ಮಂಗಳೂರು: ಧಾರವಾಡದ ರಂಗಾಯಣದಲ್ಲಿ ಜುಲೈ 27ರಂದು ಆಯೋಜಿಸಿರುವ ಅಕ್ಷರೋತ್ಸವ ಸಮಾರಂಭದಲ್ಲಿ ಮಂಗಳೂರಿನ ಕಣಚೂರು ಹಾಗೂ ಮಂಗಳಾ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಆಯುರ್ವೇದ ಶಸ್ತ್ರ ಚಿಕಿತ್ಸಕ ಮತ್ತು ಮೂಲವ್ಯಾಧಿ ಚರ್ಮರೋಗಗಳ ವಿಶೇಷ ಚಿಕಿತ್ಸಕ ಡಾ ಸುರೇಶ ನೆಗಳಗುಳಿ ಇವರ ವೈದ್ಯಕೀಯ ಸೇವೆಯನ್ನು ಗುರುತಿಸಿ ಕುಮಾರವ್ಯಾಸ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಿ ಪುರಸ್ಕರಿಸುವುದಾಗಿ ಅಕ್ಷರದೀಪ ಫೌಂಡೇಶನ್ ಅಕ್ಷರದೀಪ ಪ್ರಕಾಶನ ಗದಗ ಇದರ ಸಂಯೋಜಕ ಪ್ರವೀಣ ಕುಮಾರ ಕನ್ಯಾಲ ಇವರು ತಿಳಿಸಿದ್ದಾರೆ.
ಪುರಸ್ಕೃತರು ನಲುವತ್ತು ವರ್ಷಗಳ ಚಿಕಿತ್ಸಾ ಅನುಭವ ಹಾಗೂ ಮೂವತ್ತೈದು ವರ್ಷಗಳ ಶಿಕ್ಷಕ ಹಾಗೂ ನಿರ್ವಹಣಾ ಅನುಭವವನ್ನು ಹೊಂದಿದ್ದು, ಪ್ರಾಚಾರ್ಯರಾಗಿ ಕೊಪ್ಪ, ಆಳ್ವಾಸ್ ಮೂಡಬಿದ್ರಿಗಳಲ್ಲೂ ಸ್ನಾತಕೋತ್ತರ ವಿಭಾಗ ಮುಖ್ಯಸ್ಥರಾಗಿ ಪಿ.ಎನ್.ಎನ್ ಎಂ ಶೋರನೂರು ಹಾಗೂ ಮಣಿಪಾಲದ ಮುನಿಯಾಲ್ ಆಯುರ್ವೇದ ವೈದ್ಯಕೀಯ ಸಂಸ್ಥೆಗಳಲ್ಲೂ ಇದ್ದು ಈಗ ಕಣಚೂರಿನ ಆಯುರ್ವೇದ ಆಸ್ಪತ್ರೆಯಲ್ಲಿ ಸೇವಾ ನಿರತರಾಗಿದ್ದಾರೆ. ಕುವೆಂಪು, ರಾಜೀವಗಾಂಧಿ, ಮಂಗಳೂರು ವಿಶ್ವ ವಿದ್ಯಾಲಯಗಳಲ್ಲೂ ವಿವಿಧ ವಿಭಾಗಗಳಲ್ಲಿ ಇವರು ಸೇವೆ ಸಲ್ಲಿಸಿದ್ದಾರೆ.
ಆಯುರ್ವೇದ ಹಾಗೂ ಅಲೋಪಥಿ ತಜ್ಞರೂ ಆಗಿ ಮಿಶ್ರಪದ್ಧತಿಯಲ್ಲಿ ಮೂತ್ರದ ಕಲ್ಲು, ಮೂಲವ್ಯಾಧಿ ಹಾಗೂ ಚರ್ಮರೋಗಗಳಲ್ಲೂ ಕ್ಷಾರ ಚಿಕಿತ್ಸೆ,ಅಗ್ನಿ ಕರ್ಮ,ರಕ್ತಮೋಕ್ಷಣ ಮುಂತಾದ ವಿಧಾನಗಳಿಂದ ಸಹಸ್ರಾರು ರೋಗಿಗಳನ್ನು ಗುಣಮುಖ ಮಾಡಿರುತ್ತಾರೆ.
ಇದಲ್ಲದೆ ಜೇಸಿ, ರೋಟರಿ, ಲಯನ್ಸ್, ಮೂಡಬಿದ್ರಿ ಡಾಕ್ಟರ್ ಎಸೋಸಿಯೇಶನ್ ಮತ್ತು ಚುಟುಕು ಸಾಹಿತ್ಯ ಪರಿಷತ್ತು, ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ, ಕನ್ನಡ ಸಾಹಿತ್ಯ ಪರಿಷತ್ತು ಮುಂತಾದ ಸಂಸ್ಥೆಗಳಲ್ಲೂ ವಿವಿಧ ಹದ್ದೆಗಳ ಸಹಿತ ಸೇವೆ ಸಲ್ಲಿಸುತ್ತಿದ್ದಾರೆ.
ಮೇಲಾಗಿ 2022 ರ ಬಂಟ್ವಾಳ ತಾಲೂಕು ಸಾಹಿತ್ಯ ಪರಿಷತ್ತಿನ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರಲ್ಲದೆ ಬದಲಾಗದವರು ಎಂಬ ಚಲನಚಿತ್ರದಲ್ಲೂ ನಟಿಸಿದ ಇವರು ಹಲವಾರು ರೇಡಿಯೋ ಹಾಗೂ ದೂರದರ್ಶನಗಳಲ್ಲೂ ಸಂದರ್ಶನ ನೀಡಿದ್ದಾರೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ