ಅರಿವಿಗೆ ತಕ್ಕಂತೆ ದಕ್ಕುವ ಗಾಂಧೀ: ಡಾ.ಎಚ್.ಎಸ್.ಸುರೇಶ್

Upayuktha
0



ತುಮಕೂರು: ಅವರವರ ಅರಿವಿಗೆ ತಕ್ಕಂತೆ ಗಾಂಧೀ ದಕ್ಕುತ್ತಾರೆ. ಗಾಂಧೀಜಿಯವರನ್ನು ಅರ್ಥಮಾಡಿ ಕೊಳ್ಳಲು ಸಾಧ್ಯವಾದಷ್ಟೂ ಓದಿ. ಯಾವುದೇ ಕಾರಣಕ್ಕೂ ಅಪಾರ್ಥ ಮಾಡಿಕೊಳ್ಳಬೇಡಿ ಎಂದು ಕರ್ನಾಟಕ ಸರ್ವೋದಯ ಮಂಡಲ ಅಧ್ಯಕ್ಷ ಡಾ. ಹೆಚ್.ಎಸ್. ಸುರೇಶ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.


ಅವರು ತುಮಕೂರು ವಿಶ್ವವಿದ್ಯಾಲಯದಲ್ಲಿ ನಡೆದ ಗಾಂಧೀ ಭಾರತ ಕಾರ್ಯಕ್ರಮದ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಜಗತ್ತೇ ಶಾಂತಿ ಸ್ಥಾಪನೆಯ ಕಾರ್ಯದಲ್ಲಿ ಗಾಂಧೀ ತತ್ವಗಳ ಔಚಿತ್ಯವನ್ನು ಒಪ್ಪುತ್ತಿರುವ ಈ ದಿನಗಳಲ್ಲಿ ನಮ್ಮ ದೇಶದ ಯುವಜನರನ್ನು ಗಾಂಧೀ ವಿಚಾರಗಳಿಂದ ವಿಮುಖಗೊಳಿಸುವ ಪ್ರಯತ್ನಗಳ ಬಗ್ಗೆ ಎಚ್ಚರಿರುವಂತೆ ವಿದ್ಯಾರ್ಥಿಗಳಲ್ಲಿ ಮನವಿ ಮಾಡಿದರು.


ವಿಶ್ವ ವಿದ್ಯಾನಿಲಯದ ಕಲಾ ಕಾಲೇಜಿನ ಪ್ರಾಂಶುಪಾಲೆ ಡಾ.ಜಿ.ದಾಕ್ಷಾಯಿಣಿ ಮಹಿಳೆಯರ ಶೋಷಣೆ ಹಾಗೂ ಸಬಲೀಕರಣದ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.


ಪರೀಕ್ಷಾಂಗ ವಿಭಾಗದ ಕುಲ ಸಚಿವ ಪ್ರೊ. ಕೆ. ಪ್ರಸನ್ನಕುಮಾರ್ ಗಾಂಧೀಜಿಯವರು ನಮ್ಮ ಪರಂಪರಾನುಗತ ಸಾಮಾಜಿಕ ಮೌಲ್ಯಗಳನ್ನು ತಮ್ಮ ನಡೆ ನುಡಿಗಳ ಮೂಲಕ ಕಾರ್ಯಾನ್ವಿತಗೊಳಿಸಿ ತಮ್ಮ ಸರಳತೆಯಿಂದಲೇ ಶ್ರೇಷ್ಠತೆ ಪಡೆದರು ಎಂದು ಅಭಿಪ್ರಾಯಪಟ್ಟರು.


ಗಾಂಧೀ ಭಾರತ ಕಾರ್ಯಕ್ರಮ ಸಮಿತಿಯ ಅಧ್ಯಕ್ಷ ಪ್ರೊ. ಟಿ.ಎನ್. ಹರಿಪ್ರಸಾದ್ ಕಾರ್ಯಕ್ರಮದ ಮಹತ್ವವನ್ನು ಕುರಿತು ಮಾತನಾಡಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top