬಿಡುತ್ತದೆ.
ಜೀವನದಲ್ಲಿ ನಮಗಾಗಿಯೇ ಕೆಲವೊಂದು ಚಿಕ್ಕ ಮತ್ತು ದೀರ್ಘ ಪ್ರವಾಸಗಳು ಇರುತ್ತವೆ.ಆದರೆ ಗುರಿ ಮುಟ್ಟಲು ಸರಿಯಾದ ದಿಕ್ಕಿನ ಕಡೆಗೆ ಸರಿಯಾದ ಹೆಜ್ಜೆ ಇಡುವುದು ತುಂಬಾ ಅವಶ್ಯಕ. ನಾವು ನಮ್ಮ. ಗುರಿಯ ಕಡೆಗೆ ಮುನ್ನುಗ್ಗಲು ನಮ್ಮ ಪಯಣ ಸರಿಯಾದ ದಿಕ್ಕಿನ ಕಡೆಗೆ ಇರುವುದನ್ನು ಖಚಿತ ಪಡಿಸಿ ಕೊಳ್ಳಬೇಕು. ಅದಕ್ಕೆ ಹೇಳುವುದು "Well begun is half done" ಎಂದು ಹೇಳಬಹುದು.
ನಮ್ಮ ಗುರಿ ಜ್ಞಾನ ಸಂಪಾದನೆ ಆಗಿದ್ದರೆ ನಾವೆಷ್ಟು ಅದರ ಕಡೆಗೆ ಗಮನ ಕೊಡಬೇಕು ಎಂದು ನೋಡ ಬೇಕಾಗುತ್ತದೆ. ನಮ್ಮ ಗುರಿ ಸರಿಯಾದ ಉದ್ಯೋಗ ಆಗಿದ್ದರೆ, ಅದರ ಕಡೆಗೆ ನಾವೆಷ್ಟು ಮುನ್ನುಗ್ಗುತ್ತಿದ್ದೇವೆ ಎಂದು ನೋಡಬೇಕಾಗುತ್ತದೆ. ಇಲ್ಲಾಂದ್ರೆ ನಮ್ಮ ಪರಿಸ್ಥಿತಿ ಕೊಂಕಣ ಸುತ್ತಿ ಮೈಲಾರಕ್ಕೆ ಬಂದ ಹಾಗೆ ಆಗುತ್ತದೆ.
ನಾವು ಯಾವುದೇ ದಿಕ್ಕಿನಲ್ಲಿ ಯಶಸ್ಸು ಸಾಧಿಸಬೇಕೆಂದು ಹೊರಟರೆ, ನಮ್ಮ ಹೆಜ್ಜೆ ಆ ಕಡೆಗೆ ಇಡುವುದು ಅವಶ್ಯಕ. ನಮ್ಮ ನಮ್ಮ ಚಿಕ್ಕ ಚಿಕ್ಕ ಹೆಜ್ಜೆಗಳು ಕೂಡ ನಮ್ಮ ಗಮ್ಯ ಸ್ಥಾನವನ್ನು ನಮ್ಮ ಸಮೀಪಕ್ಕೆ ತರುತ್ತವೆ.
ಮೌಂಟ್ ಎವರೆಸ್ಟ್ ಏರಬೇಕೆಂದರೂ, ದಿನಾ ಚಿಕ್ಕ ಗುಡ್ಡ ಹತ್ತಿ ಆ ದಿಕ್ಕಿನಲ್ಲಿ ಹೆಜ್ಜೆ ಹಾಕಿದರೆ ಅದು ಕೂಡ ಚಿಕ್ಕದಾಗಿ. ಕಾಣುತ್ತದೆ. ಇಲ್ಲಾಂದ್ರೆ ಮನಸ್ಸಿನಲ್ಲಿ ಮಂಡಿಗೆ ಮಾಡಿದರೆ ಗೋಧಿ ಲೆಕ್ಕ ಯಾರು ಕೊಡುವರು? ಅಂದ ಹಾಗೆ ಆಗುತ್ತದೆ.
ನಮ್ಮ ಬದುಕಿನಲ್ಲಿ ಎರಡು ಕಡೆ ಸರಿಯಾದ ಹೆಜ್ಜೆ ಹಾಕಬೇಕಾಗುತ್ತದೆ. ಒಂದು ರಕ್ಷಣಾತ್ಮಕ ಮತ್ತು ಇನ್ನೊಂದು ಆಕ್ರಮಣ ರೀತಿಯಲ್ಲಿ. ನಮ್ಮ ಜೀವನದಲ್ಲಿ ಸರಿಯಾದವುಗಳನ್ನು ಆರಿಸಿಕೊಂಡು ಅದರ ಕಡೆಗೆ ಸರಿಯಾದ ದಿಕ್ಕಿನಲ್ಲಿ ಹೆಜ್ಜೆ ಹಾಕಬೇಕು. ಆಕ್ರಮಣ ರೀತಿಯೆಂದರೆ, ನಮ್ಮ ಕಾಲು ಎಳೆಯುವ, ನಮ್ಮ ಹಿಂದೆ ಸಂಚು ಮಾಡುವ, ಹಾದಿ ತಪ್ಪಿಸುವ ಜನರ ಕೈಯಿಂದ ಪಾರಾಗಿ ನಮ್ಮ ಗಮ್ಯ ಸ್ಥಾನದ ಕಡೆಗೆ ಫೋಕಸ್ ಮಾಡಿದರೆ ನಮಗೆ ಗೊತ್ತಿಲ್ಲದಂತೆ ನಾವು ತಲುಪಿರುತ್ತೇವೆ. ಆದರೆ ಅದಕ್ಕೆ ಮೇಲಿಂದ ಮೇಲೆ ನಮ್ಮ ಹೆಜ್ಜೆಗಳನ್ನು ಗಮನಿಸುತ್ತಿರಬೇಕು.
ಹೌದಲ್ವಾ? ಏನಂತೀರಾ
- ಗಾಯತ್ರಿ ಸುಂಕದ, ಬದಾಮಿ
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ